Asianet Suvarna News Asianet Suvarna News

ಗಡಿ ಸಂಘರ್ಷಕ್ಕೆ ಕಿಚ್ಚು: ಡಿ.3ಕ್ಕೆ 2 ಮಹಾ​ರಾಷ್ಟ್ರದ ಸಚಿವರು ಬೆಳ​ಗಾ​ವಿ​ಗೆ, ಎಂಇ​ಎ​ಸ್‌ ಜತೆ ಚರ್ಚೆ

ಮಧ್ಯ​ವ​ರ್ತಿ ಎಂಇ​ಎಸ್‌ ಆಹ್ವಾನದ ಮೇರೆಗೆ ಆಗ​ಮ​ನ, ಚಂದ್ರ​ಕಾಂತ ಪಾಟೀಲ, ದೇಸಾಯಿ ಕುಂದಾ ನಗ​ರಿ​ಗೆ, ಅಂದು ಮರಾ​ಠಿ​ಗರ ಜತೆ ಹೋರಾ​ಟದ ಬಗ್ಗೆ ಚರ್ಚೆ

2 Ministers of Maharashtra will be Come to Belagavi Discussion with MES grg
Author
First Published Nov 29, 2022, 6:30 AM IST

ಮುಂಬೈ(ನ.29):  ಕರ್ನಾ​ಟಕ-ಮಹಾ​ರಾಷ್ಟ್ರ ನಡು​ವಿನ ಗಡಿ ವಿವಾದ ತಾರ​ಕಕ್ಕೆ ಏರಿ​ರುವ ನಡು​ವೆಯೇ ಗಡಿ ವಿವಾದ ಕುರಿತ ಮಹಾ​ರಾ​ಷ್ಟ್ರದ ನೋಡಲ್‌ ಸಚಿ​ವ​ರಾದ ಚಂದ್ರ​ಕಾಂತ ಪಾಟೀಲ ಹಾಗೂ ಶಂಭು​ರಾಜ ದೇಸಾಯಿ ಅವರು ಡಿ.3ರಂದು ಬೆಳ​ಗಾವಿಗೆ ಭೇಟಿ ನೀಡು​ವು​ದಾಗಿ ಘೋಷಿ​ಸಿ​ದ್ದಾರೆ. ಭೇಟಿಯ ವೇಳೆ ಅವ​ರು ಬೆಳ​ಗಾ​ವಿ​ಯನ್ನು ಮಹಾ​ರಾ​ಷ್ಟ್ರಕ್ಕೆ ಸೇರಿ​ಸ​ಬೇಕು ಎಂದು ಆಗ್ರ​ಹಿ​ಸು​ತ್ತಿ​ರುವ ಮಧ್ಯ​ವರ್ತಿ ಮಹಾ​ರಾಷ್ಟ್ರ ಏಕೀ​ಕ​ರಣ ಸಮಿತಿ (ಎಂಇ​ಎ​ಸ್‌) ಸದ​ಸ್ಯ​ರನ್ನು ಭೇಟಿ ಮಾಡಿ ಸಮಾ​ಲೋ​ಚನೆ ನಡೆ​ಸ​ಲಿ​ದ್ದಾ​ರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಚಂದ್ರ​ಕಾಂತ ಪಾಟೀಲ, ‘ಮಧ್ಯ​ವರ್ತಿ ಮಹಾ​ರಾಷ್ಟ್ರ ಏಕೀ​ಕ​ರಣ ಸಮಿತಿ ಸದ​ಸ್ಯರು ನಮಗೆ ಬೆಳ​ಗಾ​ವಿಗೆ ಭೇಟಿ ನೀಡು​ವಂತೆ ಪತ್ರ ಬರೆ​ದಿ​ದ್ದರು. ಅದ​ಕ್ಕೆಂದೇ ನಾನು ಹಾಗೂ ಶಂಭು​ರಾಜ ದೇಸಾಯಿ ಅವರು ಡಿ.3ರಂದು ಬೆಳ​ಗಾ​ವಿಗೆ ಭೇಟಿ ನೀಡಿ ಅವರ ಜತೆ ಇಡೀ ದಿನ ಮಾತು​ಕತೆ ನಡೆ​ಸು​ತ್ತೇವೆ. ಅಂದು ಚರ್ಚೆ ನಡೆ​ಸೋಣ. ಮುಂದಿನ ಹೋರಾ​ಟ​ದ ದಾರಿ ಆಗ ಸ್ಪಷ್ಟ​ವಾ​ಗು​ತ್ತ​ದೆ’ ಎಂದು ಟ್ವೀಟ್‌ ಮಾಡಿ​ದ್ದಾ​ರೆ.

BORDER DISPUTE: ಗಡಿಯ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡದಂತೆ ಸೂಚನೆ : ಪ್ರಹ್ಲಾದ್‌ ಜೋಶಿ

ಮಧ್ಯ​ವರ್ತಿ ಎಂಇ​ಎ​ಸ್‌​ನ​ವರು ಸೋಮ​ವಾರ ಬೆಳ​ಗ್ಗೆ​ಯಷ್ಟೇ ಸಚಿ​ವ​ದ್ವ​ಯ​ರಿಗೆ ಬೆಳ​ಗಾ​ವಿಗೆ ಆಹ್ವಾ​ನಿಸಿ ಪತ್ರ ಬರೆ​ದಿ​ದ್ದರು. ಇದರ ಬೆನ್ನಲ್ಲೇ ಸಚಿ​ವರು ಭೇಟಿಗೆ ಒಪ್ಪಿಗೆ ಸೂಚಿ​ಸಿ​ದ್ದಾ​ರೆ.

ಗಡಿ ವಿವಾ​ದದ ವಿಚಾ​ರಣೆ ಸುಪ್ರೀಂ ಕೋರ್ಟಲ್ಲಿ ನ.30ರಂದು ನಡೆ​ಯ​ಲಿದೆ. ಕರ್ನಾ​ಟ​ಕದ 865 ಹಳ್ಳಿ​ಗಳು ತನಗೆ ಸೇರಿ​ಬೇಕು ಎಂಬುದು ಮಹಾ​ರಾ​ಷ್ಟ್ರದ ಬೇಡಿಕೆ ಆಗಿದೆ. ಈ ಹೋರಾ​ಟ​ದಲ್ಲಿ ಕಾನೂನು ತಂಡ​ದೊಂದಿಗೆ ಸಮ​ನ್ವಯ ಸಾಧಿ​ಸಲು ಇತ್ತೀ​ಚೆಗೆ ಮಹಾ​ರಾಷ್ಟ್ರ ಸರ್ಕಾರ ಇಬ್ಬರೂ ಸಚಿ​ವ​ರನ್ನು ನೋಡಲ್‌ ಮಂತ್ರಿ​ಗ​ಳಾಗಿ ನೇಮಿ​ಸಿ​ತ್ತು.
 

Follow Us:
Download App:
  • android
  • ios