Asianet Suvarna News Asianet Suvarna News

ಥಾಯ್ಲೆಂಡ್‌ ಓಪ​ನ್‌: ಸಿಂಧು, ಶ್ರೀಕಾಂತ್‌ಗೆ ಸೋಲಿನ ಶಾಕ್‌

ಥಾಯ್ಲೆಂಡ್‌ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಸೈನಾ, ಶ್ರೀಕಾಂತ್‌ಗೆ ನಿರಾಸೆ
2ನೇ ಸುತ್ತಿಗೆ ಲಕ್ಷ್ಯ ಸೇನ್‌, ಸೈನಾ ನೆಹ್ವಾಲ್‌
ಪುರು​ಷರ ಡಬ​ಲ್ಸ್‌​ನಲ್ಲಿ ಸಾತ್ವಿ​ಕ್‌-ಚಿರಾಗ್‌ ಶೆಟ್ಟಿ ಶುಭಾರಂಭ

Thailand Open 2023 PV Sindhu and Kidambi Srikanth Crashed out in first round kvn
Author
First Published Jun 1, 2023, 9:00 AM IST

ಬ್ಯಾಂಕಾ​ಕ್‌(ಜೂ.01): ಭಾರ​ತದ ಅಗ್ರ ಶಟ್ಲ​ರ್‌​ಗಳ 2023ರ ನೀರಸ ಪ್ರದ​ರ್ಶನ ಮುಂದು​ವ​ರಿ​ದಿದ್ದು, ಪಿ.ವಿ.ಸಿಂಧು, ಕಿದಂಬಿ ಶ್ರೀಕಾಂತ್‌ ಥಾಯ್ಲೆಂಡ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಮೊದಲ ಸುತ್ತಲ್ಲೇ ಸೋತು ಹೊರ​ಬಿ​ದ್ದಿ​ದ್ದಾರೆ. ಇದೇ ವೇಳೆ ಲಕ್ಷ್ಯ ಸೇನ್‌, ಸೈನಾ ನೆಹ್ವಾಲ್‌ ಶುಭಾ​ರಂಭ ಮಾಡಿದ್ದಾರೆ.

ಬುಧ​ವಾರ ಮಹಿಳಾ ಸಿಂಗಲ್ಸ್‌ ಮೊದಲ ಸುತ್ತಿ​ನಲ್ಲಿ ಸಿಂಧು, ಕೆನ​ಡಾದ ಮಿಷೆಲ್‌ ಲೀ ವಿರುದ್ಧ 8-21, 21-18, 18-21 ಗೇಮ್‌​ಗ​ಳಲ್ಲಿ ಸೋತರೆ, 2012ರ ಚಾಂಪಿ​ಯನ್‌ ಸೈನಾ ಕೆನ​ಡಾದ ವೆನ್‌ ಯು ಝಾಂಗ್‌ ವಿರುದ್ಧ 21-13, 21-7ರಲ್ಲಿ ಜಯ​ಗ​ಳಿ​ಸಿ​ದ​ರು. ಪುರು​ಷರ ಸಿಂಗ​ಲ್ಸ್‌​ನಲ್ಲಿ ಶ್ರೀಕಾಂತ್‌ ಚೀನಾದ ಹೊಂಗ್‌ ಯಾಂಗ್‌ ವೆಂಗ್‌ ವಿರುದ್ಧ ಪರಾ​ಭ​ವ​ಗೊಂಡರೆ, ಸೇನ್‌ ಚೈನೀಸ್‌ ತೈಪೆಯ ವಾಂಗ್‌ ತ್ಸು ವೆಯ್‌​ ವಿರುದ್ಧ ಗೆದ್ದರು. ಕಿರಣ್‌ ಜಾಜ್‌ರ್‍ ಕೂಡಾ 2ನೇ ಸುತ್ತಿ​ಗೇ​ರಿ​ದರು. ಪುರು​ಷರ ಡಬ​ಲ್ಸ್‌​ನಲ್ಲಿ ಸಾತ್ವಿ​ಕ್‌-ಚಿರಾಗ್‌ ಶೆಟ್ಟಿಡೆನ್ಮಾ​ರ್ಕ್ನ ಜೋಡಿ ವಿರುದ್ಧ ಗೆದ್ದು ಶುಭಾ​ರಂಭ ಮಾಡಿ​ತು.

