Asianet Suvarna News Asianet Suvarna News

ಜನರ ಮೇಲೆ ಸಾಲ ಹೊರಿಸಿ ಬಜೆಟ್‌ ಮಂಡಿಸುವ ಅಗತ್ಯ ಏನಿತ್ತು: ಎನ್‌ಆರ್‌ ರಮೇಶ್ ಕಿಡಿ

ರಾಜ್ಯದ ಪ್ರತಿ ಪ್ರಜೆಯ ತಲೆಗೆ ₹28,821 ಮೊತ್ತದ ಸಾಲದ ಹೊರೆ ಹೊರಿಸಿ ಆಯವ್ಯಯವನ್ನು ಮಡಿಸುವ ಅಗತ್ಯವೇನಿತ್ತು ಎಂದು ಬಿಜೆಪಿ ಮುಖಂಡ ಎನ್‌.ಆರ್‌.ರಮೇಶ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದ್ದಾರೆ.

BJP leader NR Ramesh criticizes against Karnataka budget 2024 Bengaluru rav
Author
First Published Feb 20, 2024, 1:12 PM IST

ಬೆಂಗಳೂರು (ಫೆ.20) :  ರಾಜ್ಯದ ಪ್ರತಿ ಪ್ರಜೆಯ ತಲೆಗೆ ₹28,821 ಮೊತ್ತದ ಸಾಲದ ಹೊರೆ ಹೊರಿಸಿ ಆಯವ್ಯಯವನ್ನು ಮಡಿಸುವ ಅಗತ್ಯವೇನಿತ್ತು ಎಂದು ಬಿಜೆಪಿ ಮುಖಂಡ ಎನ್‌.ಆರ್‌.ರಮೇಶ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದ್ದಾರೆ.

2024-25ನೇ ಸಾಲಿಗೆ ರಾಜ್ಯದ ₹3,71,383 ಕೋಟಿ ಬೃಹತ್ ಮೊತ್ತದ ಆಯವ್ಯಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿದ್ದಾರೆ. ಆದರೆ ಸರ್ಕಾರಕ್ಕೆ ಯಾವ ಮೂಲಗಳಿಂದ ಆದಾಯ ಬರುತ್ತದೆ ಎಂಬುದನ್ನು ಸ್ಪಷ್ಟಪಡಿಸಿಲ್ಲ. ಹೀಗಾಗಿ ಜನರ ತಲೆಗೆ ಸಾಲದ ಹೊರೆ ಹೊರಿಸಿ ಆಯವ್ಯಯ ಮಂಡಿಸುವ ಅಗತ್ಯವೇನಿತ್ತು ಎಂದು ರಮೇಶ್ ಆಕ್ಷೇಪಿಸಿದ್ದಾರೆ.

1 ಲಕ್ಷ ಕೋಟಿ ಸಾಲ ಮಾಡಿ 52 ಸಾವಿರ ಕೋಟಿ ಗ್ಯಾರೆಂಟಿಗೆ ನೀಡಿದ್ರೆ ಬಡವರ ಬಜೆಟ್ ಅಂತಾರಾ? ಸಿಎಂ ವಿರುದ್ಧ ಎಚ್‌ಡಿಕೆ ವಾಗ್ದಾಳಿ!

ಪ್ರಸುತ್ತ ಸರ್ಕಾರಕ್ಕೆ ವಿವಿಧ ಮೂಲಗಳಿಂದ ಲಭಿಸುತ್ತಿರುವುದು ಸುಮಾರು ₹2.10 ಲಕ್ಷ ಕೋಟಿ ಆದಾಯ ಬರುತ್ತದೆ. ಹೀಗಿದ್ದರೂ ವಾರ್ಷಿಕ ಆದಾಯಕ್ಕಿಂತಲೂ ಒಂದೂವರೆ ಪಟ್ಟು ಹೆಚ್ಚು ಮೊತ್ತದ ಆಯವ್ಯಯವನ್ನು ಮಂಡಿಸಿರುವುದು ನಿಜಕ್ಕೂ ಈ ನಾಡಿನ ದೌರ್ಭಾಗ್ಯವಾಗಿದೆ ಎಂದು ಕಿಡಿಕಾರಿದ್ದಾರೆ.

