Asianet Suvarna News Asianet Suvarna News

ಮುಸ್ಲಿಂ ವ್ಯಕ್ತಿ ಗ್ರಾಪಂ ಅಧ್ಯಕ್ಷ ಆಗಿದ್ದಕ್ಕೆ 15 ಜನ ಹಿಂದು ಗ್ರಾಪಂ ಸದಸ್ಯರು ರಾಜೀನಾಮೆ

ಮುಸ್ಲಿಂ ಸಮು​ದಾ​ಯ​ದ​ ವ್ಯಕ್ತಿಯನ್ನು ಗ್ರಾಮ ಪಂಚಾಯ್ತಿ ಅಧ್ಯ​ಕ್ಷ​ರ​ನ್ನಾಗಿ ಆಯ್ಕೆ ಮಾಡಿ​ದ್ದಕ್ಕೆ ಅಸ​ಮಾಧಾ​ನ​ಗೊಂಡ 15 ಜನ ಸದ​ಸ್ಯರು ಸಾಮೂ​ಹಿ​ಕ​ವಾಗಿ ರಾಜೀ​ನಾಮೆ ನೀಡಿ​ರುವ ಘಟನೆ ಜಿಲ್ಲೆ ಸಿಂಧ​ನೂರು ತಾಲೂ​ಕಿನ ಆರ್‌ಎ​ಚ್‌ ​ಕ್ಯಾಂಪ್‌ ನಂ.1 ರಲ್ಲಿ ನಡೆ​ದಿ​ರು​ವುದು ಬೆಳ​ಕಿಗೆ ಬಂದಿದೆ.

15 people resigned because a Muslim person was the president of the village in RH Camp sidnhanur rav
Author
First Published Aug 6, 2023, 4:26 AM IST

ರಾಯ​ಚೂರು (ಆ.6) :  ಮುಸ್ಲಿಂ ಸಮು​ದಾ​ಯ​ದ​ ವ್ಯಕ್ತಿಯನ್ನು ಗ್ರಾಮ ಪಂಚಾಯ್ತಿ ಅಧ್ಯ​ಕ್ಷ​ರ​ನ್ನಾಗಿ ಆಯ್ಕೆ ಮಾಡಿ​ದ್ದಕ್ಕೆ ಅಸ​ಮಾಧಾ​ನ​ಗೊಂಡ 15 ಜನ ಸದ​ಸ್ಯರು ಸಾಮೂ​ಹಿ​ಕ​ವಾಗಿ ರಾಜೀ​ನಾಮೆ ನೀಡಿ​ರುವ ಘಟನೆ ಜಿಲ್ಲೆ ಸಿಂಧ​ನೂರು ತಾಲೂ​ಕಿನ ಆರ್‌ಎ​ಚ್‌ ​ಕ್ಯಾಂಪ್‌ ನಂ.1 ರಲ್ಲಿ ನಡೆ​ದಿ​ರು​ವುದು ಬೆಳ​ಕಿಗೆ ಬಂದಿದೆ.

ಗ್ರಾ.ಪಂ.ನಲ್ಲಿ ಒಟ್ಟು 38 ಸದಸ್ಯರಿದ್ದು, ಎರಡನೇ ಅವಧಿಯ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. ಕಳೆದ ಆ.2ರಂದು ನಡೆದ ಚುನಾ​ವ​ಣೆ​ಯಲ್ಲಿ ಕಾಂಗ್ರೆ​ಸ್‌ನ 19 ಜನ ಸದ​ಸ್ಯರ ಬೆಂಬಲದೊಂದಿಗೆ ಎಂ.ರಹಮ್ಮದ್‌ ಪಾಷಾ ಅವರು ಅಧ್ಯ​ಕ್ಷ​ರಾಗಿ ಆಯ್ಕೆ​ಯಾ​ಗಿ​ದ್ದ​ರು. ಮುಸ್ಲಿಂ ಸಮು​ದಾ​ಯ​ದ​ವ​ರನ್ನು ಅಧ್ಯ​ಕ್ಷ​ರ​ನ್ನಾಗಿ ಮಾಡಿ​ದ್ದಕ್ಕೆ ಜೆಡಿ​ಎ​ಸ್‌-ಬಿಜೆ​ಪಿ​ಯಲ್ಲಿ ಗುರು​ತಿ​ಸಿ​ಕೊಂಡಿ​ರುವ 15 ಜನ ಸದ​ಸ್ಯ​ರು ಅಸಮಾಧಾನಗೊಂಡಿದ್ದಾರೆ. ಸಾಮೂ​ಹಿಕ ರಾಜೀ​ನಾ​ಮೆ​ಯನ್ನು ಅಧ್ಯ​ಕ್ಷ​ರಿಗೆ ಸಲ್ಲಿ​ಸಲು ಶುಕ್ರ​ವಾರ ಗ್ರಾ.ಪಂ. ಕಚೇ​ರಿಗೆ ಹೋಗಿದ್ದು ಅಲ್ಲಿ ಅಧ್ಯ​ಕ್ಷ​ರಿ​ಲ್ಲದ ಕಾರ​ಣಕ್ಕೆ ಆವ​ಕ-ಜಾವ​ಕ​ (ಇನ್‌ ವಾರ್ಡ್‌)ದಲ್ಲಿ ತಮ್ಮ ರಾಜೀ​ನಾಮೆ ಪತ್ರ ನೀಡಿ​ದ್ದಾರೆ. ಇನ್ನು​ಳಿದ ಮೂವರು ಸದ​ಸ್ಯರು ತಟಸ್ಥ ಸ್ಥಿತಿ​ಯ​ಲ್ಲಿ​ದ್ದಾರೆ.

