ಶಿಖರ್ ಧವನ್​'ಗೆ ಅದೃಷ್ಟ ಚೆನ್ನಾಗಿದೆ. ಕಳಪೆ ಫಾರ್ಮ್​'ನಿಂದ ಬಳಲಿ ಟೀಂ ಇಂಡಿಯಾದಿಂದ ಹೊರಬಿದ್ದರೂ ಮತ್ತೆಮತ್ತೆ ತಂಡಕ್ಕೆ ಆಯ್ಕೆಯಾಗುತ್ತಿದ್ದಾರೆ. ಈಗ ಅವರು ಟೆಸ್ಟ್​ ತಂಡಕ್ಕೂ ಸೆಲೆಕ್ಟ್ ಆಗಿದ್ದಾರೆ. ಲಂಕಾ ಟೂರ್​ನಲ್ಲೇ ಅವರೇ ಓಪನರ್

ಶಿಖರ್ ಧವನ್​'ಗೆ ಅದೃಷ್ಟ ಚೆನ್ನಾಗಿದೆ. ಕಳಪೆ ಫಾರ್ಮ್​'ನಿಂದ ಬಳಲಿ ಟೀಂ ಇಂಡಿಯಾದಿಂದ ಹೊರಬಿದ್ದರೂ ಮತ್ತೆಮತ್ತೆ ತಂಡಕ್ಕೆ ಆಯ್ಕೆಯಾಗುತ್ತಿದ್ದಾರೆ. ಈಗ ಅವರು ಟೆಸ್ಟ್​ ತಂಡಕ್ಕೂ ಸೆಲೆಕ್ಟ್ ಆಗಿದ್ದಾರೆ. ಲಂಕಾ ಟೂರ್​ನಲ್ಲೇ ಅವರೇ ಓಪನರ್​.

ಅದೃಷ್ಟ ಅಂದರೆ ಹೀಗಿರಬೇಕು. ಕಳಪೆ ಫಾರ್ಮ್​'ನಿಂದ ಬಳಲಿ ಮೂರು ಮಾದರಿ ಕ್ರಿಕೆಟ್ ತಂಡದಿಂದ ಹೊರಬಿದ್ದಿದ್ದ ಶಿಖರ್ ಧವನ್​ಗೆ ಈಗ ಲಕ್​ ತಿರುಗಿದೆ. ಇನ್ನೇನು ಗಬ್ಬರ್ ಸಿಂಗ್ ಕ್ರಿಕೆಟ್ ಲೈಫ್ ಕ್ಲೋಸ್ ಆಯ್ತು ಅಂತ ಬೊಬ್ಬೆ ಹೊಡೆಯಲು ಶುರು ಮಾಡೋ ಟೈಮ್ ಬಂದಿತ್ತು. ಅಷ್ಟರಲ್ಲಿ ಅದೃಷ್ಟ ಅವರಿಗೆ ಕೈ ಹಿಡಿಯಿತು. ಆಗ ಹಿಡಿದಿದ್ದ ಅದೃಷ್ಟವೇ ಈಗ ಕೈ ಹಿಡಿದಿದೆ. ಈಗ ಟೆಸ್ಟ್​ ತಂಡಕ್ಕೂ ಕಮ್​ಬ್ಯಾಕ್ ಮಾಡಿದ್ದಾರೆ.

