Asianet Suvarna News Asianet Suvarna News

ರಾಜ್ಯ ಸರ್ಕಾರದ ವಿರುದ್ಧ ಹೋರಾಟ: ಪ್ರತಿಭಟನೆಗೆ ಮುಂದಾಗಿದ್ದ ಕಾಂಗ್ರೆಸ್‌ಗೆ ಶಾಕ್..!

ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ಮಾಡಲು ಅನುಮತಿ ನಿರಾಕರಣೆ| ಭದ್ರತಾ ದೃಷ್ಟಿಯಿಂದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ಮಾಡದಂತೆ ಪೊಲೀಸರ ಸೂಚನೆ| ಬ್ಯಾರಿಕೇಡ್‌ಗಳಿಗೆ ಸೂಚನಾ ಪತ್ರವನ್ನ ಅಂಟಿಸಿದ ಪೊಲೀಸರು|

Denial of police permission to Congress Protest Against State Government
Author
Bengaluru, First Published May 20, 2020, 11:36 AM IST

ಬೆಂಗಳೂರು(ಮೇ.20): ಮಾರಕ ಕೊರೋನಾ ನಿರ್ವಹಣೆಯಲ್ಲಾದ ವಿಫಲ ಹಾಗೂ ಇತ್ತೀಚಿನ ಎಪಿಎಂಸಿ ಸುಗ್ರೀವಾಜ್ಞೆಯಂಹ ರಾಜ್ಯ ಸರ್ಕಾರದ ಕ್ರಮಗಳ ವಿರುದ್ಧ ಹೋರಾಟ ಸಂಘಟಿಸುವ ಉದ್ದೇಶದಿಂದ ಇಂದು(ಬುಧವಾರ) ವಿಧಾನಸೌಧದ ಎದುರು ಪ್ರತಿಭಟನೆಗೆ ಮುಂದಾಗಿದ್ದ ಕಾಂಗ್ರೆಸ್‌ಗೆ ಪೊಲೀಸರು ಶಾಕ್‌ ಕೊಟ್ಟಿದ್ದಾರೆ.

"

ವಿಧಾನಸೌಧದ ಮುಂಭಾಗ ಗಾಂಧಿ ಪ್ರತಿಮೆ ಬಳಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ಕಾಂಗ್ರೆಸ್ ಶಾಸಕರು ಮುಂದಾಗಿದ್ದರು. ಆದರೆ, ಭದ್ರತಾ ದೃಷ್ಟಿಯಿಂದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ಮಾಡದಂತೆ ಪೊಲೀಸರು ಸೂಚನೆ ನೀಡಿದ್ದಾರೆ. ಈ ಸಂಬಂಧ ಬ್ಯಾರಿಕೇಡ್‌ಗಳಿಗೆ ಪೊಲೀಸರು ಸೂಚನಾ ಪತ್ರವನ್ನ ಅಂಟಿಸಿದ್ದಾರೆ.  

Denial of police permission to Congress Protest Against State Government

'ಕೊರೋನಾ ಹರಡಲು ಪ್ರಧಾನಿ ನರೇಂದ್ರ ಮೋದಿ ಕಾರಣ'

Denial of police permission to Congress Protest Against State Government

ಪೊಲೀಸರ ಅನುಮತಿ ನಿರಾಕರಣೆ ಮಧ್ಯೆಯೂ ಕಾಂಗ್ರೆಸ್ ಶಾಸಕರು ಪ್ರತಿಭಟನೆಗೆ ಸಿದ್ಧರಾಗಿದ್ದಾರೆ.   ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ಶಾಸಕರು, ಪರಿಷತ್ ಸದಸ್ಯರು ಸೇರಿದಣತೆ ಮತ್ತಿತರ ನಾಯಕರು ಆಗಮಿಸಿದ್ದಾರೆ.
 

Follow Us:
Download App:
  • android
  • ios