ಸಿಂಧನೂರು: ಅಶ್ಲೀಲ ಮೆಸೇಜ್ 2 ಕೋಮುಗಳ ನಡುವೆ ಘರ್ಷಣೆ, ಪರಿಸ್ಥಿತಿ ಉದ್ವಿಗ್ನ!

ಕಳೆದ ತಿಂಗಳು ಆರ್‌​ಎ​ಚ್‌ಕ್ಯಾಂಪ್‌ ನಂ.2ರಲ್ಲಿ ಎರಡು ಕೋಮಿನ ನಡುವೆ ಸಂಘರ್ಷ ಉಂಟಾ​ಗಿತ್ತು. ಈ ಹಿನ್ನೆಲೆಯಲ್ಲಿ ಗ್ರಾ.ಪಂ. ಸದ​ಸ್ಯರು ನಮಗೆ ಅಲ್ಪ​ಸಂಖ್ಯಾ​ತರ ಅಧ್ಯ​ಕ್ಷರು ಬೇಡ​ವೆಂದು ಸಾಮೂ​ಹಿ​ಕ​ವಾಗಿ ರಾಜೀ​ನಾ​ಮೆ​ಯನ್ನು ನೀಡಿ​ದ್ದಾರೆ ಎಂದು ಹೇಳಲಾಗಿದೆ.

ಪುನರ್ವಸತಿ ಕ್ಯಾಂಪ್‌ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಂಗಾಲಿ ನಿವಾಸಿಗಳು ವಾಸವಾಗಿದ್ದು, ನಾವು ಸಾಮಾನ್ಯ ಮೀಸಲಾತಿ ಸ್ಥಾನದಲ್ಲಿ ಬರುತ್ತೇವೆ. ಆದಾಗ್ಯೂ ಸಾಮಾನ್ಯರಿಗೆ ಅಧ್ಯಕ್ಷ ಸ್ಥಾನ ನೀಡದೆ, ಕಡೆಗಣಿಸಿ ಅಲ್ಪಸಂಖ್ಯಾತರನ್ನು ಅಧ್ಯಕ್ಷರನ್ನಾಗಿ ಮಾಡಿರುವುದು ಖಂಡನೀಯ. ಇದನ್ನು ನಾವು ಒಪ್ಪುವುದಿಲ್ಲ. ಕುತಂತ್ರ ರಾಜಕೀಯದಿಂದ ಅಧ್ಯಕ್ಷ ಸ್ಥಾನದಿಂದ ಬಂಗಾಲಿ ಸಮುದಾಯ ವಂಚಿತವಾಗಿದೆ ಎಂದು ಬಂಗಾಲಿ ಸಮುದಾಯದ ಗ್ರಾಪಂ ಸದಸ್ಯರು ಆರೋಪಿದ್ದಾರೆ.

ಕ​ಳೆದ 15 ವರ್ಷಗಳ ಹಿಂದೆ ನಮಗೆ ಅಧ್ಯಕ್ಷ ಸ್ಥಾನ ಬಂದಿದ್ದು, ಇಲ್ಲಿವರೆಗೂ ನಮಗೆ ಮತ್ತೆ ಅಧ್ಯಕ್ಷ ಸ್ಥಾನದ ಅವಕಾಶ ಬಂದಿಲ್ಲ. ಈಗ ಅಧ್ಯಕ್ಷ ಸ್ಥಾನದ ಅವಕಾಶ ಬಂದಿದೆ. ಆದ್ದರಿಂದ ನಮ್ಮನ್ನು ಅಧ್ಯಕ್ಷರನ್ನಾಗಿ ಮಾಡದೆ ಅಲ್ಪಸಂಖ್ಯಾತರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದಕ್ಕೆ ನಮ್ಮೆಲ್ಲರ ವಿರೋಧ ಇದೆ ಎಂದು ಅಸ​ಮ​ಧಾ​ನ​ಗೊಂಡಿ​ರುವ 15 ಜನ ಸದ​ಸ್ಯರು ಸಾಮೂ​ಹಿ​ಕ​ವಾಗಿ ರಾಜೀ​ನಾ​ಮೆಗೆ ಮುಂದಾ​ಗಿ​ದ್ದಾರೆ. ಗ್ರಾಪಂ ಕಾರ್ಯಾ​ಲ​ಯ​ದಲ್ಲಿ ಸಲ್ಲಿ​ಸಿ​ರುವ ರಾಜೀ​ನಾಮೆ ಪತ್ರ​ಗ​ಳನ್ನು ಪಿಡಿಒ ಅಧ್ಯ​ಕ್ಷರ ಗಮ​ನಕ್ಕೆ ತಂದಿದ್ದು 15 ದಿನ​ಗಳ ಗಡು​ವಿ​ನಲ್ಲಿ ರಾಜೀ​ನಾಮೆ ಪತ್ರ​ಗ​ಳನ್ನು ಸದ​ಸ್ಯರು ವಾಪಸ್‌ ಪಡೆ​ಯಲು ಕಾಲಾ​ವ​ಕಾ​ಶ​ವಿದೆ.

