Asianet Suvarna News Asianet Suvarna News

'ಶ್ರೀಶಾಂತ್ ಕ್ರಿಕೆಟ್ ಭವಿಷ್ಯ ಬಿಸಿಸಿಐಗೆ ಬಿಟ್ಟಿದ್ದು'

ಶ್ರೀಶಾಂತ್ ಕ್ರಿಕೆಟ್ ಆಡುವ ವಿಷಯಕ್ಕೆ ಸಂಬಂಧಿಸಿದಂತೆ ಕೇರಳ ಕ್ರಿಕೆಟ್ ಸಂಸ್ಥೆ ಬಿಸಿಸಿಐ ಪತ್ರ ಕೂಡ ಬರೆದಿದೆ.

Will support S Sreesanth subject to clearance from BCCI

ಕೊಚ್ಚಿ(ಆ.09): ಕೇರಳ ಹೈ ಕೋರ್ಟ್ ವೇಗಿ ಶ್ರೀಶಾಂತ್‌ ಮೇಲೆ ಹೇರಲಾಗಿದ್ದ ಅಜೀವ ನಿಷೇಧ ತೆರವುಗೊಳಿಸಿದ ಬೆನ್ನಲ್ಲೇ ಶ್ರೀಶಾಂತ್ 2019ರ ಏಕದಿನ ವಿಶ್ವಕಪ್ ಆಡುವ ಇರಾದೆ ವ್ಯಕ್ತಪಡಿಸಿದ್ದರು. ಶ್ರೀಶಾಂತ್'ಗೆ ಕ್ರಿಕೆಟ್ ಆಡಲು ಅವಕಾಶ ನೀಡಬೇಕೋ ಅಥವಾ ಬೇಡವೋ ಎನ್ನುವ ವಿಷಯ ಬಿಸಿಸಿಐ  ತೀರ್ಮಾನಿಸಬೇಕು. ಬಿಸಿಸಿಐ ನಿರ್ಧಾರಕ್ಕೆ ನಾವು ಬದ್ಧರಾಗಿರುತ್ತೇವೆ ಎಂದು ಕೇರಳ ಕ್ರಿಕೆಟ್ ಸಂಸ್ಥೆ ಹೇಳಿದೆ.

ಶ್ರೀಶಾಂತ್ ಕ್ರಿಕೆಟ್ ಆಡುವ ವಿಷಯಕ್ಕೆ ಸಂಬಂಧಿಸಿದಂತೆ ಕೇರಳ ಕ್ರಿಕೆಟ್ ಸಂಸ್ಥೆ ಬಿಸಿಸಿಐ ಪತ್ರ ಕೂಡ ಬರೆದಿದೆ. ಕೇರಳ ಹೈಕೋರ್ಟ್ ಶ್ರೀಶಾಂತ್ ಮೇಲಿನ ಆಜೀವ ನಿಷೇಧವನ್ನು ರದ್ದುಗೊಳಿಸಿತ್ತು. ಆದರೆ ಬಿಸಿಸಿಐ ಮಾತ್ರ ಈ ಸಂಬಂದ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಇದರ ಬೆನ್ನಲ್ಲೇ ಮತ್ತೆ ಕ್ರಿಕೆಟ್‌'ನಲ್ಲಿ ಸಕ್ರಿಯರಾಗಬೇಕು ಎನ್ನುವ ಆಶಯ ಹೊಂದಿರುವುದಾಗಿ ಶ್ರೀಶಾಂತ್ ಹೇಳಿಕೊಂಡಿದ್ದರು.

ಈ ಹಿನ್ನೆಲೆಯಲ್ಲಿ ಶ್ರೀಶಾಂತ್ ವಿಚಾರದಲ್ಲಿ ಹೇಗೆ ನಡೆದುಕೊಳ್ಳಬೇಕು ಎನ್ನುವುದರ ಕುರಿತು ಮಾರ್ಗದರ್ಶನ ನೀಡುವಂತೆ ಕೇರಳ ಕ್ರಿಕೆಟ್ ಸಂಸ್ಥೆ ಬಿಸಿಸಿಐ ಅನ್ನು ಕೋರಿದೆ.

Latest Videos
Follow Us:
Download App:
  • android
  • ios