ಕಿರಿಯರ ಹಾಕಿ: ಭಾರ​ತ ಫೈನ​ಲ್‌ಗೆ

ಸಲಾ​ಲ್ಹ​(ಒಮಾ​ನ್‌): 9ನೇ ಆವೃ​ತ್ತಿ​ಯ ಕಿರಿಯರ ಹಾಕಿ ಏಷ್ಯಾ​ಕ​ಪ್‌​ನಲ್ಲಿ 3 ಬಾರಿ ಚಾಂಪಿ​ಯನ್‌ ಭಾರತ ಫೈ​ನಲ್‌ಗೆ ಲಗ್ಗೆ ಇಟ್ಟಿ​ದೆ. ಬುಧ​ವಾರ ಮಾಜಿ ಚಾಂಪಿ​ಯನ್‌ ದಕ್ಷಿಣ ಕೊರಿಯಾ ವಿರು​ದ್ಧದ ಸೆಮಿ​ಫೈ​ನಲ್‌ ಪಂದ್ಯದಲ್ಲಿ ಭಾರ​ತ 9-1 ಗೋಲು​ಗಳ ಭರ್ಜರಿ ಗೆಲುವು ಸಾಧಿ​ಸಿ 6ನೇ ಬಾರಿ ಫೈನಲ್‌ಗೇರಿ​ತು. 
ಗುಂಪು ಹಂತ​ದ 4 ಪಂದ್ಯ​ಗ​ಳಲ್ಲಿ ಬರೋ​ಬ್ಬರಿ 39 ಗೋಲು ದಾಖ​ಲಿ​ಸಿದ್ದ ಭಾರತ ಸೆಮೀ​ಸ್‌​ನಲ್ಲೂ ಸಂಪೂರ್ಣ ಪ್ರಾಬಲ್ಯ ಸಾಧಿ​ಸಿತು. ಬಾಬಿ ಸಿಂಗ್‌ ಧಾಮಿ ಹ್ಯಾಟ್ರಿ​ಕ್‌ ಗೋಲು ದಾಖ​ಲಿ​ಸಿ​ದರೆ, ಶಾರ್ದಾ​ನಂದ್‌, ಅರೈ​ಜಿತ್‌, ಉತ್ತಮ್‌, ಅಂಗದ್‌​ಸಿಂಗ್‌, ಸುನಿತ್‌, ವಿಷ್ಣು​ಕಾಂತ್‌ ತಲಾ 1 ಗೋಲು ಹೊಡೆದ​ರು. ಗುರು​ವಾರ ಫೈನಲ್‌ ಪಂದ್ಯ ನಡೆ​ಯ​ಲಿ​ದೆ.

ಇಂದಿ​ನಿಂದ ಮಂಗಳೂರ​ಲ್ಲಿ ಇಂಡಿಯಾ ಸರ್ಫಿಂಗ್‌ ಕೂಟ

ಮಂಗ​ಳೂ​ರು: 2024ರ ಪ್ಯಾರಿಸ್‌ ಒಲಿಂಪಿಕ್ಸ್‌ನ ಅರ್ಹತಾ ಚಾಂಪಿಯನ್‌ಶಿಪ್‌ಗಳಿಗೆ ಪ್ರವೇಶ ಪಡೆಯಲು ಎದುರು ನೋಡು​ತ್ತಿ​ರುವ ಭಾರ​ತದ ಅಗ್ರ ಸರ್ಫರ್‌ಗಳು ಗುರು​ವಾ​ರ​ದಿಂದ ಮಂಗ​ಳೂ​ರಿ​ನಲ್ಲಿ ಆರಂಭ​ವಾ​ಗ​ಲಿ​ರುವ 4ನೇ ಆವೃ​ತ್ತಿಯ ಇಂಡಿಯಾ ಓಪನ್‌ ಸರ್ಫಿಂಗ್‌ ಚಾಂಪಿ​ಯ​ನ್‌​ಶಿ​ಪ್‌​ನಲ್ಲಿ ಸ್ಪರ್ಧಿ​ಸ​ಲಿ​ದ್ದಾರೆ.

