Asianet Suvarna News Asianet Suvarna News

Covid Vaccine ಸತ್ತ ವ್ಯಕ್ತಿಗೆ ಕೊರೋನಾ 2ನೇ ಡೋಸ್, ಸರ್ಟಿಫಿಕೆಟ್ ನೋಡಿ ಕುಟುಂಬಸ್ಥರು ಶಾಕ್

* ಸತ್ತ ವ್ಯಕ್ತಿಗೆ ಕೊರೋನಾ ಎರಡನೇ ಡೋಸ್ ಹಾಕಿದ್ರಾ ಆರೋಗ್ಯ ಇಲಾಖೆ!
* 6 ತಿಂಗಳ ಹಿಂದೆಯೇ ಸತ್ತ ವ್ಯಕ್ತಿಗೆ ಕೊರೋನಾ ಲಸಿಕೆ ಸರ್ಟಿಫಿಕೇಟ್
* ಜೀವಂತವಿರುವ ವ್ಯಕ್ತಿಗೆ ತಹಶೀಲ್ದಾರ್​ ಮರಣ ಪ್ರಮಾಣ ಪತ್ರ ವಿತರಣೆ

Covid Vaccine certificate generates On Name Who Died 6 Months Back at Tumakuru rbj
Author
Bengaluru, First Published Jan 30, 2022, 6:54 PM IST

ತುಮಕೂರು, (ಜ.30): ಜೀವಂತವಿರುವ ವ್ಯಕ್ತಿಗೆ ತಹಶೀಲ್ದಾರ್​ ಮರಣ ಪ್ರಮಾಣ ಪತ್ರ (Death Certificate) ವಿತರಿಸಿ ಮಹಾಯಡವಟ್ಟೊಂದನ್ನು ಮಾಡಿಕೊಂಡಿದ್ರೆ, ಮತ್ತೊಂದೆಡೆ ಮರಣ ಹೊಂದಿದ್ದ ವ್ಯಕ್ತಿಗೆ ಎರಡನೇ ಡೋಸ್ ಕೋವಿಡ್ ಲಸಿಕೆ ಪಡೆದಿದ್ದ ಪ್ರಮಾಣಪತ್ರ(Covid Vaccine Certificate) ನೀಡಲಾಗಿದೆ.

ಕೆಲಸದಲ್ಲಿ ಜಾಗೃತೆ ಇಲ್ಲದಿದ್ದರೆ ಎಂತಹ ಯಡವಟ್ಟುಗಳಾಗುತ್ತವೆ ಎಂಬುದಕ್ಕೆ ಈ ಎರಡು ಪ್ರಕರಣಗಳು ತಾಜಾ ಉದಾಹರಣೆಯಾಗಿದೆ.

Omicron Threat: ಲಸಿಕೆ ಹಾಕಿಸದವರಿಗೆ ಶಾಕಿಂಗ್ ನ್ಯೂಸ್ ಕೊಟ್ಟ WHO!

ಸತ್ತ ವ್ಯಕ್ತಿಗೆ ಕೊರೋನಾ 2ನೇ ಡೋಸ್ ಸರ್ಟೀಫಿಕೆಟ್
6 ತಿಂಗಳ ಹಿಂದೆ ಮರಣ ಹೊಂದಿದ್ದ ವ್ಯಕ್ತಿಗೆ ಎರಡನೇ ಡೋಸ್ ಕೋವಿಡ್ ಲಸಿಕೆ ಪಡೆದಿದ್ದ ಸರ್ಟಿಫಿಕೆಟ್ ನೀಡಲಾಗಿದೆ. ತುಮಕೂರು ಆರೋಗ್ಯ ಇಲಾಖೆ ಮಹಾ ಎಡವಟ್ಟು ಮಾಡಿದೆ.

