Asianet Suvarna News Asianet Suvarna News

ಚಾಮರಾಜನಗರ ಆಕ್ಸಿಜನ್ ದುರಂತ : ಮೈಸೂರು ಡೀಸಿಗೆ ಕ್ಲೀನ್‌ ಚಿಟ್

  • ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ದುರಂತ
  • ಚಾಮರಾಜನಗರ ಡಿಸಿ ರವಿ ಅವರೇ ನೇರ ಹೊಣೆ ಎಂದು ನಿವೃತ್ತ ನ್ಯಾಯಾಧೀಶರ ಆಯೋಗ ವರದಿ
  • ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಗೆ ಕ್ಲೀನ್‌ಚಿಟ್
chamarajanagar Oxygen Tragedy Clean Chit for Mysuru DC Rohini sindhuri snr
Author
Bengaluru, First Published May 13, 2021, 11:41 AM IST

 ಚಾಮರಾಜನಗರ (ಮೇ.13): ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಮೇ 2 ರಂದು ನಡೆದ ಆಕ್ಸಿಜನ್​ ದುರಂತಕ್ಕೆ ಚಾಮರಾಜನಗರ ಡಿಸಿ ರವಿ ಅವರೇ ನೇರ ಹೊಣೆ ಎಂದು ನಿವೃತ್ತ ನ್ಯಾಯಾಧೀಶರ ಆಯೋಗ ವರದಿ ನೀಡಿದೆ. ಈ ಪ್ರಕರಣ ಸಂಬಂಧ ಮೈಸೂರು ಜಿಲ್ಲಾಧಿಕಾರಿಗೆ ಕ್ಲೀನ್‌ಚಿಟ್ ನೀಡಿದೆ. 

ನಿವೃತ್ತ ನ್ಯಾಯಾಧೀಶ ಎನ್. ವೇಣುಗೋಪಾಲ್ ನೇತೃತ್ವದ ಸಮಿತಿ ಹೈ ಕೋರ್ಟ್‌ಗೆ ವರದಿ ನೀಡಿದ್ದು, ಈ ಪ್ರಕರಣದಲ್ಲಿ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ತಪ್ಪಿಲ್ಲ. ಇದಕ್ಕೆ ಚಾಮರಾಜನಗರ ಜಿಲ್ಲಾಧಿಕಾರಿಯೇ ನೇರ ಹೊಣೆ. ಅವರ ಮುಂಜಾಗೃತೆ ಕೊರತೆಯಿಂದ ದುರಂತವಾಗಿದೆ.  ತಮ್ಮ ವೈಫಲ್ಯ ಮುಚ್ಚಿಹಾಕಲು ಆರೋಪ ಹೊರಿಸುವುದು ಸರಿಯಲ್ಲ ಎಂದು ಹೇಳಿದೆ. 

ಚಾಮರಾಜನಗರ ದುರಂತ: ಅನುಮಾನ ಮೂಡಿಸುತ್ತಿದೆ ಡಿಸಿಗಳ ದ್ವಂದ್ವ ಹೇಳಿಕೆ ..

ವರದಿ ಸಾರಾಂಶ :  ಮೈಸೂರು ಜಿಲ್ಲಾಧಿಕಾರಿ ವಿರುದ್ಧ ಆಕ್ಸಿಜನ್​ ಸಪ್ಲೈಗೆ ತಡೆ ಕೊಟ್ಟಿದ್ದಕ್ಕೆ  ಯಾವುದೇ ಸಾಕ್ಷ್ಯಗಳಿಲ್ಲ. ಜಿಲ್ಲಾಸ್ಪತ್ರೆ, ಜಿಲ್ಲಾಡಳಿತ ಮೊದಲೇ ಎಚ್ಚೆತ್ತುಕೊಳ್ಳಬೇಕಿತ್ತು.  ಆಕ್ಸಿಜನ್​ ಪ್ಲಾಂಟ್​ ಜಿಲ್ಲೆಯಿಂದ 70 ಕಿ.ಮೀ ದೂರವಿದೆ.  ಮೈಸೂರಿನಿಂದ ಆಕ್ಸಿಜನ್​​ ತುಂಬಿಸಿ ಜಿಲ್ಲೆಗೆ ಸಾಗಿಸಬೇಕಿತ್ತು ಎಂದು ಹೈಕೋರ್ಟ್​ಗೆ ನಿವೃತ್ತ ನ್ಯಾಯಮೂರ್ತಿಗಳ ವರದಿ ತಿಳಿಸಿದೆ.

