actor Darshan in Relaxed Mood in Jai: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್, ಚಾರ್ಜ್‌ಶೀಟ್ ಸಲ್ಲಿಕೆಯ ನಂತರ ನಿರಾಳರಾಗಿದ್ದಾರೆ. ವಿಚಾರಣೆ ದಿನಾಂಕ ನಿಗದಿಯಾದ ಹಿನ್ನೆಲೆಯಲ್ಲಿ, ಶೀಘ್ರದಲ್ಲೇ ಜಾಮೀನು ಸಿಗುವ ನಿರೀಕ್ಷೆಯಲ್ಲಿದ್ದು, ಸಹಚರರಿಗೆ ಧೈರ್ಯ ತುಂಬಿದ್ದಾರೆ.

ಬೆಂಗಳೂರು (ನ.4): ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರದ ಕ್ವಾರಂಟೈನ್ ಜೈಲಿನಲ್ಲಿರುವ ನಟ ದರ್ಶನ್ ತೂಗುದೀಪ, ಚಾರ್ಜ್‌ಶೀಟ್ ನಂತರ ರಿಲ್ಯಾಕ್ಸ್ ಮೂಡ್‌ನಲ್ಲಿದ್ದಾನೆ. ನಿನ್ನೇ ದೋಷಾರೋಪ ನಿಗದಿ ಪ್ರಕ್ರಿಯೆ ಮುಗಿದು, ಟ್ರಯಲ್ ದಿನಾಂಕ ನಿಗದಿಯಾದ ಹಿನ್ನೆಲೆಯಲ್ಲಿ ಮುಂದೊಂದು ದಿನ ಜಾಮೀನು ಸಿಕ್ಕಿ ಹೊರಬರುವ ನಿರೀಕ್ಷೆಯಲ್ಲಿ ದರ್ಶನ್ ಅಂಡ್ ಗ್ಯಾಂಗ್ ತಾಳ್ಮೆಯಿಂದ ಕಾಯುತ್ತಿದ್ದಾರೆ.

Add Asianetnews Kannada as a Preferred SourcegooglePreferred

ಇದನ್ನೂ ಓದಿ: ಬಾಡಿಹೋದ ಮುಖ, ಆತಂಕದ ಕಣ್ಣು.. ಜೈಲಲ್ಲಿ ಸೊರಗಿ ಸುಣ್ಣವಾದ ದಾಸ!

ನಿನ್ನೆ ಬೇಗ ಮಲಗಿ, ಬೇಗ ಎದ್ದ ದಾಸ

ನಿನ್ನೆ ಸಂಜೆ 5.40ರ ಸುಮಾರಿಗೆ ಕೋರ್ಟ್‌ನಿಂದ ಮತ್ತೆ ಜೈಲು ಸೇರಿದ್ದ ದರ್ಶನ್, ಪವಿತ್ರಾ ಮತ್ತು ದರ್ಶನ್ ಬೇರೆ ಬೇರೆ ವಾಹನಗಳಲ್ಲಿ ಜೈಲು ಸೇರಿದರು. ಕೋರ್ಟ್‌ಗೆ ಹೋಗಿ ಬಂದು ಆಯಾಸಗೊಂಡಿದ್ದ ದರ್ಶನ್, ರಾತ್ರಿ 9.30ಕ್ಕೆಲ್ಲ ಊಟ ಮಾಡಿ ಬೇಗನೇ ನಿದ್ರೆಗೆ ಜಾರಿದರು. ಜೈಲಿನ ಊಟ ಸೇರದೆ, ನಿದ್ರೆ ಇಲ್ಲದೆ ಸೊರಗಿ ಹೋಗಿರುವ ದಾಸ, ಈಗ ಕೊಂಚ ರಿಲ್ಯಾಕ್ಸ್‌ನಲ್ಲಿದ್ದಾರೆ. ಬೆಳಿಗ್ಗೆ 6 ಗಂಟೆಗೆ ನಿದ್ರೆಯಿಂದ ಎದ್ದು ಕೆಲ ಹೊತ್ತು ಬ್ಯಾರಕ್‌ನಲ್ಲಿಯೇ ವಾಕಿಂಗ್ ಮಾಡಿ ಬಿಸಿ ನೀರು ಕುಡಿದು ಸೆಲ್‌ನಲ್ಲಿ ರೆಸ್ಟ್ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ: ನಟ ದರ್ಶನ್ ವಿರುದ್ಧ ದೋಷಾರೋಪ ನಿಗದಿ ದಿನವೇ ಎರಡು ಮಹತ್ವದ ಬೆಳವಣಿಗೆ

ಜಾಮೀನು ಸಿಗುತ್ತೆ ತಾಳ್ಮೆಯಿಂದ ಇರೋಣ:

ನಿನ್ನೆ ಕೋರ್ಟ್‌ನಲ್ಲಿ ಡಿ-ಗ್ಯಾಂಗ್‌ ಜೊತೆ ಮಾತನಾಡಿರುವ ದರ್ಶನ್, 'ಜಾಮೀನು ಸಿಗುತ್ತದೆ, ತಾಳ್ಮೆಯಿಂದ ಇರೋಣ' ಎಂದು ಸಹಚರರಿಗೆ ಧೈರ್ಯ ತುಂಬಿದ್ದಾರೆ. ಜೊತೆಗೆ ಕೋರ್ಟ್‌ನಲ್ಲಿ ಪವಿತ್ರಾ ಗೌಡ ಮತ್ತು ದರ್ಶನ್ ಮಾತನಾಡಿದ್ದು, ಎಲ್ಲರಿಗೂ ಧೈರ್ಯದಿಂದ ಇರುವಂತೆ ಹೇಳಿರುವ ದರ್ಶನ್, ಸಹಬಂಧಿಗಳ ಜೊತೆಗೆ ಸೆಲ್‌ನಲ್ಲಿ ಮಾತನಾಡಿಕೊಂಡಿದ್ದಾರೆ. ಒಟ್ನಲ್ಲಿ ದೋಷಾರೋಪ ನಿಗದಿ ಮುಗಿದು ಟ್ರಯಲ್ ಡೇಟ್ ನಿಗದಿ ಹಿನ್ನೆಲೆಯಲ್ಲಿ ಡಿ-ಗ್ಯಾಂಗ್ ಕೊಂಚ ರಿಲ್ಯಾಕ್ಸ್‌ನಲ್ಲಿದೆ.