Asianet Suvarna News Asianet Suvarna News

ಅನುದಾನ ಬಳಸಿದರೆ ಕಲ್ಯಾಣ ಕರ್ನಾಟಕಕ್ಕೆ 3000 ಕೋಟಿ

  • ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಈಗ ನೀಡಲಾಗುತ್ತಿರುವ  1500 ಕೋಟಿ ಅನುದಾನ
  • 1500 ಕೋಟಿ ಅನುದಾನವನ್ನು ನಿಗದಿತ ಅವಧಿಯೊಳಗೆ ಸಮರ್ಪಕವಾಗಿ ಬಳಸಿದಲ್ಲಿ  3 ಸಾವಿರ ಕೋಟಿ ವಿಶೇಷ ಅನುದಾನ 
3000 Thousand Crore For kalyana karnataka says CM basavaraja bommai snr
Author
Bengaluru, First Published Oct 4, 2021, 7:55 AM IST

 ಬಳ್ಳಾರಿ (ಅ.04):  ಕಲ್ಯಾಣ ಕರ್ನಾಟಕ (Kalyana Karnataka ) ಪ್ರದೇಶಾಭಿವೃದ್ಧಿ ಮಂಡಳಿಗೆ ಈಗ ನೀಡಲಾಗುತ್ತಿರುವ  1500 ಕೋಟಿ ಅನುದಾನವನ್ನು ನಿಗದಿತ ಅವಧಿಯೊಳಗೆ ಸಮರ್ಪಕವಾಗಿ ಬಳಸಿದಲ್ಲಿ  3 ಸಾವಿರ ಕೋಟಿ ವಿಶೇಷ ಅನುದಾನವನ್ನು ಇದೇ ವರ್ಷದಿಂದ ಒದಗಿಸಲಾಗುವುದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraja  Bommai) ಭರವಸೆ ನೀಡಿದರು.

ನಗರದ ವೀರಶೈವ ವಿದ್ಯಾವರ್ಧಕ ಸಂಘದ ಎಸ್‌.ಕೆ. ಮೋದಿ (SK Modi) ನ್ಯಾಷನಲ್‌ ಸ್ಕೂಲ್‌ ಹಾಗೂ ಕಿಂಡರ್‌ ಗಾರ್ಡನ್‌ನ ನೂತನ ಕಟ್ಟಡಗಳನ್ನು ಉದ್ಘಾಟಿಸಿ ಮತ್ತು ಎಸ್‌.ಕೆ. ಮೋದಿ ಅವರ ಪ್ರತಿಮೆಯನ್ನು ಅನಾವರಣಗೊಳಿಸಿ ಮಾತನಾಡಿದರು. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ಪ್ರತಿ ವರ್ಷ ನೀಡಲಾಗುತ್ತಿರುವ 1500 ಕೋಟಿ ವಿಶೇಷ ಅನುದಾನವನ್ನು ಈವರೆಗೆ ಅವಧಿಯೊಳಗೆ ಖರ್ಚು ಮಾಡಲಾಗಿಲ್ಲ. ಅನುದಾನವನ್ನು ಮಾಚ್‌ರ್‍ ಅಂತ್ಯದೊಳಗೆ ಖರ್ಚು ಮಾಡುವುದಕ್ಕೆ ಹಾಗೂ ವಿಶೇಷ ಯೋಜನೆಗಳನ್ನು ರೂಪಿಸುವುದಕ್ಕೆ ಅಗತ್ಯ ಸಹಕಾರ ಸರ್ಕಾರ ನೀಡಲಿದೆ. ಸಮರ್ಪಕವಾಗಿ ಅನುದಾನ ಬಳಕೆ ಮಾಡುವ ಮೂಲಕ ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಬೇಕು ಎಂದು ಬೊಮ್ಮಾಯಿ ಹೇಳಿದರು.

ಸಿಎಂ ಬೊಮ್ಮಾಯಿಯಿಂದ ಗುಜರಾತ್ ಮಾದರಿ : ಹೇಗಿದೆ ಹೊಸ ಸೂತ್ರ..?

