Asianet Suvarna News Asianet Suvarna News

ಕೈತ​ಪ್ಪಿದ ಕೋಚ್ ಹುದ್ದೆ: ಆಯ್ಕೆಗಾರನ ಜತೆ ಬಾಂಗರ್‌ ಜಗ​ಳ!

ಟೀಂ ಇಂಡಿಯಾ ಮಾಜಿ ಬ್ಯಾಟಿಂಗ್ ಕೋಚ್ ಸಂಜಯ್ ಬಾಂಗರ್, ಆಯ್ಕೆ ಸಮಿತಿ ಸದಸ್ಯರೊಬ್ಬರ ಜತೆ ಅನುಚಿತವಾಗಿ ವರ್ತಿಸಿದ್ದರು ಎನ್ನುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

Sacked Team India Batting Coach Sanjay Bangar involved in heated spat with selectors over coaching snub
Author
New Delhi, First Published Sep 5, 2019, 2:31 PM IST

ನವ​ದೆ​ಹ​ಲಿ[ಸೆ.05]: ವೆಸ್ಟ್‌ಇಂಡೀಸ್‌ ಪ್ರವಾಸ ಭಾರತ ಕ್ರಿಕೆಟ್‌ ತಂಡ​ದ ಆಟ​ಗಾ​ರರು, ಸಹಾ​ಯಕ ಸಿಬ್ಬಂದಿ ಪಾಲಿಗೆ ಫಲ​ದಾ​ಯ​ಕ​ವಾ​ಗಿತ್ತು. ಆದರೆ ನಿರ್ಗ​ಮಿತ ಬ್ಯಾಟಿಂಗ್‌ ಕೋಚ್‌ ಸಂಜಯ್‌ ಬಾಂಗರ್‌ ಪಾಲಿಗೆ ಈ ಪ್ರವಾಸ ಕಹಿ ನೆನ​ಪು​ಗ​ಳನ್ನು ಕಟ್ಟಿ​ಕೊ​ಟ್ಟಿತು. ರವಿ​ಶಾಸ್ತ್ರಿ, ಭರತ್‌ ಅರುಣ್‌ ಹಾಗೂ ಆರ್‌.ಶ್ರೀ​ಧರ್‌ರನ್ನು ಕೋಚ್‌ಗಳನ್ನಾಗಿ ಮುಂದು​ವ​ರಿ​ಸಲು ನಿರ್ಧ​ರಿ​ಸಿದ ಬಿಸಿ​ಸಿಐ, ಬಾಂಗರ್‌ರನ್ನು ಮಾತ್ರ ವಜಾಗೊಳಿ​ಸಿತು. ಇದ​ರಿಂದ ಸಿಟ್ಟಾದ ಬಾಂಗರ್‌, 2 ವಾರಗಳ ಹಿಂದೆ ರಾಷ್ಟ್ರೀಯ ಆಯ್ಕೆ ಸಮಿತಿ ಸದಸ್ಯ ದೇವಂಗ್‌ ಗಾಂಧಿ ಜತೆ ಜಗ​ಳ​ವಾ​ಡಿದ ಪ್ರಸಂಗ ತಡ​ವಾಗಿ ಬೆಳ​ಕಿಗೆ ಬಂದಿದೆ.

ಸಿಗದ ಸಂ‘ಜಯ’: ‘ಬಂಗಾರ’ದ ಹೆಗಲಿಗೆ ಅಪಜಯ?

ಪ್ರಧಾನ ಕೋಚ್‌ ಆಯ್ಕೆ ಮಾಡಲು ಕ್ರಿಕೆಟ್‌ ಸಲಹಾ ಸಮಿತಿ ನೇಮಿ​ಸಿದ್ದ ಬಿಸಿ​ಸಿಐ ಆಡ​ಳಿತ ಸಮಿತಿ, ಸಹಾ​ಯಕ ಸಿಬ್ಬಂದಿ​ಯನ್ನು ಆಯ್ಕೆ ಮಾಡುವ ಜವಾ​ಬ್ದಾ​ರಿ​ಯನ್ನು ರಾಷ್ಟ್ರೀಯ ಆಯ್ಕೆ ಸಮಿ​ತಿಗೆ ವಹಿ​ಸಿತ್ತು. ಎಂ.ಎಸ್‌.ಕೆ.ಪ್ರಸಾದ್‌ ನೇತೃ​ತ್ವದ ಆಯ್ಕೆ ಸಮಿ​ತಿ​ ಅಭ್ಯರ್ಥಿಗಳ ಸಂದ​ರ್ಶನ  ನಡೆ​ಸಿತ್ತು. ಬಾಂಗರ್‌, ವಿಂಡೀಸ್‌ನಿಂದ ವಿಡಿಯೋ ಕಾನ್ಫ​ರೆನ್ಸ್‌ ಮೂಲಕ ಸಂದ​ರ್ಶ​ನಕ್ಕೆ ಹಾಜ​ರಾ​ಗಿ​ದ್ದರು.

