Asianet Suvarna News Asianet Suvarna News

ಮೇಜರ್ ಸರ್ಜರಿ: ಒಟ್ಟು 13 IAS ಅಧಿಕಾರಿಗಳನ್ನ ವರ್ಗಾವಣೆಗೊಳಿಸಿದ ಸರ್ಕಾರ

13 ಐಎಎಸ್​ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.ಕೊರೋನಾ ಮಧ್ಯೆಯೂ ವರ್ಗಾವಣೆಯಾದ ಅಧಿಕಾರಿ ಹೆಸರು ಮತ್ತು ಇಲಾಖೆ ಈ ಕೆಳಗಿನಂತಿದೆ.

13 IAS officers transferred By Karnataka govt
Author
Bengaluru, First Published Jul 28, 2020, 4:41 PM IST

ಬೆಂಗಳೂರು, (ಜುಲೈ.28): 13 ಐಎಎಸ್ ಅಧಿಕಾರಿಗಳನ್ನ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಕೊರೋನಾ ಮಧ್ಯೆಯು ಎತ್ತಂಡಿ ಮಾಡಿ ಇಂದು (ಮಂಗಳವಾರ) ಟ್ರಾನ್ಸ್‌ಫರ್ ಮಾಡಿ ಆದೇಶಿಸಿದೆ.

ಕಲಬುರಗಿ ಜಿಲ್ಲಾಧಿಕಾರಿ ವರ್ಗಾವಣೆ: 2 ಗಂಟೆಯಲ್ಲೇ ಆದೇಶ ವಾಪಸ್..!

ಚಿತ್ರದುರ್ಗ ಜಿಲ್ಲಾಧಿಕಾರಿಯಾಗಿ ಕಳೆದ ಒಂದು ವರ್ಷದಿಂದ ಕರ್ತವ್ಯ ನಿರ್ವಹಿಸುತ್ತಿದ್ದ ವಿನೂತ್ ಪ್ರಿಯ ಮತ್ತು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ‌ ಸಿಂಧೂ ರೂಪೇಶ್ ಸೇರಿದಂತೆ ಒಟ್ಟು 13 ಐಎಎಸ್​ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಅಧಿಕಾರಿ ಹೆಸರು ಮತ್ತು ವರ್ಗಾವಣೆಯಾದ ಇಲಾಖೆ ಹೆಸರು ಈ ಕೆಳಗಿನಂತಿದೆ.

ರಾಜಕುಮಾರ್ ಕತ್ರಿ- ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಕಾರ್ಮಿಕ ಇಲಾಖೆ
ಡಾ.ಎನ್. ನಾಗಾಂಭಿಕಾ ದೇವಿ- ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಸಮಾಜ ಕಲ್ಯಾಣ ಇಲಾಖೆ
ಮನೋಜ್ ಜೈನ್- ಬಿಬಿಎಂಪಿ ವಿಶೇಷ ಆಯುಕ್ತರು
ರಾಜೇಂದ್ರ ಜೋಳನ್- ಬಿಬಿಎಂಪಿ ವಿಶೇಷ ಆಯುಕ್ತರು
ಆರ್. ವಿನೋತ್ ಪ್ರಿಯಾ - ನಿರ್ದೇಶಕರು, ಎಂಎಸ್​ಎಂಇ
ಡಾ.ಬಿ.ಆರ್.ಮಮತಾ- ಹೆಚ್ಚುವರಿ ನಿರ್ದೇಶಕರು, ಸಕಾಲ
ಸಿಂಧೂ ಬಿ. ರೂಪೇಶ್- ನಿರ್ದೇಶಕ, ಇಡಿಸಿಸಿ ಮತ್ತು ಡಿಪಿಎಆರ್
ಪೊಮ್ಮಲ ಸುನೀಲ್ ಕುಮಾರ್- ವಿಜಯಪುರ ಡಿಸಿ
ಡಾ.ರಾಜೇಂದ್ರ ಕೆ.ವಿ. - ದಕ್ಷಿಣ ಕನ್ನಡ ಡಿಸಿ
ದರ್ಶನ್ ಎಚ್​.ಪಿ.- ಬೆಳಗಾವಿ ಜಿಪಂ ಸಿಇಒ
ಡಾ.ಎಚ್.ಎನ್.ಗೋಪಾಲಕೃಷ್ಣ- ನಿರ್ದೇಶಕರು, ಮೈಸೂರು ಶುಗರ್ಸ್ ಕಂಪನಿ ಲಿ.
ಕವಿತಾ ಎಸ್. ಮಣ್ಣೀಕೆರಿ- ಚಿತ್ರದುರ್ಗ- ಡಿಸಿ
ಪಾಟೀಲ ಯಲಗೌಡ ಶಿವನಗೌಡ - ಜಂಟಿ ನಿರ್ದೇಶಕ, ಆಡಳಿತ ತರಬೇತಿ ಸಂಸ್ಥೆ, ಮೈಸೂರು
 

Follow Us:
Download App:
  • android
  • ios