ಮೋಡಕವಿದ ವಾತಾವರಣವಿರುತ್ತದೆ ಎನ್ನುವ ಕಾರಣ ಧರ್ಮಶಾಲಾ, ಮೊಹಲಿಯಲ್ಲಿ ನಡೆಯಲಿರುವ ಪಂದ್ಯಗಳನ್ನು ನಿಗದಿತ ಸಮಯಕ್ಕಿಂತ 2 ತಾಸು ಮೊದಲೇ ಆರಂಭಿಸಲು ಬಿಸಿಸಿಐ ಮೊದಲೇ ನಿರ್ಧರಿಸಿತ್ತು.

ಶಿಮ್ಲಾ(ಡಿ.09): ಭಾರತ- ಶ್ರೀಲಂಕಾ ನಡುವೆ ಧರ್ಮಶಾಲಾದಲ್ಲಿ ಭಾನುವಾರ ನಿಗದಿಯಾಗಿರುವ ಮೊದಲ ಏಕದಿನ ಪಂದ್ಯಕ್ಕೆ ಮಳೆ ಅಡ್ಡಿಯನ್ನುಂಟು ಮಾಡುವ ಸಾಧ್ಯತೆಯಿದೆ. ಭಾನುವಾರ ಧರ್ಮಶಾಲಾದಲ್ಲಿ ವ್ಯಾಪಕ ಮಳೆ ಆಗಲಿದ್ದು, ಮಂಜು ಮುಸುಕಿದ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ಶುಕ್ರವಾರ ಮುನ್ಸೂಚನೆ ನೀಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಕುರಿತು ಪ್ರತಿಕ್ರಿಯಿಸಿರುವ ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆ, ‘ಮಳೆಬಿದ್ದರೆ ಪರಿಸ್ಥಿತಿಯನ್ನು ನಿಭಾಯಿಸಲು ನಾವು ಸಜ್ಜಾಗಿದ್ದೇವೆ. ಮೈದಾನವನ್ನು ಸ್ವಚ್ಛಗೊಳಿಸಲು ನಮ್ಮ ಬಳಿ 3 ಸೂಪರ್ ಸೋಕರ್‌'ಗಳಿವೆ’ ಎಂದಿದ್ದಾರೆ.

ಮೋಡಕವಿದ ವಾತಾವರಣವಿರುತ್ತದೆ ಎನ್ನುವ ಕಾರಣ ಧರ್ಮಶಾಲಾ, ಮೊಹಲಿಯಲ್ಲಿ ನಡೆಯಲಿರುವ ಪಂದ್ಯಗಳನ್ನು ನಿಗದಿತ ಸಮಯಕ್ಕಿಂತ 2 ತಾಸು ಮೊದಲೇ ಆರಂಭಿಸಲು ಬಿಸಿಸಿಐ ಮೊದಲೇ ನಿರ್ಧರಿಸಿತ್ತು.