ಭೀಕರ ಭಯೋತ್ಪಾದಕರ ದಾಳಿ ಮರೆತು ಮತ್ತೆ ಲಂಕಾ ತಂಡದಿಂದ ಪಾಕ್ ಪ್ರವಾಸ!
ಪಾಕಿಸ್ತಾನ ಭಯೋತ್ಪಾದಕರ ಭೀಕರ ದಾಳಿ, ಮೈದಾನದಲ್ಲೇ ಗುಂಡಿನ ಮೊರೆತದ ಶಬ್ಧ ಶ್ರೀಲಂಕಾ ಆಟಗಾರರಿಗೆ ಇನ್ನೂ ಹಸಿಹಸಿಯಾಗಿದೆ. ಇದೀಗ ಈ ಕಹಿ ಘಟನೆಯನ್ನು ಮರೆತು ಶ್ರೀಲಂಕಾ ತಂಡ ಮತ್ತೆ ಪಾಕಿಸ್ತಾನ ಪ್ರವಾಸಕ್ಕೆ ಒಪ್ಪಿಕೊಂಡಿದೆ.
ಕರಾಚಿ(ಆ.24): ಪಾಕಿಸ್ತಾನಕ್ಕೆ ನಿಧಾನವಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ವಾಪಸಾಗುತ್ತಿದೆ. ಭಯೋತ್ಪಾದಕರ ದಾಳಿಯಿಂದ ಪಾಕಿಸ್ತಾನದಲ್ಲಿ ಕ್ರಿಕೆಟ್ ಸರಣಿ ಸಂಪೂರ್ಣ ನಿಂತು ಹೋಗಿತ್ತು. ಇದೀಗ ಚೇತರಿಸಿಕೊಂಡಿರುವ ಪಾಕ್, ಪ್ರತಿ ತಂಡಕ್ಕೂ ಆಹ್ವಾನ ನೀಡುತ್ತಿದೆ. ಆದರೆ ಹಲವು ತಂಡಗಳು ನಿರಾಕರಿಸಿದರೆ, ಶ್ರೀಲಂಕಾ ಪ್ರವಾಸಕ್ಕೆ ಮುಂದಾಗಿದೆ. ಮುಂದಿನ ತಿಂಗಳು 3 ಪಂದ್ಯಗಳ ಟಿ20, 3 ಪಂದ್ಯಗಳ ಏಕದಿನ ಸರಣಿಯನ್ನಾಡಲು ಪಾಕಿಸ್ತಾನಕ್ಕೆ ತೆರಳಲು ಶ್ರೀಲಂಕಾ ಒಪ್ಪಿಕೊಂಡಿದೆ.
ಇದನ್ನೂ ಓದಿ: ಲಂಕಾ ಅಭಿಮಾನಿಗಳ ಹೃದಯ ಗೆದ್ದ ಕೇನ್ ವಿಲಿಯಮ್ಸನ್!
ಸೆ.27ರಿಂದ-ಅ.2ರ ವರೆಗೂ ಕರಾಚಿಯಲ್ಲಿ ಏಕದಿನ ಸರಣಿ ನಡೆಯಲಿದ್ದು, ಅ.5ರಿಂದ ಅ.9ರ ವರೆಗೂ ಲಾಹೋರ್ನಲ್ಲಿ ಟಿ20 ಸರಣಿ ನಡೆಯಲಿದೆ. 2009ರಲ್ಲಿ ತನ್ನ ಆಟಗಾರರ ಮೇಲೆ ಭಯೋತ್ಪಾದಕರ ದಾಳಿ ನಡೆದ ಬಳಿಕ 8 ವರ್ಷಗಳ ಕಾಲ ಲಂಕಾ, ಪಾಕಿಸ್ತಾನಕ್ಕೆ ತೆರಳಿರಲಿಲ್ಲ. ಅಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸಂಪೂರ್ಣವಾಗಿ ನಿಂತು ಹೋಗಿತ್ತು. 2017ರಲ್ಲಿ ಲಂಕಾ ಟಿ20 ಸರಣಿ ಆಡಲು ಪಾಕಿಸ್ತಾನ ಪ್ರವಾಸ ಕೈಗೊಂಡಿತ್ತು. 2015ರಲ್ಲಿ ಜಿಂಬಾಬ್ವೆ ತಂಡ ಸಹ ಪಾಕ್ನಲ್ಲಿ ಸರಣಿ ಆಡಿತ್ತು.