ಬೋನಸ್ ಕಾ ಬಾದ್'ಷಾ ಎಂದೇ ಕರೆಸಿಕೊಳ್ಳುವ ಅನೂಪ್ ಕುಮಾರ್ ಅವರನ್ನು ಯು ಮುಂಬಾ ತನ್ನ ತಂಡದಲ್ಲಿ ಉಳಿಸಿಕೊಂಡಿದೆ

ಮುಂಬೈ(ಮೇ.15): ಮುಂಬರುವ ಜುಲೈ ತಿಂಗಳಿಂದ ಆರಂಭವಾಗಲಿರುವ 5ನೇ ಆವೃತ್ತಿಯ ಪ್ರೊ ಕಬಡ್ಡಿ ಟೂರ್ನಿಗೆ ಸದ್ಯ ಈಗೀರುವ 8 ತಂಡಗಳ ಪೈಕಿ 7 ತಂಡಗಳು ತಲಾ ಒಬ್ಬ ಆಟಗಾರನನ್ನು ತಮ್ಮ ತಂಡದಲ್ಲೇ ಉಳಿಸಿಕೊಂಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದೇ 22 ಮತ್ತು 23 ರಂದು ನವದೆಹಲಿಯಲ್ಲಿ ನಡೆಯಲಿರುವ ಪ್ರೊ ಕಬಡ್ಡಿ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ 350ಕ್ಕೂ ಹೆಚ್ಚು ಆಟಗಾರರು ಭಾಗವಹಿಸಲಿದ್ದಾರೆ. ಈ ಆವೃತ್ತಿಯಿಂದ ಹೊಸ 4 ತಂಡಗಳು ಸೇರ್ಪಡೆಗೊಳ್ಳುತ್ತಿವೆ.

ತಮ್ಮ ತಂಡದಲ್ಲೇ ಉಳಿಸಿಕೊಂಡ ಆಟಗಾರರ ಪಟ್ಟಿ ಇಂತಿದೆ:

ಪಾಟ್ನಾ ಪೈರೇಟ್ಸ್ : ಕಳೆದ ಆವೃತ್ತಿಯ ಚಾಂಪಿಯನ್ ತಂಡವು 'ಡುಬ್ಕಿ ಕಿಂಗ್' ಅಂತಲೇ ಪ್ರಸಿದ್ಧರಾದ ಸ್ಟಾರ್ ಆಟಗಾರ ಪ್ರದೀಪ್ ನರ್ವಾಲ್ ಅವರನ್ನು ಉಳಿಸಿಕೊಂಡಿದ್ದಾರೆ.

ತೆಲಗು ಟೈಟಾನ್ಸ್ : ಅತಿ ಹೆಚ್ಚು ರೈಡಿಂಗ್ ಪಾಯಿಂಟ್ ತಂದ ದಾಖಲೆ ನಿರ್ಮಿಸಿರುವ ನಾಯಕ ರಾಹುಲ್ ಚೌಧರಿಯನ್ನು ಉಳಿಸಿಕೊಳ್ಳಲಾಗಿದೆ. ಮೂರು ವರ್ಷದಿಂದಲೂ ರಾಹುಲ್ ತೆಲಗು ಟೈಟಾನ್ಸ್ ತಂಡದ ಅವಿಭಾಜ್ಯ ಅಂಗವಾಗಿದ್ದಾರೆ.

ಜೈಪುರ ಪಿಂಕ್ ಪ್ಯಾಂಥರ್ಸ್: ಯುವ ಆಟಗಾರ ರಾಜೇಶ್ ನರ್ವಾಲ್, ಅಮಿತ್ ಹೂಡಾ, ಅನುಭವಿ ಆಟಗಾರ ಜಸ್ವೀರ್ ಸಿಂಗ್, ಶಬ್ಬೀರ್ ಬಾಪು ಅವರಂತಹ ಆಟಗಾರಿದ್ದರೂ ಜೈಪುರ ತಂಡ ಯಾವುದೇ ಆಟಗಾರರನ್ನು ಉಳಿಸಿಕೊಂಡಿಲ್ಲ.

