ಡಿಸೆಂಬರ್ ಒಳಗೆ ಬೆಂಗಳೂರು-ಚೆನ್ನೈ ಎಕ್ಸ್ಪ್ರೆಸ್ ವೇ ಪೂರ್ಣ: ಕೇಂದ್ರ ಸಚಿವ ನಿತಿನ್ ಗಡ್ಕರಿ
ರಾಷ್ಟ್ರೀಯ ಹೆದ್ದಾರಿ-774ರ ಕಾಮಗಾರಿಗೆ ತಮಿಳುನಾಡು ಸರ್ಕಾರ ಸೂಕ್ತ ಸಹಕಾರ ನೀಡಿದರೆ ಡಿಸೆಂಬರ್ 2024ರೊಳಗೆ ಮುಗಿಯಲಿದೆ. ರಸ್ತೆ ಕಾಮಗಾರಿಯಲ್ಲಿ ಆಗುತ್ತಿರುವ ತೊಂದರೆ ಕುರಿತು ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ನೊಂದಿಗೆ ಚರ್ಚಿಸಲಾಗಿದೆ, ಲೋಕಾರ್ಪಣೆಯಾದ ಬಳಿಕ ಉಭಯ ನಗರಗಳ ಸಂಚಾರದ ಅವಧಿ 2 ಗಂಟೆಗೆ ತಗ್ಗಲಿದೆ'' ಎಂದು ಮಾಹಿತಿ ನೀಡಿದ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ
![Bengaluru Chennai Expressway to be Completed by December Says Union Minister Nitin Gadkari grg Bengaluru Chennai Expressway to be Completed by December Says Union Minister Nitin Gadkari grg](https://static-ai.asianetnews.com/images/01hk5b5f3yt5xcctq1qwym8eck/nitin-gadkari_363x203xt.jpg)
ನವದೆಹಲಿ(ಫೆ.09): ವರ್ಷಾಂತ್ಯದೊಳಗೆ ಬೆಂಗಳೂರು ಮತ್ತು ಚೆನ್ನೈ ನಡುವಿನ ಗ್ರೀನ್ಫೀಲ್ಡ್ ಎಕ್ಸ್ಪ್ರೆಸ್ವೇ ನಿರ್ಮಾಣ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಪ್ರಕಟಿಸಿದ್ದಾರೆ.
ಲೋಕಸಭೆಯಲ್ಲಿ ಡಿಎಂಕೆ ಸಂಸದ ದಯಾನಿಧಿ ಮಾರನ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ''ರಾಷ್ಟ್ರೀಯ ಹೆದ್ದಾರಿ-774ರ ಕಾಮಗಾರಿಗೆ ತಮಿಳುನಾಡು ಸರ್ಕಾರ ಸೂಕ್ತ ಸಹಕಾರ ನೀಡಿದರೆ ಡಿಸೆಂಬರ್ 2024ರೊಳಗೆ ಮುಗಿಯಲಿದೆ. ರಸ್ತೆ ಕಾಮಗಾರಿಯಲ್ಲಿ ಆಗುತ್ತಿರುವ ತೊಂದರೆ ಕುರಿತು ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ನೊಂದಿಗೆ ಚರ್ಚಿಸಲಾಗಿದೆ, ಲೋಕಾರ್ಪಣೆಯಾದ ಬಳಿಕ ಉಭಯ ನಗರಗಳ ಸಂಚಾರದ ಅವಧಿ 2 ಗಂಟೆಗೆ ತಗ್ಗಲಿದೆ'' ಎಂದು ಮಾಹಿತಿ ನೀಡಿದರು.
2024ರ ಮಾರ್ಚ್ನಿಂದ ಜಿಪಿಎಸ್ ಆಧಾರಿತ ಟೋಲ್ ಕಲೆಕ್ಷನ್: ಗಡ್ಕರಿ
ಸದ್ಯ ಬೆಂಗಳೂರಿನಿಂದ ಚೆನ್ನೈ ನಡುವೆ ಸಂಚರಿಸಲು ಸುಮಾರು 5ರಿಂದ 6 ಗಂಟೆ ಬೇಕಾಗುತ್ತದೆ.