Asianet Suvarna News Asianet Suvarna News

ಪುಸ್ತಕ ಕಳಿಸ್ತೀನಿ, ಓದಿ ಚರ್ಚಿಸಲಿ: ಸಿದ್ದುಗೆ ಸಿಟಿ ರವಿ ಸವಾಲು

ಸಾವ​ರ್ಕರ್‌ ಬಗ್ಗೆ ಮಾಜಿ ಮುಖ್ಯ​ಮಂತ್ರಿ ಸಿದ್ದ​ರಾ​ಮಯ್ಯಗೆ ಸತ್ಯ ಗೊತ್ತಾ​ಗ​ಬೇ​ಕಿದ್ದು ಕೂಡಲೇ ಅವರು ಸಾವರ್ಕರ್‌ ಅವರ ಆತ್ಮಕಥನವಾದ ‘ಆತ್ಮಾಹುತಿ’ ಓದಬೇಕು ಎಂದು ಸಚಿವ ಸಿ.ಟಿ.ರವಿ ಹೇಳಿದ್ದಾರೆ. ಬೆಂಗ​ಳೂ​ರಿಗೆ ಹೋಗಿ ಸಿದ್ದ​ರಾ​ಮ​ಯ್ಯ​ನ​ವ​ರಿಗೆ ‘ಆತ್ಮಾ​ಹುತಿ’ ಪುಸ್ತಕ ಕಳು​ಹಿಸಿ ಕೊಡು​ತ್ತೇನೆ. ಸಾವ​ರ್ಕರ್‌ ಬಗ್ಗೆ ಚರ್ಚೆ ನಡೆ​ಸಲಿ ಎಂದು ಸವಾಲು ಹಾಕಿದ್ದಾರೆ.

ct ravi challenges siddaramaiah to read aathmahuthi book
Author
Bangalore, First Published Oct 24, 2019, 10:24 AM IST

ಧಾರ​ವಾ​ಡ(ಅ.24): ಸಾವ​ರ್ಕರ್‌ ಬಗ್ಗೆ ಮಾಜಿ ಮುಖ್ಯ​ಮಂತ್ರಿ ಸಿದ್ದ​ರಾ​ಮಯ್ಯಗೆ ಸತ್ಯ ಗೊತ್ತಾ​ಗ​ಬೇ​ಕಿದ್ದು ಕೂಡಲೇ ಅವರು ಸಾವರ್ಕರ್‌ ಅವರ ಆತ್ಮಕಥನವಾದ ‘ಆತ್ಮಾಹುತಿ’ ಓದಬೇಕು. ಆತ್ಮಕಥನ ಓದಿ, ಸಾವರ್ಕರ್‌ ಯಾವ ಕಾರಣಕ್ಕಾಗಿ ಅಭಿ​ನವ ಭಾರತ ಸಂಘ​ಟ​ನೆ ಕಟ್ಟಿ​ದರು ಎಂಬು​ದನ್ನು ತಿಳಿ​ದು​ಕೊ​ಳ್ಳಬೇಕು ಎಂದು ಪ್ರವಾ​ಸೋ​ದ್ಯಮ ಸಚಿವ ಸಿ.ಟಿ.ರವಿ ಹೇಳಿದ್ದಾರೆ.

ನಗರದಲ್ಲಿ ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿ​ದ ಅವ​ರು, ಬೆಂಗ​ಳೂ​ರಿಗೆ ಹೋಗಿ ಸಿದ್ದ​ರಾ​ಮ​ಯ್ಯ​ನ​ವ​ರಿಗೆ ‘ಆತ್ಮಾ​ಹುತಿ’ ಪುಸ್ತಕ ಕಳು​ಹಿಸಿ ಕೊಡು​ತ್ತೇನೆ. ಸಾವ​ರ್ಕರ್‌ ಬಗ್ಗೆ ಚರ್ಚೆ ನಡೆ​ಸಲಿ ಎಂದು ಸವಾಲು ಹಾಕಿದ್ದಾರೆ.

ಧಾರ​ವಾಡ: ಪ್ರವಾ​ಸೋ​ದ್ಯಮ ನೀತಿ ರೂಪಿ​ಸಲು ಚಿಂತನೆ

ಸಾವರ್ಕರ್‌ಗೆ ಉಗಿದರೆ ಅದು ಅವರ ಮುಖಕ್ಕೆ ತಾವೇ ಉಗಿದುಕೊಂಡಂತಾಗು​ತ್ತದೆ. ಇವರು ಸಾವರ್ಕರ್‌ ಬಗ್ಗೆ ಮಾತನಾಡಿ ತಮಗೆ ತಾವೇ ಅಪಮಾನ ಮಾಡಿಕೊಳ್ಳುತ್ತಿದ್ದಾರೆ. ಗಾಂಧೀಜಿ ಮೇಲೆ ಗೋಡ್ಸೆ ಗುಂಡು ಹಾರಿಸಿರುವುದು ಸತ್ಯ. ಆದರೆ, ಗಾಂಧೀಜಿಯನ್ನು ಜನಮಾನಸದಿಂದ ದೂರ ಮಾಡಿದವರು ಯಾರು? ಈ ಬಗ್ಗೆಯೂ ಚರ್ಚೆ ಆಗಬೇಕಿದೆ ಎಂದಿದ್ದಾರೆ.

ಯಾವ ಕಾಂಗ್ರೆಸ್ಸಿಗರು ಗಾಂಧೀಜಿಯವರ ಹೆಸರು ಇಟ್ಟುಕೊಂಡಿ​ದ್ದಾರೋ ಅವರೇ ಗಾಂಧೀಜಿ ತತ್ವ​ಗಳ ಅಡಿ ಬದು​ಕು​ತ್ತಿ​ದ್ದಾರಾ? ಎಂಬುದು ಸಹ ಚರ್ಚೆ​ಯಾ​ಗಬೇಕು. ಗಾಂಧೀಜಿಯವರ ಪಕ್ಷ ನಮ್ಮದು ಎಂದು ಗಾಂಧೀಜಿಯ ರಾಜಕೀಯ ವಾರಸುದಾರರು ಎಂದು ಹೇಳಿ​ಕೊ​ಳ್ಳುವ ಕಾಂಗ್ರೆ​ಸ್ಸಿ​ಗರು ನಿಜಕ್ಕೂ ಅವರ ತತ್ವದ ವಾರ​ಸು​ದಾ​ರರೇ ಎಂದು ಪ್ರಶ್ನಿ​ಸಿ​ದ್ದಾರೆ.

 

Follow Us:
Download App:
  • android
  • ios