ರಾಹುಲ್ ಬದಲಿಗೆ ಚಾಂಪಿಯನ್ಸ್ ಟ್ರೋಫಿ ಆಡಿದ ಧವನ್: ಈಗ ಸೀಮಿತ ಓವರ್​'ಗಳ ತಂಡದಲ್ಲಿ ಸ್ಥಾನ ಖಾಯಂ

ಕಳಪೆ ಫಾರ್ಮ್'​ನಿಂದ ಬಳಲಿದ್ದ ಶಿಖರ್ ಧವನ್​ರನ್ನ ಮೂರು ಮಾದರಿ ತಂಡದಿಂದ ಕಿಕೌಟ್ ಮಾಡಲಾಗಿತ್ತು. ಆದರೆ ಕನ್ನಡಿಗ ಕೆಎಲ್ ರಾಹುಲ್ ಇಂಜುರಿಯಾಗಿದ್ದರಿಂದ ಅವರ ಬದಲಿಗೆ ಚಾಂಪಿಯನ್ಸ್ ಟ್ರೋಫಿಗೆ ಸೆಲೆಕ್ಟ್ ಆದರು. ಇಂಗ್ಲೆಂಡ್​'ನಲ್ಲಿ ರನ್ ಕೊಳ್ಳೆ ಹೊಡೆದು ಮಿಂಚಿದ್ದರು. ಚಾಂಪಿಯನ್ಸ್ ಟ್ರೋಫಿಯಲ್ಲಿ ಅದ್ಭುತ ಪ್ರದರ್ಶನ ನೀಡೋ ಮೂಲ್ಕ ಹಲವು ದಾಖಲೆಗಳನ್ನ ಮಾಡಿದ್ದರು. ಸೆಂಚುರಿ ಸಿಡಿಸಿ ದಾಖಲೆ ನಿರ್ಮಿಸಿದ್ದರು. ಗರಿಷ್ಠ ರನ್ ಸರದಾರರಾಗಿ ಗೋಲ್ಡನ್ ಬ್ಯಾಟ್ ಸಹ ಪಡೆದಿದ್ದರು.

ಇನ್ನು ವೆಸ್ಟ್​ ಇಂಡೀಸ್​​ ವಿರುದ್ಧದ ಸರಣಿಗೂ ಆಯ್ಕೆಯಾದ ಧವನ್​, ಅಲ್ಲೂ ಉತ್ತಮ ಪ್ರದರ್ಶನವನ್ನೇ ನೀಡಿದ್ರು. ಮೊದಲೆರಡು ಪಂದ್ಯದಲ್ಲಿ ಹಾಫ್ ಸೆಂಚುರಿ ಹೊಡೆದಿದ್ದರು. ಈ ಮೂಲ್ಕ ಸೀಮಿತ ಓವರ್​​ಗಳ ತಂಡದಲ್ಲಿ ಸ್ಥಾನವನ್ನ ಖಾಯಂ ಮಾಡಿಕೊಂಡ್ರು.

ವಿಜಯ್​ ಲಂಕಾ ಸರಣಿಯಿಂದ ಔಟ್​: ವಿಜಯ್ ಬದಲಿಗೆ ಟೆಸ್ಟ್​ ತಂಡಕ್ಕೆ ಸೆಲೆಕ್ಟ್

ಶ್ರೀಲಂಕಾ ವಿರುದ್ಧದ ಮೂರು ಟೆಸ್ಟ್​​'ಗಳ ಸರಣಿಗೆ ಶಿಖರ್ ಧವನ್ ಆಯ್ಕೆಯಾಗಿರಲಿಲ್ಲ. ಆದರೆ ಈಗ ಮುರಳಿ ವಿಜಯ್​ ಬದಲಿಗೆ ಸೆಲೆಕ್ಟ್ ಆಗಿದ್ದಾರೆ. ಚೆನ್ನೈ ಬ್ಯಾಟ್ಸ್​ಮನ್​ ವಿಜಯ್, ಮಣಿಕಟ್ಟು ನೋವಿನಿಂದ ಬಳಲುತ್ತಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಅವರು ಇಂಜುರಿಯಾಗಿದ್ದರು. ಈಗ ಅವರ ಬದಲಿಗೆ ಧವನ್ ಲಂಕಾ ಪ್ಲೈಟ್ ಹತ್ತಲಿದ್ದಾರೆ.

ಟೆಸ್ಟ್ ತಂಡದಲ್ಲೂ ಮಾಡಿಕೊಳ್ತಾರಾ ಖಾಯಂ ಸ್ಥಾನ..?

ಇಡೀ ಟೀಂ ಇಂಡಿಯಾದಿಂದ ಟ್ರಾಪ್ ಮಾಡಿದಕ್ಕೆ ನಿರಾಸೆ ಅನುಭವಿಸಿದ್ದ ಧವನ್, ಒಂಡೇ ಟೀಮ್'​ಗೆ ಸೆಲೆಕ್ಟ್ ಆಗುತ್ತಿದಂತೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಅಬ್ಬರಿಸಿ, ತನ್ನೆಲ್ಲಾ ಸೇಡನ್ನ ತೀರಿಸಿಕೊಂಡ್ರು. ಟೀಕಾಕಾರರಿಗೆ ಬ್ಯಾಟ್​ನಿಂದ ಉತ್ತರಿಸಿದ್ದರು. ಈಗ ಟೆಸ್ಟ್​ ತಂಡದಲ್ಲೂ ಸ್ಥಾನ ಸಿಕ್ಕಿದೆ. ಟೆಸ್ಟ್​​ನಲ್ಲೂ ಉತ್ತಮ ಪ್ರದರ್ಶನ ನೀಡೋ ಮೂಲ್ಕ ತನ್ನ ಸ್ಥಾನವನ್ನ ಇಲ್ಲೂ ಖಾಯಂ ಮಾಡಿಕೊಳ್ತಾರಾ. ಅದನ್ನ ಶ್ರೀಲಂಕಾ ಸರಣಿ ಡಿಸೈಡ್ ಮಾಡುತ್ತೆ.