ಸಿಎಂ ಆಗ್ತೇನೆ ಅಂದ್ಕೊಂಡಿರ್ಲಿಲ್ಲ: ನಾನು ರಾಜ್ಯದ ಮುಖ್ಯಮಂತ್ರಿಯಾಗುತ್ತೇನೆ ಎಂದು ಅಂದುಕೊಂಡೇ ಇರಲಿಲ್ಲ. ನಾನು ಮುಖ್ಯಮಂತ್ರಿಯಾಗಲು ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಮತ್ತು ನಮ್ಮ ಹೈಕಮಾಂಡ್‌ ಕಾರಣ ಎಂದು ಬೊಮ್ಮಾಯಿ ಹೇಳಿದರು.

ಎಲ್ಲವೂ ದೈವೀಚ್ಛೆಯಂತೆ ನಡೆಯುತ್ತದೆ. ನೀವು ನನಗೆ ನೀಡಿರುವ ಜವಾಬ್ದಾರಿ ಬಹುದೊಡ್ಡದು. ಆ ಅರಿವು ನನಗೂ ಇದೆ. ನೀವು ನೀಡಿರುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತೇನೆ ಎಂದು ತಿಳಿಸಿದರು.

ವೀವಿ ಸಂಘದ ಅಭಿವೃದ್ಧಿಗೆ ಬದ್ಧ: ಶೈಕ್ಷಣಿಕ ಸೇವೆಯಲ್ಲಿ ನೂರು ವರ್ಷ ಪೂರೈಸಿರುವ ಬಳ್ಳಾರಿಯ ವೀರಶೈವ ವಿದ್ಯಾವರ್ಧಕ ಸಂಘದ ಸಮಗ್ರ ಅಭಿವೃದ್ಧಿಗೆ ಸರ್ಕಾರ ಸ್ಪಂದಿಸಲಿದೆ. ವಿವಿಧ ಹುದ್ದೆಗಳ ಭರ್ತಿಗೆ ಕ್ರಮಕೈಗೊಳ್ಳಲಿದೆ. ಮೆಡಿಕಲ್‌ ಕಾಲೇಜು ನಿರ್ಮಾಣಕ್ಕೆ ಸಂಬಂಧಿಸಿದ ಬೇಡಿಕೆಯನ್ನು ಪರಿಶೀಲಿಸಲಾಗುವುದು ಎಂದು ಇದೇ ವೇಳೆ ಬೊಮ್ಮಾಯಿ ಹೇಳಿದರು.

ಹಾಲು ಉತ್ಪಾದಕ ಬ್ಯಾಂಕಿಗೆ ನೆರವು

ರಾಜ್ಯದಲ್ಲಿ ಹಾಲು ಉತ್ಪಾದಕರ ಬ್ಯಾಂಕ್‌(Karnataka Milk Federation Bank) ತೆರೆದರೆ ರಾಜ್ಯ ಸರ್ಕಾರ 100 ಕೋಟಿ ರು. ಬಂಡವಾಳ ಹೂಡಲಿದೆ. ಒಂದು ವೇಳೆ ಬ್ಯಾಂಕ್‌ ಆರಂಭಗೊಂಡರೆ ಅದರಲ್ಲಿ ಹಾಲು ಉತ್ಪಾದಕರ ಕೊಡುಗೆಯೊಂದಿಗೆ ಬಾಹ್ಯ ಹೂಡಿಕೆಯೂ ಹೆಚ್ಚಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Chief Minister Basavaraj Bommai) ಸಲಹೆ ನೀಡಿದ್ದಾರೆ.

 ಹಾಲು ಉತ್ಪಾದಕರ ಮಹಾಮಂಡಳ ನಿಯಮಿತ (KMF) ಅರಮನೆ ಮೈದಾನದಲ್ಲಿ(Palace Ground) ಆಯೋಜಿಸಿದ್ದ ಸಮಾರಂಭದಲ್ಲಿ ರಾಜ್ಯದ ವಿವಿಧೆಡೆ ಹಾಲು ಒಕ್ಕೂಟಗಳು ನಿರ್ಮಿಸಿರುವ ನೂತನ ಹಾಲಿನ ಪುಡಿ ಘಟಕ, ಪಶು ಆಹಾರ ಘಟಕ, ಸಂಶೋಧನಾ ಕೇಂದ್ರ ಸೇರಿದಂತೆ 10ಕ್ಕೂ ಹೆಚ್ಚು ಯೋಜನೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

Follow Us:
Download App:
  • android
  • ios