ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಗೆ ತಂಡದಲ್ಲಿ ಸ್ಥಾನಗಿಟ್ಟಿಸಿಕೊಳ್ಳುವಲ್ಲಿ ವಿಫಲವಾಗಿದ್ದ ರೈನಾ, ಇದೀಗ ದೇಶಿ ಕ್ರಿಕೆಟ್'ನತ್ತ ಗಮನ ಹರಿಸಲು ಮುಂದಾಗಿದ್ದಾರೆ.

ಲಖನೌ(ಅ.05): ಉತ್ತರ ಪ್ರದೇಶ ರಣಜಿ ತಂಡದ ನಾಯಕರನ್ನಾಗಿ ಅನುಭವಿ ಕ್ರಿಕೆಟಿಗ ಸುರೇಶ್ ರೈನಾ ಅವರನ್ನು ನೇಮಕ ಮಾಡಲಾಗಿದೆ. ರೈಲ್ವೇಸ್ ವಿರುದ್ಧ ಲಖನೌದಲ್ಲಿ ಆರಂಭವಾಗಲಿರುವ ಮೊದಲ ರಣಜಿ ಪಂದ್ಯದಲ್ಲಿ ಯುಪಿ ತಂಡವನ್ನು ಮುನ್ನಡೆಸಲಿದ್ದಾರೆ.

Add Asianetnews Kannada as a Preferred SourcegooglePreferred

ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಗೆ ತಂಡದಲ್ಲಿ ಸ್ಥಾನಗಿಟ್ಟಿಸಿಕೊಳ್ಳುವಲ್ಲಿ ವಿಫಲವಾಗಿದ್ದ ರೈನಾ, ಇದೀಗ ದೇಶಿ ಕ್ರಿಕೆಟ್'ನತ್ತ ಗಮನ ಹರಿಸಲು ಮುಂದಾಗಿದ್ದಾರೆ.

ಈ ಮೊದಲು ಸುರೇಶ್ ರೈನಾ ಪ್ರಸಕ್ತ ಸಾಲಿನ ದುಲೀಪ್ ಟ್ರೋಫಿಯಲ್ಲಿ ಇಂಡಿಯಾ ಬ್ಲೂ ತಂಡವನ್ನು ಮುನ್ನಡೆಸಿದ್ದರು.

2017ನೇ ಆವೃತ್ತಿಯ ರಣಜಿ ಟೂರ್ನಿಯ ಪಂದ್ಯಾವಳಿಗಳು ನಾಳಿನಿಂದ(ಅಕ್ಟೋಬರ್ 6) ಆರಂಭವಾಗಲಿದ್ದು ಒಟ್ಟು 28 ತಂಡಗಳು ಪಾಲ್ಗೊಳ್ಳುತ್ತಿವೆ. 28 ತಂಡಗಳನ್ನು 4 ಗುಂಪುಗಳಾಗಿ ವಿಂಗಡಿಸಲಾಗಿದ್ದು, ಉತ್ತರ ಪ್ರದೇಶ ತಂಡವು ಎ ಗುಂಪಿನಲ್ಲಿ ಸ್ಥಾನ ಪಡೆದಿದೆ. 'ಎ' ಗುಂಪಿನಲ್ಲಿ ಕರ್ನಾಟಕ ಸೇರಿದಂತೆ ಡೆಲ್ಲಿ, ಅಸ್ಸಾಂ, ಹೈದ್ರಾಬಾದ್, ಮಹಾರಾಷ್ಟ್ರ ಹಾಗೂ ರೈಲ್ವೇಸ್ ತಂಡಗಳು ಇವೆ.