ರಾಜ್ಯ ಸಾರ್ವಜನಿಕ ಲೆಕ್ಕ ಪತ್ರ ಸಮಿತಿ ಸಭೆ ನಡೆದಿದ್ದು, ಶಾಸಕ ಸತೀಶ್ ರೆಡ್ಡಿ ಪ್ರಸ್ತಾಪಿಸಿದ ವಿಷಯವನ್ನು ಕೇಳಿಯೇ  ಸಭೆಯಲ್ಲಿದ್ದ ಕಮಿಟಿ ಸದಸ್ಯರು ಸುಸ್ತಾಗಿ ಹೋಗಿದ್ದಾರೆ.

ಬೆಂಗಳೂರು, (ಆ.11): ಇಂದು (ಮಂಗಳವಾರ) ವಿಧಾನಸೌಧದಲ್ಲಿ ರಾಜ್ಯ ಸಾರ್ವಜನಿಕ ಲೆಕ್ಕ ಪತ್ರ ಸಮಿತಿ ಸಭೆ ನಡೆಯಿತು. ಈ ಸಭೆಯಲ್ಲಿ ಶಾಸಕ ಸತೀಶ್ ರೆಡ್ಡಿ ಅವರು ಕೊರೋನಾ ಬಗ್ಗೆ ಹೊರ ಹಾಕಿದ ವಿಷಯ ಕೇಳಿ ಕಮಿಟಿಯ ಸದಸ್ಯರು ದಂಗಾಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸಭೆ ಬಳಿಕ ಬಿಜೆಪಿ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಬೊಮ್ಮಹನಳ್ಳಿ ಶಾಸಕ ಸತೀಶ್ ರೆಡ್ಡಿ ಪ್ರಸ್ತಾಪಿಸಿದ ಈ ವಿಷಯವನ್ನು ಕೇಳಿಯೇ ಸಭೆಯಲ್ಲಿದ್ದ ಕಮಿಟಿ ಸದಸ್ಯರು ಸುಸ್ತಾಗಿ ಹೋಗಿದ್ದಾರೆ ಎಂದರು.

ಕಾಶ್ಮೀರದ ಮತ್ತೊಂದು ನಿಷೇಧ ವಾಪಸ್, ವಿಶ್ವ ಕ್ರಿಕೆಟ್‌ಗೆ ಕೊಹ್ಲಿ ಬಾಸ್; ಆ.11ರ ಟಾಪ್ 10 ಸುದ್ದಿ!

ಕೊರೋನಾ ಪೇಶೆಂಟ್ ವೆಂಟಿಲೇಟರ್‌ಗೆ ಹೋದ್ರೆ ಭಾರೀ ಡೇಂಜರ್. ವೆಂಟಿಲೇಟರ್ ಹೋದವರು ಬದುಕುವುದು ಕಷ್ಟ. ಬೆಂಗಳೂರಿನಲ್ಲಿ ವೆಂಟಿಲೇಟರ್‌ಗೆ ಹೋದವರು ವಾಪಸ್ ಬಂದಿದ್ದು ಕಡಿಮೆಯಂತೆ. ಪ್ರತಿ 10 ಮಂದಿ ಸೋಂಕಿತರಲ್ಲಿ 9 ಮಂದಿ ಸಾಯ್ತಿದ್ದಾರಂತೆ. ಉಳಿಯೋದು ಕೇವಲ ಒಬ್ಬ ಪೇಶೆಂಟ್ ಮಾತ್ರವಂತೆ ಎಂದು ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಸಾರ್ವಜನಿಕ ಲೆಕ್ಕ ಪತ್ರ ಸಮಿತಿ ಸಭೆಯಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ ಎಂದು ನಡಹಳ್ಳಿ ಮಾಧ್ಯಮಗಳ ಮುಂದೆ ತಿಳಿಸಿದರು.