ಕಳೆದ ಕೆಲ ವರ್ಷಗಳಿಂದ ಫಾರ್ಮ್`ಗೆ ಮರಳಲು ಒದ್ದಾಡುತ್ತಿದ್ದ ಯುವಿ ಬಹುತೇಕ ನಿವೃತ್ತಿಯ ಯೋಚನೆಯಲ್ಲಿದ್ದರು. ಯುವಿಯ ಸಾಮರ್ಥ್ಯ ಕಂಡಿದ್ದ ಅವರ ಗೆಳೆಯ ಅವರಿಗೆ ಪ್ರೋತ್ಸಾಹ ನೀಡಿ ತಂಡದಲ್ಲಿ ಸ್ಥಾನ ಕೊಟ್ಟಿದ್ದರು. ಅದು ಬೇರಾರೂ ಅಲ್ಲ. ಕ್ಯಾಪ್ಟನ್ ವಿರಾಟ್ ಕೊಹ್ಲಿ. ಈ ಮಾತನ್ನ ಸ್ವತಃ ಯುವರಾಜ್ ಸಿಂಗ್ ಹೇಳಿಕೊಂಡಿದ್ದಾರೆ. ಗೆಳೆಯ ಕೊಟ್ಟ ಅವಕಾಶವನ್ನ ಸದುಪಯೋಗಪಡಿಸಿಕೊಂಡ ಯುವಿ, ಕಳೆದ ಪಂದ್ಯದಲ್ಲಿ ಜೀವನಶ್ರೇಷ್ಠ 150 ರನ್ ಸಿಡಸಿದ್ದು ಗೊತ್ತೇ ಇದೆ. ಆ ಬಳಿಕ ಮಾತನಾಡಿರುವ ಯುವಿ, ಕೊಹ್ಲಿ ನನ್ನ ಮೇಲೆ ನಂಬಿಕೆ ಇಟ್ಟು ನನಗೆ ಅವಕಾಶ ಕೊಡದಿದ್ದರೆ ನಿವೃತ್ತಿಯೊಂದೇ ದಾರಿಯಾಗಿತ್ತು ಎಂದು ಹೇಳಿಕೊಂಡಿದ್ದಾರೆ.

ಕಟಕ್(ಜ.21): ಯುವರಾಜ್ ಸಿಂಗ್.. ಫೀಲ್ಡಿಗಿಳಿದರೆ ಸಿಕ್ಸರ್`ಗಳ ಸುರಿಮಳೆಯಾಗುತ್ತಿತ್ತು. ಎದುರಾಳಿ ಬೌಲರ್`ಗಳು ಬೆಚ್ಚಿಬೀಳುತ್ತಿದ್ದರು. 2011ರಲ್ಲಿ ಭಾರತ ವಿಶ್ವಕಪ್ ಗೆದ್ದಾಗ ಪ್ರಮುಖ ಪಾತ್ರ ವಹಿಸಿದ್ದೇ ಯುವಿ. ಆದರೆ, ಕ್ಯಾನ್ಸರ್ ಹೆಮ್ಮಾರಿ ಯುವಿ ಸಾಮರ್ಥ್ಯವನ್ನ ಕುಗ್ಗಿಸಿತ್ತು. ಆದರೂ ಕಮ್ ಬ್ಯಾಕ್ ಮಾಡಿದ ಯುವರಾಜ್ ಸಿಂಗ್ ಟೀಮ್ ಇಂಡಿಯಾಗೆ ಮರಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆದರೆ, ಕಳೆದ ಕೆಲ ವರ್ಷಗಳಿಂದ ಫಾರ್ಮ್`ಗೆ ಮರಳಲು ಒದ್ದಾಡುತ್ತಿದ್ದ ಯುವಿ ಬಹುತೇಕ ನಿವೃತ್ತಿಯ ಯೋಚನೆಯಲ್ಲಿದ್ದರು. ಯುವಿಯ ಸಾಮರ್ಥ್ಯ ಕಂಡಿದ್ದ ಅವರ ಗೆಳೆಯ ಅವರಿಗೆ ಪ್ರೋತ್ಸಾಹ ನೀಡಿ ತಂಡದಲ್ಲಿ ಸ್ಥಾನ ಕೊಟ್ಟಿದ್ದರು. ಅದು ಬೇರಾರೂ ಅಲ್ಲ. ಕ್ಯಾಪ್ಟನ್ ವಿರಾಟ್ ಕೊಹ್ಲಿ. ಈ ಮಾತನ್ನ ಸ್ವತಃ ಯುವರಾಜ್ ಸಿಂಗ್ ಹೇಳಿಕೊಂಡಿದ್ದಾರೆ. ಗೆಳೆಯ ಕೊಟ್ಟ ಅವಕಾಶವನ್ನ ಸದುಪಯೋಗಪಡಿಸಿಕೊಂಡ ಯುವಿ, ಕಳೆದ ಪಂದ್ಯದಲ್ಲಿ ಜೀವನಶ್ರೇಷ್ಠ 150 ರನ್ ಸಿಡಸಿದ್ದು ಗೊತ್ತೇ ಇದೆ. ಆ ಬಳಿಕ ಮಾತನಾಡಿರುವ ಯುವಿ, ಕೊಹ್ಲಿ ನನ್ನ ಮೇಲೆ ನಂಬಿಕೆ ಇಟ್ಟು ನನಗೆ ಅವಕಾಶ ಕೊಡದಿದ್ದರೆ ನಿವೃತ್ತಿಯೊಂದೇ ದಾರಿಯಾಗಿತ್ತು ಎಂದು ಹೇಳಿಕೊಂಡಿದ್ದಾರೆ.