ದುರ್ಗಾ ದೇವಸ್ಥಾನಕ್ಕೆ ನುಗ್ಗಿ ದಾಂಧಲೆ; ದುಷ್ಕರ್ಮಿಗಳ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ

ಆರ್‌​ಎ​ಚ್‌​ ಕ್ಯಾಂಪ್‌ ನಂ.1 ಗ್ರಾಪಂ ಸದ​ಸ್ಯರು ಸಾಮೂ​ಹಿ​ಕ​ವಾಗಿ ರಾಜೀ​ನಾ​ಮೆ ನೀಡಿ ಗ್ರಾಪಂ ಕಾರ್ಯಾ​ಲ​ಯಕ್ಕೆ ಸಲ್ಲಿ​ಸಿ​ರುವು​ದರ ಬಗ್ಗೆ ಪಿಡಿಒ ಗಮ​ನಕ್ಕೆ ತಂದಿದ್ದಾರೆ. 15 ದಿನ​ಗ​ಳೊ​ಳಗೆ ಅವ​ರು ರಾಜೀ​ನಾ​ಮೆ ವಾಪಸ್‌ ಪಡೆ​ಯಲು ಅವ​ಕಾ​ಶ​ವಿದ್ದು, ವಾಪಸ್‌ ಪಡೆ​ಯದೇ ಇದ್ದರು ರಾಜೀ​ನಾಮೆಯನ್ನು ಜಿಲ್ಲಾ​ಧಿ​ಕಾ​ರಿಗೆ ಕಳು​ಹಿಸಲಿದ್ದು ಅವರೇ ಮುಂದಿನ ಕ್ರಮ ಜರು​ಗಿ​ಸ​ಲಿ​ದ್ದಾರೆ.

-ಅವಿನಾಶ ಶಿಂಧೆ, ಸಹಾ​ಯಕ ಆಯುಕ್ತ, ಸಿಂಧ​ನೂರು ವಿಭಾಗ

ಹಲ​ವಾರು ವರ್ಷ​ಗ​ಳಿಂದ ಜಾತಿ, ಧರ್ಮ ಮರೆತು ಎಲ್ಲರೂ ಶಾಂತಿ, ಸೌಹಾರ್ದತೆಯಿಂದ ಬದುಕುತ್ತಿದ್ದೇವೆ. ಆದರೆ ಕೆಲವರು ಹಿಂದೂ-ಮುಸ್ಲಿಂ ಹೆಸರಿನಲ್ಲಿ ಗಲಭೆ ಸೃಷ್ಟಿಸಿ ರಾಜಕೀಯ ಲಾಭ ಪಡೆಯಲು ಯತ್ನಿಸಿದ್ದಾರೆ. ರಾಜ​ಕೀಯ ದುರು​ದ್ದೇ​ಶ​ದಿಂದ 15 ಜನ ಗ್ರಾಪಂ ಸದಸ್ಯರು ಸಾಮೂಹಿಕ ರಾಜೀನಾಮೆ ನೀಡಿದ್ದು, ಅವ​ರೊಂದಿ​ಗೆ ಮುಕ್ತವಾಗಿ ಚರ್ಚಿಸಿ ರಾಜೀನಾಮೆ ವಾಪಾಸ್‌ ಪಡೆಯಲು ಮನ ಹೊಲಿಸಲಾಗುವುದು

. -ಎಂ.ರಹೆಮ್ಮದ್‌ ಪಾಷಾ, ಗ್ರಾಪಂ ಹೊಸ ಆಧ್ಯಕ್ಷ ಆರ್‌​ಎಚ್‌ ಕ್ಯಾಂಪ್‌ ನಂ.1

Follow Us:
Download App:
  • android
  • ios