ನಿದಾಸ್ ಟ್ರೋಫಿ ಟೂರ್ನಿಯಲ್ಲಿ ಡ್ರೆಸ್ಸಿಂಗ್ ರೂಂ ಗಾಜು ಒಡೆದದ್ದು ಯಾರು ಗೊತ್ತಾ..?
ಶುಕ್ರವಾರ ನಡೆದಿದ್ದ ಪಂದ್ಯದ ವೇಳೆ ಓವರ್ನಲ್ಲಿ 2ನೇ ಬೌನ್ಸರ್ ವಿಚಾರವಾಗಿ, ಬಾಂಗ್ಲಾ-ಲಂಕಾ ಆಟಗಾರರು ಕಿತ್ತಾಡಿಕೊಂಡಿದ್ದರು. ಈ ವೇಳೆ ಸಿಟ್ಟಿಗೆದ್ದ ಬಾಂಗ್ಲಾ ಆಟಗಾರನೊಬ್ಬ ಡ್ರೆಸ್ಸಿಂಗ್ ಕೊಠಡಿಯ ಬಾಗಿಲಿನ ಗಾಜು ಒಡೆದು ಹಾಕಿದ್ದ ಎಂದು ವರದಿಯಾಗಿತ್ತು.
ಕೊಲಂಬೊ(ಮಾ.21): ಮೊನ್ನೆಯಷ್ಟೇ ಮುಕ್ತಾಯಗೊಂಡ ತ್ರಿಕೋನ ಟಿ20 ಸರಣಿಯ ಶ್ರೀಲಂಕಾ-ಬಾಂಗ್ಲಾದೇಶ ಪಂದ್ಯ ಭಾರೀ ವಿವಾದಕ್ಕೆ ಕಾರಣವಾಗಿತ್ತು.
ಶುಕ್ರವಾರ ನಡೆದಿದ್ದ ಪಂದ್ಯದ ವೇಳೆ ಓವರ್ನಲ್ಲಿ 2ನೇ ಬೌನ್ಸರ್ ವಿಚಾರವಾಗಿ, ಬಾಂಗ್ಲಾ-ಲಂಕಾ ಆಟಗಾರರು ಕಿತ್ತಾಡಿಕೊಂಡಿದ್ದರು. ಈ ವೇಳೆ ಸಿಟ್ಟಿಗೆದ್ದ ಬಾಂಗ್ಲಾ ಆಟಗಾರನೊಬ್ಬ ಡ್ರೆಸ್ಸಿಂಗ್ ಕೊಠಡಿಯ ಬಾಗಿಲಿನ ಗಾಜು ಒಡೆದು ಹಾಕಿದ್ದ ಎಂದು ವರದಿಯಾಗಿತ್ತು.
ಆದರೆ ಆ ಆಟಗಾರ ಯಾರು ಎನ್ನುವುದು ಬಹಿರಂಗಗೊಂಡಿರಲಿಲ್ಲ. ಮ್ಯಾಚ್ ರೆಫ್ರಿ ಕ್ರಿಸ್ ಬ್ರಾಡ್ ಡ್ರೆಸ್ಸಿಂಗ್ ಕೊಠಡಿಯ ಸಿಬ್ಬಂದಿಯನ್ನು ವಿಚಾರಣೆ ನಡೆಸಿದ ಬಳಿಕ, ಆ ಆಟಗಾರ ಬಾಂಗ್ಲಾ ನಾಯಕ ಶಕೀಬ್-ಅಲ್-ಹಸನ್ ಎಂದು ತಿಳಿದುಬಂದಿದೆ.