ದಾವಣಗೆರೆಯ ಡಿಸಿ - ಸಿಇಒ ಮದುವೆ : ಒಂದಾಗುತ್ತಿದೆ ಪ್ರೀತಿ
ಇಲ್ಲೊಂದು ಅಪರೂಪದ ಪ್ರೀತಿಯು ಒಂದಾಗುತ್ತಿದೆ. ದಾವಣಗೆರೆ ಜಿಲ್ಲಾಧಿಕಾರಿ ಹಾಗೂ ಇಲ್ಲಿನ ಸಿಇಒ ಇದೇ ಪ್ರೇಮಿಗಳ ದಿನದಂದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.
ದಾವಣಗೆರೆ: ಇದು ಬಹು ಅಪರೂಪದ ಪ್ರಸಂಗ. ಕಳೆದ ನಾಲ್ಕು ವರ್ಷಗಳಿಂದ ಪ್ರೇಮಿಗಳಾಗಿದ್ದ ಐಎಎಸ್ ಅಧಿಕಾರಿಗಳಿಬ್ಬರು ಇದೀಗ ಸಪ್ತಪದಿ ತುಳಿಯಲು ಅಣಿಯಾಗಿದ್ದಾರೆ.
"
ರಾಜ್ಯದಲ್ಲಿ ಶೌಚಾಲಯ ನಿರ್ಮಾಣದ ಮೂಲಕ ಕ್ರಾಂತಿಯನ್ನೇ ಮಾಡಿದ್ದ ಜಿಪಂ ಸಿಇಒ ಎಸ್.ಅಶ್ವತಿ ಹಾಗೂ ದಾವಣ ಗೆರೆ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಫೆ. 14ರ ಪ್ರೇಮಿಗಳ ದಿನಾಚರಣೆಯಂದು ಕೇರಳದ ಕಲ್ಲಿಕೋಟೆಯಲ್ಲಿ ದಾಂಪತ್ಯ ಜೀವನಕ್ಕೆ ಅಡಿ ಇಡಲಿದ್ದಾರೆ.
ಜನ ಸ್ನೇಹಿ ಅಧಿಕಾರಿಯೆಂದೇ ಗುರುತಿಸಲ್ಪಡುವ ಸಿಇಒ ಅಶ್ವತಿ ಐಎಎಸ್ ಅಧಿಕಾರಿಯೊಬ್ಬರನ್ನು ವಿವಾಹವಾಗಲಿದ್ದಾರೆ ಎಂಬ ವಿಚಾರ ಕಳೆದ 2 - 3 ತಿಂಗಳಿನಿಂದಲೂ ಹರಿದಾಡುತ್ತಿತ್ತು. ಆದರೆ ವರ ಯಾರು ಎಂಬ ವಿಚಾರ ಯಾರಿಗೂ ತಿಳಿದಿರಲಿಲ್ಲ. ಎಸ್. ಅಶ್ವತಿ ಕಲ್ಲಿಕೋಟೆಯವರಾದರೆ, ಬಗಾದಿ ಗೌತಮ್ ವಿಶಾಖಪಟ್ಟಣ ಮೂಲದವರು.