ತುಮಕೂರು ನಗರದ ಮೆಳೆಕೋಟೆ ನಿವಾಸಿ ಬಸಪ್ಪ(80) 2021ರ ಏಪ್ರಿಲ್ 9ರಂದು ಮೊದಲ ಡೋಸ್ ತೆಗೆದುಕೊಂಡಿದ್ದರು. ಈ ನಡುವೆ ಜು.16 ರಂದು ಅವರು ಮೃತಪಟ್ಟಿದ್ದಾರೆ. ಆದರೆ ನಿನ್ನೆ (ಜ.29) ಎರಡನೇ ಡೋಸ್ ತೆಗೆದುಕೊಂಡಿರುವ ಬಗ್ಗೆ ಮೆಸೆಜ್ ಬಂದಿದೆ. ಸಂಬಂಧಿಕರು ಸೈಟ್ ಓಪನ್ ಮಾಡಿದಾಗ ಸರ್ಟಿಫಿಕೆಟ್ ಅಪ್‍ಡೇಟ್ ಆಗಿತ್ತು.

ವ್ಯಕ್ತಿ ಮರಣ ಹೊಂದಿ 6 ತಿಂಗಳಾದರೂ ಸತ್ತ ವ್ಯಕ್ತಿಗೆ ಹೇಗೆ ಲಸಿಕೆ ಕೊಟ್ರು ಎಂದು ಮೃತ ಬಸವಪ್ಪನ ಕುಟುಂಬ ಆಶ್ಚರ್ಯ ವ್ಯಕ್ತಪಡಿಸಿದೆ. ಜೊತೆಗೆ ಲಸಿಕೆ ನೀಡುವುದರಲ್ಲಿ ಆರೋಗ್ಯ ಇಲಾಖೆ ಮೇಲೆ ಅನುಮಾನಗಳು ವ್ಯಕ್ತವಾಗಿವೆ.

ಬದುಕಿರೋ ರೈತನಿಗೆ ಮರಣ ಪ್ರಮಾಣ ವಿತರಣೆ
ಕೋಲಾರ: ಬದುಕಿರುವ ರೈತನಿಗೆ ಕಂದಾಯ ಇಲಾಖೆಯ ಅಧಿಕಾರಿಗಳು ಮರಣ ಪ್ರಮಾಣ‌ ಪತ್ರ ನೀಡಿದ ವಿಲಕ್ಷಣ ಘಟನೆ, ಜಿಲ್ಲೆಯ ಮುಳಬಾಗಲು ತಾಲೂಕಿನ ಎಂ.ಹೊಸಹಳ್ಳಿ ಗ್ರಾಮದಲ್ಲಿ ವರದಿಯಾಗಿದೆ.

ಜೀವಂತವಿರುವ ವ್ಯಕ್ತಿಗೆ ತಹಶೀಲ್ದಾರ್​ ಮರಣ ಪ್ರಮಾಣ ಪತ್ರ ವಿತರಿಸಿ ಮಹಾಯಡವಟ್ಟೊಂದನ್ನು ಮಾಡಿಕೊಂಡು ಸುದ್ದಿಯಲ್ಲಿದ್ದಾರೆ. ಗ್ರಾಮದ ಶಿವರಾಜ್​ ಎಂಬಾತರಿಗೆ ತಹಶೀಲ್ದಾರ್​ ಮರಣ ಪ್ರಮಾಣ ಪತ್ರ ವಿತರಸಿದ್ದಾರೆ.

 ಪಡಿತರ ತರಲು ಹೋದ ವೇಳೆ ರೈತ ಶಿವರಾಜ್​ಗೆ ಈ ವಿಷಯ ಗೊತ್ತಾಗಿದ್ದು ರೈತ ಅಚ್ಚರಿಗೊಳಗಾಗಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಮುಳಬಾಗಿಲು ಪೊಲೀಸ್​ ಠಾಣೆಗೆ ಆಗಮಿಸಿ ಅಧಿಕಾರಿಗಳ ವಿರುದ್ಧ ಕೇಸ್​ ದಾಖಲಿಸಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹಿಂದಿನ ತಹಶೀಲ್ದಾರ್​ ಜಿ.ರಾಜಶೇಖರ್, ಗ್ರಾಮ ಲೆಕ್ಕಿಗ ಅರವಿಂದ, ಕಂದಾಯ ನಿರೀಕ್ಷಿಕ ಸಾದತ್ ವುಲ್ಲಾ ಖಾನ್, ನಾಡಕಚೇರಿ ಶಿರೇಸ್ತೆದಾರ್ ಜಯರಾಂ ವಿರುದ್ದ ಎಫ್​ಐಆರ್​ ದಾಖಲಿಸಿದ್ದಾರೆ.

Follow Us:
Download App:
  • android
  • ios