ಆಸ್ಟ್ರೇಲಿಯಾ ವಿರುದ್ಧದ 4ನೇ ಪಂದ್ಯದಲ್ಲಿ ಟೀಂ ಇಂಡಿಯಾ ಸೋತಿದ್ದೇಕೆ ಗೊತ್ತಾ..? ಈಸಿಯಾಗಿ ಪಂದ್ಯವನ್ನ ನಮ್ಮದಾಗಿಸಿಕೊಳ್ಳೋ ಅವಕಾಶವಿದ್ದಾಗ ಪಂದ್ಯವನ್ನ ಕೈಚೆಲ್ಲಿ ಕೊಹ್ಲಿ ಹುಡುಗರು ನಿರಾಸೆ ಅನುಭವಿಸಿದ್ದು ಯಾಕೆ ಗೊತ್ತಾ..? ಟೀಂ ಇಂಡಿಯಾದ ವರ್ಸ್ಟ್ ಬ್ಯಾಟಿಂಗ್ ಲೈನ್ ಅಪ್. ಹೌದು ಮೊನ್ನೆ ಬೆಂಗಳೂರಿನಲ್ಲಿ ಟೀಂ ಇಂಡಿಯಾ ಮಾಡಿದ್ದ ಎಡವಟ್ಟೇನು..? ಇಲ್ಲಿದೆ ವಿವರ
ಕೇವಲ 6 ಓವರ್'ಗಳಲ್ಲಿ 61 ರನ್ ಸಿಡಿಸೋದು ಸದ್ಯ ವಿಶ್ವದ ನಂಬರ್ 1 ಟೀಂ ಎನ್ನಸಿಕೊಂಡಿರೋ ಟೀಂ ಇಂಡಿಯಾಗೆ ದೊಡ್ಡ ವಿಷಯವೇ ಅಲ್ಲ. ಎಂಥಹ ಕಷ್ಟದ ಟಾರ್ಗೇಟ್ ಆದ್ರೂ ಸುಲಭವಾಗಿ ಗುರಿ ಮುಟ್ಟುವ ತಾಕತ್ತು ಕೊಹ್ಲಿ ಹುಡಗರಿಗೆ ಇದೆ. ಕಾರಣ ವಿಶ್ವದ ಬೆಸ್ಟ್ ಫಿನಿಷರ್'ಗಳು ಟೀಂ ಇಂಡಿಯಾದಲ್ಲಿದ್ದಾರೆ. ಆದರೆ ಮೊನ್ನೆ ಬೆಂಗಳೂರಿನಲ್ಲಿ ಕೊನೆಯ 6 ಓವರ್'ಗಳಲ್ಲಿ 61 ರನ್'ಗಳಿಸಲಾಗದೆ ಮಕಾಡೆ ಮಲಗಿದೆ.
ಬೆಂಗಳೂರಿನ ಸೋಲಿನ ಹೊಣೆ ಹೊರುವವರಾರು.?
ಬೆಸ್ಟ್ ಫಿನಿಷರ್'ಗಳಿದ್ರೂ ಮೊನ್ನೆ ತಂಡ ಸೋತಿದ್ದೇಕೆ ಎಂಬ ಪ್ರಶ್ನೆ ಈಗ ನಿಮ್ಮೆಲ್ಲರಿಗೂ ಶುರುವಾಗಿರಬಹುದು. ಆದ್ರೆ ಅದಕ್ಕೆ ಕಾರಣ ಮಾತ್ರ ಟೀಂ ಇಂಡಿಯಾ ಮ್ಯಾನೇಜ್'ಮೆಂಟ್. ಕೊಹ್ಲಿ ಹುಡುಗರು ಇಂದು ತಲೆಯ ಮೇಲೆ ಕೈ ಹೊತ್ತು ಕೂರಲು ಕಾರಣ ತಂಡದ ಮ್ಯಾನೇಜ್ಮೆಂಟ್.
ನಾಯಕ ವಿರಾಟ್ ಕೊಹ್ಲಿ, ಕೋಚ್ ರವಿಶಾಸ್ತ್ರಿಯನ್ನೊಳಗೊಂಡ ಟೀಂ ಮ್ಯಾನೇಜ್'ಮೆಂಟ್ ಮಾಡಿದ ಒಂದು ತಪ್ಪು ನಿರ್ಧಾರ ಇಂದು ಇಡೀ ದೇಶವೇ ಬೇಸರದಿಂದಿರಲು ಕಾರಣವಾಗಿದೆ. ಅಷ್ಟಕ್ಕೂ ಇವರೆಲ್ಲಾ ಮಾಡಿದ ತಪ್ಪಾದ್ರೂ ಏನ್ ಗೊತ್ತಾ..? ತಂಡದ ಬೆಸ್ಟ್ ಫಿನಿಷರ್ ಹಾರ್ದಿಕ್ ಪಾಂಡ್ಯನ ಬ್ಯಾಟಿಂಗ್ ಕ್ರಮಾಂಕವನ್ನ ಬದಲಾಯಿಸಿದ್ದು.