ಚಾಮರಾಜನಗರ ಆಕ್ಸಿಜನ್‌ ದುರಂತಕ್ಕೆ ಪರಿಹಾರ : ಹೈಕೋರ್ಟ್‌ ಸೂಚನೆ

ಜಿಲ್ಲಾಸ್ಪತ್ರೆಯ ಮಾಹಿತಿ ಪ್ರಕಾರ ಆಕ್ಸಿಜನ್​ ಇರಲಿಲ್ಲ. ಚಾಮರಾಜನಗರ ದುರಂತಕ್ಕೆ ಆಕ್ಸಿಜನ್​ ಇಲ್ಲದಿರುವುದೇ ಕಾರಣ. ಮೇ 2ರ ರಾತ್ರಿ 11ರಿಂದ ಮೇ 3ರ ಬೆಳಗಿನವರೆಗೆ ಆಕ್ಸಿಜನ್​ ಇರಲಿಲ್ಲ.  ಆಕ್ಸಿಜನ್​ ಪಡೆದುಕೊಳ್ಳುವಲ್ಲಿ ಜಿಲ್ಲಾಸ್ಪತ್ರೆ ವಿಫಲವಾಗಿದೆ ಎಂದು ಹೇಳಿದೆ. 

24 ಗಂಟೆಯಲ್ಲಿ ಆಸ್ಪತ್ರೆಯಲ್ಲಿ ಸಂಭವಿಸಿದ 24 ಜನ ಕೋವಿಡ್ ಸೋಂಕಿತರ ಸಾವಿಗೂ ಆಕ್ಸಿಜನ್​ ಕೊರತೆಯೆ ಕಾರಣ. ಆಕ್ಸಿಜನ್​ ಕೊರತೆಯಿಂದಾಗಿ ಮೆದುಳು ಘಾಸಿಯಾಗಿದೆ. ದೇಹದ ಇತರ ಭಾಗಗಳಿಗೂ ಹಾನಿಯಾಗಿದೆ​​. ಇದರಿಂದ ಅವಘಡ ಸಂಭವಿಸಿದೆ ಎಂದು ನಿವೃತ್ತ ನ್ಯಾಯಮೂರ್ತಿಗಳ ಆಯೋಗ ಹೈಕೋರ್ಟ್​ಗೆ ವರದಿ ಸಲ್ಲಿಸಿದೆ. 

ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ‌ ಮತ್ತೊಂದು ಎಡವಟ್ಟು ...

ನಾವು ಮೈಸೂರು ಜಿಲ್ಲಾಧಿಕಾರಿ ಬಳಿ ಆಕ್ಸಿಜನ್ ಕೇಳಿದ್ದು ಸೂಕ್ತ ಸಮಯಕ್ಕೆ ದೊರಕಿಸದೇ ಇರುವುದು ಈ ದುರಂತಕ್ಕೆ ಕಾರಣ ಎಂದು ಚಾಮರಾಜನಗರ ಜಿಲ್ಲಾಧಿಕಾರಿ ರವಿ ಆರೋಪ ಮಾಡಿದ್ದರು. ಇದೀಗ ವರದಿಯಲ್ಲಿ  ಮೈಸೂರು ಡೀಸಿಗೆ ಕ್ಲೀನ್‌ ಚಿಟ್ ನೀಡಿದ್ದು, ಚಾಮರಾಜನಗರ ಜಿಲ್ಲಾಧಿಕಾರಿಯೇ ಹೊಣೆ  ಎಂದು ವರದಿಯಲ್ಲಿ ತಿಳಿಸಲಾಗಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Follow Us:
Download App:
  • android
  • ios