 

ಅಧಿಕಾರಕ್ಕಾಗಿ ಚುನಾವಣೆ ವೇಳೆ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿ ಈಗ ಅವುಗಳ ಕಾರ್ಯರೂಪಕ್ಕಿಳಿಸಲು ಮುಖ್ಯಮಂತ್ರಿಗಳು ಹೆಣಗಾಡುತ್ತಿದ್ದಾರೆ. ಕಳೆದ ಒಂಭತ್ತು ತಿಂಗಳಿಂದ ರಾಜ್ಯದ ಪ್ರಮುಖ 37 ಇಲಾಖೆಗಳ ಮೂಲಕ ಒಂದು ನಯಾಪೈಸೆಯ ಅಭಿವೃದ್ಧಿ ಕಾರ್ಯವನ್ನೂ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.

 

ಈ ಆಯವ್ಯಯವು ‘ಸಾಲ ಮಾಡಿಯಾದರೂ ತುಪ್ಪ ತಿನ್ನು’ ಎನ್ನುವಂತಿದೆ. ಸಿದ್ದರಾಮಯ್ಯನವರು ಎರಡನೇ ಬಾರಿಗೆ ಮುಖ್ಯಮಂತ್ರಿಗಳಾದ ನಂತರ ಕಳೆದ ಸಾಲಿನಲ್ಲಿ -2023-24 ರ ಸಾಲಿನಲ್ಲಿ ಒಟ್ಟು ₹85,818 ಕೋಟಿ ಸಾಲವನ್ನು ಮಾಡಿದ್ದರು. ಮತ್ತೆ ₹1.05 ಲಕ್ಷ ಕೋಟಿ ಸಾಲ ಮಾಡಲು ಮುಖ್ಯಮಂತ್ರಿಗಳು ಮುಂದಾಗಿದ್ದಾರೆ. ಈ ಬೃಹತ್ ಮೊತ್ತದ ಸಾಲವನ್ನು ತೆಗೆದುಕೊಂಡು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ ಎಂದು ದೂರಿದ್ದಾರೆ.

ಕರ್ನಾಟಕ ಬಜೆಟ್ ಸಾಮಾನ್ಯ ಅಲ್ಲ, ಐತಿಹಾಸಿಕ ಬಜೆಟ್: ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ

ಸ್ವಾರ್ಥದ ಬಜೆಟ್‌ಗಾಗಿರಾಜ್ಯದ ಜನರಿಗೆ ಬರೆ

ಪ್ರಸ್ತುತ ರಾಜ್ಯದ ಒಟ್ಟು ಜನಸಂಖ್ಯೆ 6,78,33,000 ಆಗಿದ್ದು, 2024-25 ರ ಸಾಲಿನಲ್ಲಿ ಆಯವ್ಯಯದಲ್ಲಿ ತಿಳಿಸಿರುವಂತೆ ₹1,05 ಮೊತ್ತದ ಸಾಲವನ್ನು ರಾಜ್ಯದ ಪ್ರತಿಯೊಬ್ಬ ಪ್ರಜೆಯ ತಲೆಗೆ ₹15,516 ಸಾಲ ಬರುತ್ತದೆ. ನಿಮ್ಮ ಸ್ವಾರ್ಥದ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲು ರಾಜ್ಯದ ಪ್ರತಿಯೊಬ್ಬ ಪ್ರಜೆಯ ಜೀವನದೊಂದಿಗೆ ಚೆಲ್ಲಾಟವಾಡೋದು ಸರಿಯಲ್ಲ ಎಂದು ಅವರು ಪ್ರಕಟಣೆ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Follow Us:
Download App:
  • android
  • ios