ಲಂಕಾ ಅನುಭವಿ ಆರಂಭಿಕ ಬ್ಯಾಟ್ಸ್'ಮನ್ ಉಫುಲ್ ತರಂಗಾ ಹಾಗೂ ಯುವ ಕ್ರಿಕೆಟಿಗರಾದ ಅಕಿಲಾ ಧನಂಜಯ ಮತ್ತು ಸದೀರಾ ಸಮರವಿಕ್ರಮ ಅವರಿಗೆ ಕೆಲವು ಉಪಯುಕ್ತ ಬ್ಯಾಟಿಂಗ್ ಕೌಶಲ ಹೇಳಿಕೊಡುತ್ತಿರುವ ವಿಡಿಯೋವೀಗ ಸಾಕಷ್ಟು ಸದ್ದು ಮಾಡುತ್ತಿದೆ.

ನವದೆಹಲಿ(ಡಿ.26): ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್.ಧೋನಿ ಶ್ರೀಲಂಕಾ ವಿರುದ್ಧದ ಕೊನೆಯ ಟಿ20 ಪಂದ್ಯದ ಬಳಿಕ ಲಂಕಾ ಯುವ ಕ್ರಿಕೆಟಿಗರಿಗೆ ಕೆಲವು ಬ್ಯಾಟಿಂಗ್ ಸ್ಕಿಲ್'ನ ಟಿಪ್ಸ್ ಹೇಳಿಕೊಟ್ಟಿರುವ ವಿಡಿಯೋವೀಗ ಸಾಮಾಜಿಕ ಜಾಲತಾಣ ಇನ್'ಸ್ಟಾಗ್ರಾಮ್'ನಲ್ಲಿ ವೈರಲ್ ಆಗಿದೆ.

Add Asianetnews Kannada as a Preferred SourcegooglePreferred

ಲಂಕಾ ಅನುಭವಿ ಆರಂಭಿಕ ಬ್ಯಾಟ್ಸ್'ಮನ್ ಉಫುಲ್ ತರಂಗಾ ಹಾಗೂ ಯುವ ಕ್ರಿಕೆಟಿಗರಾದ ಅಕಿಲಾ ಧನಂಜಯ ಮತ್ತು ಸದೀರಾ ಸಮರವಿಕ್ರಮ ಅವರಿಗೆ ಕೆಲವು ಉಪಯುಕ್ತ ಬ್ಯಾಟಿಂಗ್ ಕೌಶಲ ಹೇಳಿಕೊಡುತ್ತಿರುವ ವಿಡಿಯೋವೀಗ ಸಾಕಷ್ಟು ಸದ್ದು ಮಾಡುತ್ತಿದೆ.

ಮೂರನೇ ಟಿ20 ಪಂದ್ಯ ಮುಕ್ತಾಯವಾದ ಬಳಿಕ ಪ್ರಶಸ್ತಿ ಪ್ರದಾನ ಸಮಾರಂಭದ ವೇಳೆ ಸಂಜಯ್ ಮಂಜ್ರೇಕರ್ ಅವರೊಟ್ಟಿಗೆ ಲಂಕಾ ನಾಯಕ ತಿಸಾರ ಪೆರೇರಾ ಮಾತನಾಡುತ್ತಿರುವುದನ್ನು ಕೇಳಿವುದನ್ನು ಬಿಟ್ಟು, ಮಾಹಿಯ ಮಾತನ್ನು ಕೇಳಲು ಲಂಕಾ ಆಟಗಾರರು ಬ್ಯುಸಿಯಾಗಿದ್ದಂತೆ ಕಂಡುಬಂತು...

View post on Instagram