ಗುವಹಾಟಿ ಏಕದಿನ ಪಂದ್ಯದಲ್ಲಿ ರನ್ ಮಳೆ ಸುರಿದಿದೆ. ವಿಂಡೀಸ್ ನೀಡಿದ ಬೃಹತ್ ಟಾರ್ಗೆಟನ್ನ ಸುಲಭವಾಗಿ ಚೇಸ್ ಮಾಡಿದ ಟೀಂ ಇಂಡಿಯಾ ಭರ್ಜರಿ ಗೆಲುವು ದಾಖಲಿಸಿತ್ತು. ಈ ಗೆಲುವಿನ ಕುರಿತು ದಿಗ್ಗಜ ಕ್ರಿಕೆಟಿಗರು ಹೇಳಿದ್ದೇನು?
ಗುವಹಾಟಿ(ಅ.22): ವೆಸ್ಟ್ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 8 ವಿಕೆಟ್ಗಳ ಭರ್ಜರಿ ಗೆಲುವು ಇದೀಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ವಿಂಡೀಸ್ ನೀಡಿದ 323 ರನ್ ಟಾರ್ಗೆಟ್ನ್ನ 42.1 ಓವರ್ಗಳಲ್ಲಿ ಗುರಿ ತಲುಪಿದೆ ಟೀಂ ಇಂಡಿಯಾ ಗೆಲುವಿನ ನಗೆ ಬೀರಿತ್ತು.
ರೋಹಿತ್ ಶರ್ಮಾ 117 ಎಸೆತದಲ್ಲಿ 152 ರನ್ ಸಿಡಿಸಿದರೆ, ನಾಯಕ ವಿರಾಟ್ ಕೊಹ್ಲಿ 107ಎಸೆತದಲ್ಲಿ 140 ರನ್ ಬಾರಿಸಿದ್ದರು. ಇಷ್ಟೇ ಅಲ್ಲ ಹಲವು ದಾಖಲೆ ಬರೆದಿದ್ದಾರೆ. ಇದೀಗ ಟೀಂ ಇಂಡಿಯಾ ಭರ್ಜರಿ ಗೆಲುವಿಗೆ ದಿಗ್ಗಜ ಕ್ರಿಕೆಟಿಗರು ನೀಡಿದ ಪ್ರತಿಕ್ರಿಯೆ ಇಲ್ಲಿದೆ.
