Asianet Suvarna News Asianet Suvarna News

Wrestlers Protest ಮಂಪರು ಪರೀಕ್ಷೆಗೆ ಸಿದ್ದ ಆದರೆ ಒಂದು ಕಂಡೀಷನ್‌: ಬ್ರಿಜ್‌ಭೂಷಣ್ ಸಿಂಗ್

ಬ್ರಿಜ್‌ಭೂಷಣ್ ಬಂಧನಕ್ಕೆ ಮುಂದುವರೆದ ಕುಸ್ತಿಪಟುಗಳ ಪ್ರತಿಭಟನೆ
ಮಂಪರು ಪರೀಕ್ಷೆಗೆ ತಾವು ಸಿದ್ದವೆಂದ ಬ್ರಿಜ್‌ಭೂಷಣ್ ಸಿಂಗ್‌
ಕುಸ್ತಿಪಟುಗಳಿಗೆ ಒಂದು ಷರತ್ತು ಹಾಕಿದ ಭಾರತೀಯ ಕುಸ್ತಿ ಫೆಡರೇಷನ್ ಅಧ್ಯಕ್ಷ

Ready To Undergo Polygraph Test But WFI Chief Brij Bhushan Singh Has A Condition kvn
Author
First Published May 22, 2023, 9:50 AM IST

ನವ​ದೆ​ಹ​ಲಿ(ಮೇ.22): ಹಲವು ಗಂಭೀರ ಆರೋ​ಪ​ಗ​ಳನ್ನು ಎದು​ರಿ​ಸು​ತ್ತಿ​ರುವ ಭಾರ​ತೀಯ ಕುಸ್ತಿ ಫೆಡ​ರೇ​ಶ​ನ್‌​(​ಡ​ಬ್ಲ್ಯು​ಎ​ಫ್‌​ಐ) ಅಧ್ಯಕ್ಷ ಬ್ರಿಜ್‌​ಭೂ​ಷಣ್‌ ಸಿಂಗ್‌ ಬಂಧ​ನಕ್ಕೆ ನೀಡಿದ್ದ ಗಡುವು ಮುಕ್ತಾ​ಯ​ಗೊಂಡ ಹಿನ್ನೆ​ಲೆ​ಯಲ್ಲಿ ಕುಸ್ತಿ​ಪ​ಟು​ಗಳು ಮೇ 28ರಂದು ನೂತನ ಸಂಸತ್‌ ಭವನ ಉದ್ಘಾ​ಟನೆ ದಿನವೇ ಸಂಸತ್‌ ಎದುರು ‘ಮಹಾ ಪಂಚಾ​ಯ​ತ್‌’ ಹೆಸರಿನಲ್ಲಿ ಪ್ರತಿಭಟನೆ ನಡೆ​ಸು​ವು​ದಾಗಿ ಕೇಂದ್ರ ಸರ್ಕಾ​ರಕ್ಕೆ ಎಚ್ಚ​ರಿಕೆ ನೀಡಿ​ದ್ದಾ​ರೆ. ಪ್ರಧಾನಿ ನರೇಂದ್ರ ಮೋದಿ ಸಂಸತ್‌ ಭವನ ಉದ್ಘಾ​ಟನೆ ನಡೆ​ಸ​ಲಿರುವ ಕಾರಣ ಕುಸ್ತಿ​ಪ​ಟುಗಳ ನಿರ್ಧಾರ ಕುತೂ​ಹ​ಲಕ್ಕೆ ಕಾರ​ಣ​ವಾ​ಗಿ​ದೆ.

ಭಾನು​ವಾರ ಕುಸ್ತಿ​ಪಟು ಸಾಕ್ಷಿ ಮಲಿಕ್‌, ಭಾರ​ತೀಯ ಕಿಸಾನ್‌ ಯೂನಿ​ಯನ್‌ ಮುಖ್ಯಸ್ಥ ರಾಕೇಶ್‌ ಟಿಕಾ​ಯತ್‌ ಹಾಗೂ ರಾಜ​ಸ್ಥಾನ, ಉತ್ತರ ಪ್ರದೇಶ, ಹರ್ಯಾಣದ ರೈತ​ರು ಸೇರಿ​ದಂತೆ ಖಾಪ್‌ ಪಂಚಾ​ಯತ್‌ ಸದ​ಸ್ಯರು ಹರ್ಯಾ​ಣದ ರೋಟಕ್‌​ನಲ್ಲಿ ಸಭೆ ನಡೆಸಿ ಈ ನಿರ್ಧಾರ ಕೈಗೊಂಡರು. ಜೊತೆಗೆ ಮೇ 23ರಂದು ಇಂಡಿ​ಯಾ ಗೇಟ್‌ಗೆ ಮೇಣದ ಬತ್ತಿ ಮೆರವಣಿಗೆ ನಡೆ​ಸಲು ತೀರ್ಮಾ​ನಿ​ಸಿ​ದ್ದಾರೆ. 