French Open ಹಾಲಿ ಚಾಂಪಿಯನ್ ಇಗಾ ಸ್ವಿಯಾಟೆಕ್, ರಬೈ​ಕೆನಾ ಶುಭಾ​ರಂಭ

ನಗ​ರ​ದ ಸಸಿ​ಹಿತ್ಲು ಬೀಚ್‌​ ಕೂಟಕ್ಕೆ ಆತಿಥ್ಯ ವಹಿ​ಸ​ಲಿದ್ದು, 4 ವಿಭಾ​ಗ​ಗ​ಳಲ್ಲಿ ಸ್ಪರ್ಧೆಗಳು ನಡೆ​ಯ​ಲಿವೆ. ಪುರು​ಷ ಹಾಗೂ ಮಹಿ​ಳೆ​ಯರ ಮುಕ್ತ ವಿಭಾಗ, ಅಂಡ​ರ್‌-16 ಪುರು​ಷ, ಮಹಿಳಾ ವಿಭಾ​ಗ​ಗ​ಳ​ ಸ್ಪರ್ಧೆ​ಯಲ್ಲಿ ಭಾರತದ ಸುಮಾರು 70 ಮಂದಿ ಅಗ್ರ ಸರ್ಫರ್‌ಗಳು ಕಣ​ಕ್ಕಿ​ಳಿ​ಯ​ಲಿ​ದ್ದಾರೆ ಎಂದು ಆಯೋ​ಜ​ಕರು ತಿಳಿ​ಸಿ​ದ್ದಾರೆ. ಭಾರತದ ಅಗ್ರ 10 ಸರ್ಫರ್‌ಗಳ ಪೈಕಿ 7 ಮಂದಿ ಕಣಕ್ಕಿಳಿಯಲಿದ್ದು ಭಾರೀ ಪೈಪೋಟಿ ನಿರೀಕ್ಷಿಸಲಾಗಿದೆ. ಪುರುಷರ ವಿಭಾಗದಲ್ಲಿ ಸತೀಶ್‌ ಸರ್ವಣನ್‌, ರುಬನ್‌ ವಿ., ಶ್ರೀಕಾಂತ್‌ ಡಿ., ಸಂಜಯ್‌ಕುಮಾರ್‌, ಮಣಿಕಂಠನ್‌, ನಿತೀಶ್‌ ವರುಣ್‌, ಸೂರ್ಯ ಪಿ., ಪ್ರಮುಖ ಆಕರ್ಷಣೆ ಎನಿಸಿದ್ದಾರೆ. ಮಹಿಳಾ ಸರ್ಫರ್‌ಗಳ ಪೈಕಿ ಸೃಷ್ಠಿ ಸೆಲ್ವಂ, ಸಿಂಚನಾ ಗೌಡ, ಶಾಂತಿ ಬನ್ಸಾರೆ ಪ್ರಮುಖರು.

ಕಳೆದ ವರ್ಷದ ರ‍್ಯಾಂಕಿಂಗ್‌‌ ಆಧ​ರಿಸಿ ಈಗಾ​ಗಲೇ ನಾಲ್ವರು ಸರ್ಫ​ರ್‌​ಗಳು ಎಲ್‌ ಸಾಲ್ವ​ಡಾ​ರ್‌​ನಲ್ಲಿ ಒಲಿಂಪಿಕ್ಸ್‌ ಅರ್ಹತಾ ಸುತ್ತಿ​ನ​ಲ್ಲಿ ಸ್ಪರ್ಧಿ​ಸು​ತ್ತಿ​ದ್ದಾ​ರೆ.

ಹೃದಯಾಘಾತ: ರಾಜ್ಯದ ವಾಲಿ​ಬಾ​ಲ್‌ ಪಟು ಸಾವು

ಮಂಗ​ಳೂ​ರು: ಯುವ ವಾಲಿ​ಬಾಲ್‌ ಪಟು, ರಾಷ್ಟ್ರ ಮಟ್ಟ​ದಲ್ಲಿ ಕರ್ನಾ​ಟ​ಕ​ವನ್ನು ಪ್ರತಿ​ನಿ​ಧಿಸಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಸಾಲಿ​ಯಾತ್‌ ಎಂಬವ​ರು ಹೃದ​ಯಾ​ಘಾ​ತ​ದಿಂದ ನಿಧ​ನ​ರಾ​ಗಿ​ದ್ದಾರೆ. ಬೆಳ್ತಂಗಡಿ ತಾಲೂ​ಕಿನ ಪದಂಗಡಿ ಎಂಬ​ಲ್ಲಿನ 24 ವರ್ಷದ ಯುವತಿ ಸಾಲಿ​ಯಾತ್‌ಗೆ ಬುಧ​ವಾರ ಎದೆ ನೋವು ಕಾಣಿ​ಸಿ​ಕೊಂಡಿದ್ದು, ಕೂಡಲೇ ಆಸ್ಪ​ತ್ರೆಗೆ ದಾಖ​ಲಿ​ಸಿ​ದರೂ ಮೃತ​ಪ​ಟ್ಟಿ​ರು​ವು​ದಾಗಿ ಕುಟುಂಬ​ಸ್ಥರು ತಿಳಿ​ಸಿ​ದ್ದಾರೆ. 

ಕಳೆ​ದೊಂದು ವರ್ಷ​ದಿಂದ ಚಿಕ್ಕ​ಮ​ಗ​ಳೂ​ರಿನ ಪತಿ ಮನೆ​ಯಲ್ಲಿ ವಾಸಿ​ಸು​ತ್ತಿದ್ದ ಸಾಲಿ​ಯಾತ್‌ ವರ್ಷ​ಗಳ ಹಿಂದೆ ಅಲ​ಹಾ​ಬಾ​ದ್‌​ನಲ್ಲಿ ನಡೆದಿದ್ದ ರಾಷ್ಟ್ರೀಯ ವಾಲಿ​ಬಾಲ್‌ ಟೂರ್ನಿ​ಯಲ್ಲಿ ಆಡಿ, ಕರ್ನಾ​ಟಕ ತಂಡ ರನ್ನ​ರ್‌-ಅಪ್‌ ಸ್ಥಾನ ಪಡೆ​ಯು​ವಲ್ಲಿ ಪ್ರಮುಖ ಪಾತ್ರ ವಹಿ​ಸಿ​ದ್ದರು.

Follow Us:
Download App:
  • android
  • ios