ಕುಂಬ್ಳೆ ನಿರ್ಗಮನದ ಬಳಿಕ ಬಿಸಿಸಿಐ ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿಗೆ ಎಚ್ಚರಿಕೆ ನೀಡಿದೆ. ‘ನಿಮಗೆ ಬೇಕಿರುವ ಅಧಿಕಾರ ನೀಡಿದ್ದೇವೆ. ಈಗ ತಂಡ ನಿರೀಕ್ಷಿತ ಫಲಿತಾಂಶ ನೀಡದಿದ್ದರೆ, ನಿಮ್ಮ ನಾಯಕತ್ವಕ್ಕೆ ಕುತ್ತು ಬರಬಹುದು. ಅದಕ್ಕೆ ನಾವು ಹೊಣೆಯಲ್ಲ' ಎಂದು ಬಿಸಿಸಿಐ ಹಿರಿಯ ಅಧಿಕಾರಿ ಕೊಹ್ಲಿ ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ. ಬಿಸಿಸಿಐನ ಈ ನಿರ್ಧಾರ ವಿರಾಟ್‌ ಮೇಲೆ ಭಾರೀ ಒತ್ತಡ ಹೇರಿದ್ದು, ವೆಸ್ಟ್‌ಇಂಡೀಸ್‌ ಸರಣಿಯಿಂದಲೇ ಕೊಹ್ಲಿಗೆ ಅಗ್ನಿಪರೀಕ್ಷೆ ಶುರುವಾಗಲಿದೆ.
ಕುಂಬ್ಳೆ ನಿರ್ಗಮನದ ಬಳಿಕ ಬಿಸಿಸಿಐ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿಗೆ ಎಚ್ಚರಿಕೆ ನೀಡಿದೆ. ‘ನಿಮಗೆ ಬೇಕಿರುವ ಅಧಿಕಾರ ನೀಡಿದ್ದೇವೆ. ಈಗ ತಂಡ ನಿರೀಕ್ಷಿತ ಫಲಿತಾಂಶ ನೀಡದಿದ್ದರೆ, ನಿಮ್ಮ ನಾಯಕತ್ವಕ್ಕೆ ಕುತ್ತು ಬರಬಹುದು. ಅದಕ್ಕೆ ನಾವು ಹೊಣೆಯಲ್ಲ' ಎಂದು ಬಿಸಿಸಿಐ ಹಿರಿಯ ಅಧಿಕಾರಿ ಕೊಹ್ಲಿ ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ. ಬಿಸಿಸಿಐನ ಈ ನಿರ್ಧಾರ ವಿರಾಟ್ ಮೇಲೆ ಭಾರೀ ಒತ್ತಡ ಹೇರಿದ್ದು, ವೆಸ್ಟ್ಇಂಡೀಸ್ ಸರಣಿಯಿಂದಲೇ ಕೊಹ್ಲಿಗೆ ಅಗ್ನಿಪರೀಕ್ಷೆ ಶುರುವಾಗಲಿದೆ.
ಕೊಹ್ಲಿ ವಿರುದ್ಧ ಮಾತ್ರವಲ್ಲ, ಕುಂಬ್ಳೆ ವಿರುದ್ಧವೂ ಟೀಕೆಗಳು ವ್ಯಕ್ತವಾಗುತ್ತಿವೆ. ಕುಂಬ್ಳೆ ಆಟಗಾರರನ್ನು ಶಾಲಾ ಮಕ್ಕಳಂತೆ ನೋಡುತ್ತಿದ್ದರು. ಮಕ್ಕಳಿಗೆ ಬಯ್ಯುವಂತೆ ಅವರಿಗೆ ಬಯ್ಯುತ್ತಿದ್ದರು. ಇದರಿಂದ ಆಟಗಾರರು ಮನನೊಂದಿದ್ದರು. ಡ್ರೆಸ್ಸಿಂಗ್ ಕೊಠಡಿಯಲ್ಲಿ ಕುಂಬ್ಳೆ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದರು. ಗಾಯಾಳುಗಳಿಗೂ ಅಭ್ಯಾಸದಲ್ಲಿ ಪಾಲ್ಗೊಳ್ಳುವಂತೆ ತಾಕೀತು ಮಾಡುತ್ತಿದ್ದರು ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಚಾಂಪಿಯನ್ಸ್ ಟ್ರೋಫಿ ಫೈನಲ್ನಲ್ಲಿ ಟಾಸ್ ಗೆದ್ದರೆ ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳಲು ಕೊಹ್ಲಿಗೆ ಕುಂಬ್ಳೆ ಸೂಚಿಸಿದ್ದರು, ಆದರೆ ವಿರಾಟ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿ ಪಂದ್ಯವನ್ನು ಕೈಚೆಲ್ಲಿದರು ಎಂದರು ತಂಡದ ಮೂಲವೊಂದು ತಿಳಿಸಿದೆ. ಡ್ರೆಸ್ಸಿಂಗ್ ಕೊಠಡಿಯಲ್ಲಿ ನಿಯಂತ್ರಣ ಸಾಧಿಸುವ ವಿಚಾರವಾಗಿ ಕುಂಬ್ಳೆ ಹಾಗೂ ಕೊಹ್ಲಿ ನಡುವೆ ಸದಾ ಸಂಘರ್ಷ ನಡುಯುತ್ತಲೇ ಇತ್ತು ಎಂದು ಹೇಳಲಾಗಿದೆ.
ಕೊಹ್ಲಿಗೆ ಬಿಸಿಸಿಐನಿಂದ ಖಡಕ್ ಎಚ್ಚರಿಕೆ!
ಕುಂಬ್ಳೆ ನಿರ್ಗಮನದ ಬಳಿಕ ಬಿಸಿಸಿಐ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿಗೆ ಎಚ್ಚರಿಕೆ ನೀಡಿದೆ. ‘ನಿಮಗೆ ಬೇಕಿರುವ ಅಧಿಕಾರ ನೀಡಿದ್ದೇವೆ. ಈಗ ತಂಡ ನಿರೀಕ್ಷಿತ ಫಲಿತಾಂಶ ನೀಡದಿದ್ದರೆ, ನಿಮ್ಮ ನಾಯಕತ್ವಕ್ಕೆ ಕುತ್ತು ಬರಬಹುದು. ಅದಕ್ಕೆ ನಾವು ಹೊಣೆಯಲ್ಲ' ಎಂದು ಬಿಸಿಸಿಐ ಹಿರಿಯ ಅಧಿಕಾರಿ ಕೊಹ್ಲಿ ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ. ಬಿಸಿಸಿಐನ ಈ ನಿರ್ಧಾರ ವಿರಾಟ್ ಮೇಲೆ ಭಾರೀ ಒತ್ತಡ ಹೇರಿದ್ದು, ವೆಸ್ಟ್ಇಂಡೀಸ್ ಸರಣಿಯಿಂದಲೇ ಕೊಹ್ಲಿಗೆ ಅಗ್ನಿಪರೀಕ್ಷೆ ಶುರುವಾಗಲಿದೆ.