ಸಾವೆ, ಗೆಮೆಚು ಬೆಂಗಳೂರು 10ಕೆ ಓಟ​ದ​ಲ್ಲಿ ಚಾಂಪಿ​ಯ​ನ್‌!

ಈ ಬಗ್ಗೆ ಮಾಹಿತಿ ನೀಡಿ​ರುವ ಭಜ​ರಂಗ್‌ ಪೂನಿ​ಯಾ, ‘ಬ್ರಿಜ್‌​ರನ್ನು ಬಂಧಿ​ಸಲು ಮೇ 21ರ ಗಡುವು ನೀಡ​ಲಾ​ಗಿತ್ತು. ಆದರೆ ಬೇಡಿಕೆ ಈಡೇ​ರಿಲ್ಲ. ಹೀಗಾಗಿ ಅನಿ​ವಾ​ರ್ಯ​ವಾಗಿ ಕಠಿಣ ನಿರ್ಧಾರ ಕೈಗೊ​ಳ್ಳು​ತ್ತಿ​ದ್ದೇವೆ. ಮಹಾ​ಪಂಚಾ​ಯ​ತ್‌​ನಲ್ಲಿ ಮಹಿಳಾ ಕುಸ್ತಿ​ಪ​ಟು​ಗಳು ಪಾಲ್ಗೊ​ಳ್ಳ​ಲಿ​ದ್ದಾರೆ. ದೇಶ​ದೆ​ಲ್ಲೆ​ಡೆಯಿಂದ ಮಹಿ​ಳೆಯರು ಪಾಲ್ಗೊ​ಳ್ಳುವ ನಿರೀ​ಕ್ಷೆ​ಯಿದೆ’ ಎಂದಿ​ದ್ದಾ​ರೆ.

ಐಪಿಎಲ್‌ ವೀಕ್ಷಣೆಗೆ ಪ್ರವೇ​ಶ​ವಿ​ಲ್ಲ: ಆಕ್ರೋಶ!

ಶನಿವಾರದ ಐಪಿಎಲ್‌ ಪಂದ್ಯ ವೀಕ್ಷಿಸಲು ಕುಸ್ತಿ​ಪ​ಟು​ಗಳು ದೆಹ​ಲಿಯ ಕ್ರೀಡಾಂಗಣಕ್ಕೆ ಆಗ​ಮಿ​ಸಿ​ದರೂ ಅವ​ರಿಗೆ ಪೊಲೀ​ಸರು ಪ್ರವೇಶ ನಿರಾ​ಕ​ರಿ​ಸಿ​ದ ಘಟನೆ ನಡೆ​ಯಿತು. ಕುಸ್ತಿ​ಪಟು​ಗಳು ಪ್ರತಿ​ಭ​ಟ​ನೆಗೆ ಬೆಂಬಲ ಸೂಚಿ​ಸುವ ಬರ​ಹ​ವಿ​ರುವ ಟಿ-ಶರ್ಚ್‌ ಧರಿ​ಸಿ ಬಂದಿ​ದ್ದರು. ಅವ​ರನ್ನು ಪೊಲೀ​ಸರು ತಡೆ​ದಿದ್ದು, ಮೈದಾ​ನದ ಒಳ ಹೋಗಲು ಬಿಡ​ಲಿಲ್ಲ. ಪಂದ್ಯದ ಟಿಕೆಟ್‌ ಖರೀದಿಸಿದ್ದರೂ ನಮ್ಮನ್ನು ಮೈದಾ​ನಕ್ಕೆ ಬಿಡ​ಲಿಲ್ಲ ಎಂದು ಕುಸ್ತಿ​ಪ​ಟು​ಗಳು ಆಕ್ರೋಶ ವ್ಯಕ್ತ​ಪ​ಡಿ​ಸಿ​ದ್ದಾರೆ. ಆದರೆ ಮಾನ್ಯ​ವಿ​ರುವ ಟಿಕೆಟ್‌, ಪಾಸ್‌ ಹೊಂದಿದ್ದ ಯಾರನ್ನೂ ತಡೆ​ದಿಲ್ಲ ಎಂದು ಪೊಲೀ​ಸರು ಪ್ರತಿಕ್ರಿಯಿಸಿದ್ದಾರೆ.

ಮಂಪರು ಪರೀ​ಕ್ಷೆಗೆ ಸಿದ್ಧ: ಬ್ರಿಜ್‌​ಭೂ​ಷ​ಣ್‌!