7ನೇ ಕ್ರಮಾಂಕದಲ್ಲಿ ಪಾಂಡ್ಯ ಕಣಕಿಳಿದ್ದಿದ್ರೆ ಜಯ ನಮ್ಮದೇ
ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಎಂಥ ಫಿನಿಷರ್ ಅನ್ನೋದು ಎಲ್ಲರಿಗೂ ಗೊತ್ತಿದೆ. ಎಷ್ಟೋ ಬಾರಿ ಏಕಾಂಗಿಯಾಗಿ ತಂಡಕ್ಕೆ ಜಯತಂದಿತ್ತಿದ್ದನ್ನ ನಾವೆಲ್ಲಾ ನೋಡೇ ಇದ್ದೇವೆ. ಇಂತಹ ಅದ್ಭುತ ಬ್ಯಾಟ್ಸ್ಮನ್ ಪಂದ್ಯದ ಕೊನೆಯ ಹಂತದಲ್ಲಿ ಬರಬೇಕು. ಆದ್ರೆ 3ನೇ ಪಂದ್ಯದಲ್ಲಿ ಎಕ್ಪರಿಮೆಂಟ್ ಎಂಬಂತೆ 4ನೇ ಕ್ರಮಾಂಕದಲ್ಲಿ ಬಡ್ತಿ ನೀಡಿದ್ರು. ಯಶಸ್ವಿ ಕೂಡ ಆದ್ರು. ಪಅಮಡ್ಯ ಅಬ್ಬರಿಸಿದ್ರು.
ಈ ಪ್ರಯೋಗ ಕೇವಲ 3ನೇ ಪಂದ್ಯದಲ್ಲಿ ಮಾತ್ರ ಆಗಿದ್ದಿದ್ರೆ 4ನೇ ಪಂದ್ಯದಲ್ಲಿ ಸೋಲು ಕಾಣುತ್ತಿರಲಿಲ್ಲ. ಆದ್ರೆ ಟೀಂ ಮ್ಯಾನೇಜ್'ಮೆಂಟ್ ಪಾಂಡ್ಯರನ್ನ 4ನೇ ಕ್ರಮಾಂಕಕ್ಕೆ ಫಿಕ್ಸ್ ಮಾಡಿಬಿಡ್ತು. ಆದ್ರೆ 4ನೇ ಕ್ರಮಾಂಕವೇನೊ ಸ್ಟ್ರಾಂಗ್ ಆಯ್ತು. ಆದ್ರೆ ಅವರು ಆಡುತ್ತಿದ್ದ 7ನೇ ಕ್ರಮಾಮಕಕ್ಕೆ ಭಾರಿ ಪೆಟ್ಟು ಬಿತ್ತು.
ಮೊನ್ನೆಯ ಪಂದ್ಯದಲ್ಲಿ ಜಾಧವ್ ಔಟಾಗುತ್ತಿದಂತೆ ಒಂದು ವೇಳೆ ಪಾಂಡ್ಯ ಕ್ರೀಸ್'ಗೆ ಬಂದಿದ್ದರೆ ಖಂಡಿತ ಟೀಂ ಇಂಡಿಯಾ ಗೆಲ್ಲುತ್ತಿತ್ತು. ಆದ್ರೆ ಕೊನೆಯಲ್ಲಿ ಧೋನಿ ಏಕಾಂಗಿ ಹೋರಟ ನಡೆಸಬೇಕಾಯ್ತು. ಸೋಲನ್ನ ಒಪ್ಪಿಕೊರ್ಳಳಬೇಕಾಯ್ತು.
ಒಟ್ಟಿನಲ್ಲಿ ಬೆಂಗಳೂರಿನ ಸೋಲಿಗೆ ಟೀಂ ಮ್ಯಾನೇಜ್'ಮೆಂಟ್ನ ತಪ್ಪು ನಿರ್ಧಾರವೇ ಮುಖ್ಯಾ ಕಾರಣ. ಅತೀಯಾಗಿ ಪ್ರಯೋಗಗಳನ್ನ ಮಾಡಿದ್ರೆ ಏನಾಗುತ್ತೆ ಅನ್ನೋದಕ್ಕೆ ಇದೇ ಬೆಸ್ಟ್ ಎಕ್ಸಾಂಪಲ್. ಈ ತಪ್ಪಿನಿಂದ ಈಗಲಾದ್ರೂ ತಂಡವನ್ನ , ಮುನ್ನಡೆಸುವವರು ಹೆಚ್ಚೆತ್ತು ಕೊಂಡ್ರೆ ಅಷ್ಟೇ ಸಾಕು.