ಪುಣೇರಿ ಪಲ್ಟನ್ಸ್ : ಪುಣೇರಿ ಪಲ್ಟನ್ ತಂಡ ಈ ಬಾರಿ ವಿಶ್ವಕಪ್ ವಿಜೇತ ತಂಡದ ಹೀರೋಗಳಾದ ಮನ್ಜೀತ್ ಚಿಲ್ಲರ್ ಇಲ್ಲವೇ ಅಜಯ್ ಠಾಕೂರ್ ಅವರನ್ನು ಉಳಿಸಿಕೊಂಡಿಲ್ಲ. ಬದಲಾಗಿ ದೀಪಕ್ ನಿವಾಸ್ ಹೂಡಾ ಅವರನ್ನು ತಂಡದಲ್ಲಿ ರೀಟೈನ್ ಮಾಡಿದೆ.

ಯು ಮುಂಬಾ: ಬೋನಸ್ ಕಾ ಬಾದ್'ಷಾ ಎಂದೇ ಕರೆಸಿಕೊಳ್ಳುವ ಅನೂಪ್ ಕುಮಾರ್ ಅವರನ್ನು ಯು ಮುಂಬಾ ತನ್ನ ತಂಡದಲ್ಲಿ ಉಳಿಸಿಕೊಂಡಿದೆ

ಬೆಂಗಳೂರು ಬುಲ್ಸ್ : ಈ ಬಾರಿ ಬೆಂಗಳೂರು ಬುಲ್ಸ್ ರಿಟೈನ್ ಮಾಡಿದ ಆಟಗಾರ ಹೆಸರು ಕೇಳಿದರೆ ನಿಮಗೆ ಆಶ್ಚರ್ಯವಾಗಬಹುದು. ಈ ಬಾರಿ ಮೋಹಿತ್ ಚಿಲ್ಲರ್ ಅವರನ್ನು ಕೈಬಿಟ್ಟು ಯುವ ಆಟಗಾರ ಆಶೀಶ್ ಸಾಂಗ್ವಾನ್ ಅವರನ್ನು ರೀಟೈನ್ ಮಾಡಿದೆ.

ದಬಾಂಗ್ ಡೆಲ್ಲಿ: ಕೇವಲ ಎರಡು ತಂಡಗಳು ಮಾತ್ರ ವಿದೇಶಿ ಆಟಗಾರರನ್ನು ತಂಡದಲ್ಲಿ ಉಳಿಸಿಕೊಳ್ಳಲಾಗಿದೆ. ಅದರಲ್ಲಿ ಡೆಲ್ಲಿ ತಂಡವೂ ಒಂದು. ಕಳೆದ ಆವೃತ್ತಿಯಲ್ಲಿ ಆಲ್ರೌಂಡ್ ಆಟ ಪ್ರದರ್ಶಿಸಿದ ಮಿರಾಜ್ ಶೇಖ್ ಅವರನ್ನು ಉಳಿಸಿಕೊಂಡಿದೆ. ಕಾಶಿಲಿಂಗ್ ಅಡಿಕೆ ಅವರನ್ನು ಕೈಬಿಟ್ಟಿದ್ದು ಆಶ್ಚರ್ಯ ಮೂಡಿಸಿದ್ದಂತೂ ಸುಳ್ಳಲ್ಲ.

ಬೆಂಗಾಲ್ ವಾರಿಯರ್ಸ್: ಕೋರಿಯಾದ ಸ್ಟಾರ್ ಆಟಗಾರ ಜಾಂಗ್ ಕುನ್ ಲೀ ಕಳೆದ ಆವೃತ್ತಿಯಲ್ಲಿ ರೈಡಿಂಗ್'ನಲ್ಲಿ ಸಾಕಷ್ಟು ಗಮನ ಸೆಳೆದಿದ್ದರು. ಹಾಗಾಗಿ ಬೆಂಗಾಲ್ ವಾರಿಯರ್ಸ್ ತಂಡ ತನ್ನಲ್ಲೇ ಉಳಿಸಿಕೊಂಡಿದೆ.