ವಿದೇಶದಲ್ಲಿರುವ ಧವನ್​​​​​ ಭಾರತಕ್ಕೆ ವಾಪಾಸ್: ಟೆಸ್ಟ್​​​ ಸರಣಿಗೆ ನಡೆಸಬೇಕಿದೆ ತಯಾರಿ

ಲಂಕಾ ಟೆಸ್ಟ್​ ಸಿರೀಸ್'​ಗೆ ಆಯ್ಕೆಯಾಗದೆ ಇದ್ದ ಧವನ್, ಹೆಂಡತಿ ಮಕ್ಕಳ ಜೊತೆ ವಿದೇಶಕ್ಕೆ ಹಾರಿದ್ದರು. ಅಲ್ಲಿ ಎಂಜಾಯ್ ಮಾಡ್ತಿದ್ದಾರೆ. ಆದ್ರೆ ಈಗ ಅವರಿಗೆ ಟೆಸ್ಟ್​ ತಂಡಕ್ಕೆ ಬುಲಾವ್ ನೀಡಿದ್ದರಿಂದ ಭಾರತಕ್ಕೆ ವಾಪಾಸ್ ಆಗಬೇಕಿದೆ. ಟೆಸ್ಟ್​​ ಸರಣಿಗಾಗಿ ವಿಶೇಷ ತಯಾರಿ ಮಾಡಬೇಕಿದೆ. ಆಡಿದ ಚೊಚ್ಚಲ ಟೆಸ್ಟ್​​​'ನಲ್ಲೇ ದಾಖಲೆಯ 187 ರನ್ ಬಾರಿಸಿದ್ದ ಗಬ್ಬರ್ ಸಿಂಗ್, ಈಗ ಸಿಂಹಳೀಯರ ನಾಡಲ್ಲಿ ಘರ್ಜಿಸಲು ರೆಡಿಯಾಗಬೇಕಿದೆ.

ಶಿಖರ್ ಧವನ್ ಟೆಸ್ಟ್​​ ರೆಕಾರ್ಡ್​ ಹೀಗಿದೆ. 23 ಟೆಸ್ಟ್​ಗಳನ್ನಾಡಿರುವ ಗಬ್ಬರ್ ಸಿಂಗ್​ 38.52ರ ಸರಾಸರಿಯಲ್ಲಿ 1464 ರನ್ ಹೊಡೆದಿದ್ದಾರೆ. 4 ಶತಕ, 3 ಅರ್ಧಶತಕಗಳನ್ನೂ ದಾಖಲಿಸಿದ್ದಾರೆ.

ಜುಲೈ 26ರಿಂದ ಭಾರತ-ಶ್ರೀಲಂಕಾ ಟೆಸ್ಟ್​ ಸಿರೀಸ್ ಆರಂಭವಾಗುತ್ತಿದೆ. ರಾಹುಲ್ ಮತ್ತು ಅಭಿನವ್ ಮುಕುಂದ್ ಇಬ್ಬರೂ ಓಪರ್​ಗಳಿದ್ದಾರೆ. ರಾಹುಲ್ ಆಡುವುದು ಕನ್ಫರ್ಮ್​. ಇನ್ನೊಂದು ಸ್ಥಾನಕ್ಕೆ ಧವನ್ ವರ್ಸಸ್ ಮುಕುಂದ್ ನಡ್ವೆ ಫೈಟ್ ಬಿದ್ದಿದೆ. ಹಸಿದ ಹೆಬ್ಬುಲಿಯಂತಯಾಗಿರುವ ಗಬ್ಬರ್​ ಸಿಂಗ್'​ಗೆ ಚಾನ್ಸ್ ಸಿಕ್ಕರೆ ಸಿಂಹಗಳ ಬೇಟೆಯಾಡೋದ್ರಲ್ಲಿ ನೋ ಡೌಟ್.