ಮೂಲಗಳ ಪ್ರಕಾರ 7.45ಕ್ಕೆ ಪಂದ್ಯದ ಬಗ್ಗೆ ಅಂಪೈರ್'ಗಳು ತೀರ್ಮಾನ ಕೈಗೊಳ್ಳಲಿದ್ದಾರೆ ಎನ್ನಲಾಗುತ್ತಿದೆ.
ಹೈದ್ರಾಬಾದ್(ಅ.13): ತೀವ್ರ ಕುತೂಹಲ ಕೆರಳಿಸಿರುವ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಅಂತಿಮ ಟಿ20 ಪಂದ್ಯಕ್ಕೆ ಆರಂಭದಲ್ಲೇ ವರುಣನಿಂದ ವಿಘ್ನ ಎದುರಾಗಿದೆ.
ತಲಾ ಒಂದೊಂದು ಪಂದ್ಯ ಗೆದ್ದಿರುವ ಉಭಯ ತಂಡಗಳು ಸರಣಿ ಕೈವಶ ಮಾಡಿಕೊಳ್ಳಲು ಕಾತುರರಾಗಿದ್ದರೆ, ಹೈದರಾಬಾದ್'ನಲ್ಲಿ ಎಡಬಿಡದೇ ಸುರಿಯುತ್ತಿರುವ ಮಳೆ ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ನಿರಾಸೆ ತಂದೊಡ್ಡಿದೆ.
ಮೂಲಗಳ ಪ್ರಕಾರ 7.45ಕ್ಕೆ ಪಂದ್ಯದ ಬಗ್ಗೆ ಅಂಪೈರ್'ಗಳು ತೀರ್ಮಾನ ಕೈಗೊಳ್ಳಲಿದ್ದಾರೆ ಎನ್ನಲಾಗುತ್ತಿದೆ.