ತಮ್ಮ ವಿರು​ದ್ಧದ ಆರೋ​ಪ​ಗ​ಳ​ನ್ನು ನಿರಾ​ಕ​ರಿ​ಸು​ತ್ತಿ​ರುವ ಬ್ರಿಜ್‌​ಭೂ​ಷಣ್‌ ಮಂಪರು ಪರೀ​ಕ್ಷೆಗೆ ಒಳ​ಗಾ​ಗಲಿ ಎಂಬ ಕುಸ್ತಿ​ಪ​ಟು​ಗಳ ಸವಾ​ಲನ್ನು ಡಬ್ಲ್ಯು​ಎ​ಫ್‌ಐ ಅಧ್ಯಕ್ಷ ಬ್ರಿಜ್‌​ಭೂ​ಷಣ್‌ ಸಿಂಗ್‌ ಸ್ವೀಕ​ರಿ​ಸಿದ್ದು, ಮಂಪರು ಪರೀ​ಕ್ಷೆಗೆ ಸಿದ್ಧ ಎಂದಿ​ದ್ದಾರೆ. ‘ನನ್ನ ಜೊತೆ ಭಜ​ರಂಗ್‌ ಪೂನಿಯಾ, ವಿನೇಶ್‌ ಫೋಗಾ​ಟ್‌ ಕೂಡಾ ಮಂಪರು ಪರೀ​ಕ್ಷೆಗೆ ಒಳ​ಗಾ​ಗಬೇಕು. ಅವರು ಮಂಪರು ಪರೀ​ಕ್ಷೆಗೆ ಸಿದ್ಧ​ವಿ​ದ್ದರೆ ನಾನು ಪತ್ರಿ​ಕಾ​ಗೋಷ್ಠಿ ಮೂಲಕ ಇದನ್ನು ಘೋಷಿ​ಸು​ತ್ತೇ​ನೆ’ ಎಂದು ಬ್ರಿಜ್‌ಭೂಷ​ಣ್‌ ತಮ್ಮ ಫೇಸ್ಬು​ಕ್‌​ ಖಾತೆ​ಯಲ್ಲಿ ಬರೆ​ದಿ​ದ್ದಾರೆ.

ಈ ಮೊದಲು ಕುಸ್ತಿಪಟುಗಳನ್ನು ಟೀಕಿಸುವ ಭರದಲ್ಲಿ ಬ್ರಿಜ್‌​ಭೂ​ಷಣ್‌, ದೇಶಕ್ಕಾಗಿ ಗೆದ್ದ ಪದಕಗಳ ಬಗ್ಗೆ ಹಗುರವಾಗಿ ಮಾತನಾಡಿ ವಿವಾದ ಸೃಷ್ಟಿಸಿದ್ದಾರೆ. ಉತ್ತರ ಪ್ರದೇಶದ ಸ್ಥಳೀಯ ಸುದ್ದಿ ವಾಹಿನಿಯೊಂದರ ಪತ್ರಕರ್ತ ‘ನೀವು ರಾಜೀನಾಮೆ ನೀಡದಿದ್ದರೆ ಕುಸ್ತಿಪಟುಗಳು ಪದಕಗಳನ್ನು ವಾಪಸ್‌ ಮಾಡುವುದಾಗಿ ಬೆದರಿಕೆ ಹಾಕಿದ್ದಾರಲ್ಲ’ ಎಂದು ಪ್ರಶ್ನಿಸಿದಾಗ, ಭೂಷಣ್‌ ಸಿಟ್ಟಾಗಿದ್ದಾರೆ. ‘ವಾಪಸ್‌ ಕೊಡುವುದಾದರೆ ಇಷ್ಟು ವರ್ಷ ಪಡೆದಿರುವ ಬಹುಮಾನದ ಹಣವನ್ನು ಕೊಡಲಿ. ಪದಕಗಳ ಮೌಲ್ಯ 15 ರುಪಾಯಿ ಮಾತ್ರ’ ಎಂದಿದ್ದರು.

ಭೂಷಣ್‌ರ ಈ ಹೇಳಿಕೆ ವಿರುದ್ಧ ಹರಿಹಾಯ್ದಿರುವ ಪ್ರತಿಭಟನಾ ನಿರತ ಕುಸ್ತಿಪಟುಗಳು, ‘ಕ್ರೀಡಾಪಟುಗಳನ್ನು ಭೂಷಣ್‌ ಎಷ್ಟುಕೀಳಾಗಿ ನೋಡುತ್ತಾರೆ ಎನ್ನುವುದನ್ನು ತೋರಿಸುತ್ತದೆ. ನಮ್ಮ ಇಷ್ಟುವರ್ಷಗಳ ಪರಿಶ್ರಮದ ಮೌಲ್ಯ ಕೇವಲ 15 ರು. ಎನ್ನುವ ಮೂಲಕ ಅವಮಾನಿಸಿದ್ದಾರೆ’ ಎಂದಿದ್ದಾರೆ.

Follow Us:
Download App:
  • android
  • ios