ಬಾಂಗರ್‌ ಗಲಾಟೆ ಪ್ರಸಂಗದ ಬಗ್ಗೆ ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ. ‘ಆಯ್ಕೆ ಸಮಿತಿ ಸಂದ​ರ್ಶನ ನಡೆ​ಸು​ತ್ತಿದ್ದ ಸಮ​ಯ​ದಲ್ಲಿ, ಬಾಂಗರ್‌ ವಿಂಡೀಸ್‌ನಲ್ಲಿ ತಂಡ ಉಳಿ​ದು​ಕೊಂಡಿದ್ದ ಹೋಟೆಲ್‌ನಲ್ಲೇ ಇದ್ದ ಆಯ್ಕೆಗಾರ ದೇವಾಂಗ್‌ ಗಾಂಧಿ ಕೊಠ​ಡಿಗೆ ತೆರಳಿ ಅವ​ರನ್ನು ಮನ​ಬಂದಂತೆ ನಿಂದಿ​ಸಿ​ದರು. ತಂಡ ತಮ್ಮ ಬೆಂಬ​ಲಕ್ಕೆ ನಿಲ್ಲ​ಲಿದೆ. ನನ್ನನ್ನು ವಜಾ​ಗೊ​ಳಿ​ಸುವ ನಿರ್ಧಾರ ಮುಳು​ವಾ​ಗ​ಲಿದೆ ಎಂದು ಎಚ್ಚ​ರಿ​ಸಿ​ದರು. ಈ ರೀತಿಯ ವರ್ತನೆ ತೋರುವ ಅಗ​ತ್ಯ​ವಿ​ರ​ಲಿ​ಲ್ಲ’ ಎಂದು ಬಿಸಿ​ಸಿಐ ಮೂಲ​ಗಳು ತಿಳಿ​ಸಿ​ದ್ದಾಗಿ ವರ​ದಿ​ಯಲ್ಲಿ ಹೇಳ​ಲಾ​ಗಿದೆ.

ಟೆಸ್ಟ್ ಸರಣಿ ಗೆಲುವಿನ ಬೆನ್ನಲ್ಲೇ ವಿರಾಟ್ ಕೊಹ್ಲಿಗೆ ಶಾಕ್ ಕೊಟ್ಟ ICC..!

ಈ ಪ್ರಸಂಗದ ಕುರಿತು ಆಡ​ಳಿತ ಸಮಿತಿ ಮುಖ್ಯಸ್ಥ ವಿನೋದ್‌ ರಾಯ್‌ ಗಮ​ನಕ್ಕೆ ತರಲಾ​ಯಿತು. ಈ ರೀತಿ​ಯ ವರ್ತನೆ ಅವರನ್ನು ಮರು ಆಯ್ಕೆ ಮಾಡ​ದಿ​ರಲು ಕಾರಣಗಳ​ಲ್ಲೊಂದು ಎನ್ನ​ಲಾ​ಗಿದೆ. ‘ಒಂದೊಮ್ಮೆ ಬ್ಯಾಟಿಂಗ್‌ ಕೋಚ್‌ ಹುದ್ದೆ ಸಿಗ​ದಿ​ದ್ದರೆ ಎನ್‌ಸಿಎ ಕೋಚ್‌ ಆಗಿ ನೇಮಕ ಮಾಡು​ವಂತೆ ಬಾಂಗರ್‌ ಬೇಡಿಕೆಯಿಟ್ಟರು’ ಎಂದು ಮೂಲ​ಗಳು ತಿಳಿ​ಸಿವೆ.

ದೂರು ನೀಡಿ​ದ​ರಷ್ಟೇ ಕ್ರಮ: ಬಾಂಗರ್‌ ವಿರುದ್ಧ ತಕ್ಷಣಕ್ಕೆ ಕ್ರಮಕೈಗೊ​ಳ್ಳದ ಬಿಸಿ​ಸಿಐ, ಆಯ್ಕೆಗಾರ ಗಾಂಧಿ, ಪ್ರಧಾನ ಕೋಚ್‌ ರವಿ​ಶಾಸ್ತ್ರಿ ಹಾಗೂ ತಂಡದ ನಿರ್ಗ​ಮಿತ ವ್ಯವ​ಸ್ಥಾ​ಪಕ ಸುನಿಲ್‌ ಸುಬ್ರ​ಮ​ಣಿಯಂ ಅಧಿ​ಕೃತವಾಗಿ ದೂರು ನೀಡಿ​ದ​ರಷ್ಟೇ ಪ್ರಕ​ರಣವನ್ನು ಆಡ​ಳಿತ ಸಮಿತಿ ಮುಂದಕ್ಕೆ ಕೊಂಡೊ​ಯ್ಯು​ವು​ದಾಗಿ ಸ್ಪಷ್ಟ​ಪ​ಡಿ​ಸಿದೆ.
 

Follow Us:
Download App:
  • android
  • ios