Asianet Suvarna News Asianet Suvarna News

ಬೆಂಗಳೂರು ಬುಲ್ಸ್ ತಂಡದಲ್ಲಿ ಬಾಕಿ ಹಗರಣ; ಮಾಲೀಕರ ವಿರುದ್ಧ ಅಸಮಧಾನ!

ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಬೆಂಗಳೂರು ತಂಡ ಈ ಆವೃತ್ತಿಯಲ್ಲೂ ಉತ್ತಮ ಪ್ರದರ್ಶನ ನೀಡುತ್ತಿದೆ.  ಇದರ ಬೆನ್ನಲ್ಲೇ ಬಲ್ಸ್ ತಂಡದೊಳಗಿನ ಬಾಕಿ ಹಣ ಹಗರಣ ಇದೀಗ ಬೆಳಕಿಗೆ ಬಂದಿದೆ. ಕೋಟಿ ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿದ್ದು, ಫ್ರಾಂಚೈಸಿ ಭವಿಷ್ಯ ತೂಗುಯ್ಯಾಲೆಯಲ್ಲಿದೆ.

Pro kabaddi 2019 Bengaluru bulls franchise facing economical struggle
Author
Bengaluru, First Published Aug 24, 2019, 10:24 AM IST

ಬೆಂಗಳೂರು(ಆ.24):  ವೃತ್ತಿ​ಪರ ಕ್ರೀಡಾ ಲೀಗ್‌ನಲ್ಲಿ ತಂಡ​ವೊಂದನ್ನು ನಡೆ​ಸು​ವುದು ಸುಲ​ಭದ ಮಾತಲ್ಲ. ಪ್ರೊ ಕಬಡ್ಡಿ ಟೂರ್ನಿ​ಯಲ್ಲಿ ಮೊದಲ ಆವೃ​ತ್ತಿ​ಯಿಂದಲೂ ಆಡು​ತ್ತಿ​ರುವ, ಹಾಲಿ ಚಾಂಪಿ​ಯನ್‌ ಬೆಂಗಳೂರು ಬುಲ್ಸ್‌ ತಂಡ ಆರ್ಥಿಕ ಸಂಕ​ಷ್ಟ​ದ​ಲ್ಲಿದೆ. 6ನೇ ಆವೃ​ತ್ತಿ​ಯಲ್ಲಿ ತಂಡ ಪ್ರಶಸ್ತಿ ಗೆದ್ದರೂ ತಂಡ​ದೊ​ಳಗೆ ಹಲವು ಸಮ​ಸ್ಯೆಗಳು ಭುಗಿ​ಲೆ​ದಿದ್ದು, ಅದನ್ನು ಇನ್ನೂ ಬಗೆಹರಿ​ಸಿ​ಕೊ​ಳ್ಳಲು ಮಾಲೀ​ಕ​ರಿಗೆ ಸಾಧ್ಯ​ವಾ​ಗಿಲ್ಲ.

ಇದನ್ನೂ ಓದಿ: PKL7: ಬೆಂಗಳೂರು ಬುಲ್ಸ್ ನೆಗೆತಕ್ಕೆ ಅಪ್ಪಚ್ಚಿಯಾದ ತಮಿಳ್ ತಲೈವಾಸ್!

6ನೇ ಆವೃ​ತ್ತಿ​ಯ ನಿರ್ವ​ಹಣೆಗೆ ವಿವಿಧ ಮಾರಾಟಗಾರ​ರಿಂದ ಪಡೆ​ದಿದ್ದ ಸೇವೆ, ಸಿಬ್ಬಂದಿಯ ವೇತನ, ಆಡ​ಳಿತದಲ್ಲಿದ್ದ ಹಲವು ಮುಖ್ಯ ವ್ಯಕ್ತಿ​ಗ​ಳಿಗೆ ನೀಡ​ಬೇ​ಕಾದ ಹಣ ಎಲ್ಲಾ ಸೇರಿ .2.5 ಕೋಟಿಗೂ ಹೆಚ್ಚು ಬಾಕಿ ಉಳಿ​ಸಿ​ಕೊಂಡಿದೆ. ಹಳೆ ಬಾಕಿ ಚುಕ್ತಾ ಮಾಡದೆ 7ನೇ ಆವೃ​ತ್ತಿ​ಯಲ್ಲಿ ತಂಡ ಕಣ​ಕ್ಕಿ​ಳಿ​ದಿದೆ. ತಂಡ ಉಳಿ​ಸಿ​ಕೊಂಡಿ​ರುವ ಬಾಕಿ ಹಣದ ಸಂಪೂರ್ಣ ವಿವರ ‘ಕ​ನ್ನ​ಡ​ಪ್ರಭ’ಕ್ಕೆ ಲಭ್ಯ​ವಾ​ಗಿದೆ.

ಇದನ್ನೂ ಓದಿ: ಪ್ರೊ ಕಬಡ್ಡಿ 2019: ಪಾಟ್ನಾಗೆ 6ನೇ ಸೋಲು!

ಆಗಿ​ರು​ವು​ದೇ​ನು?
ಬೆಂಗ​ಳೂರು ಬುಲ್ಸ್‌ ತಂಡದ ಮಾಲೀ​ಕರು ಯಾರು ಎನ್ನುವ ಮಾಹಿತಿ ಇದು ವರೆಗೂ ಬಹು​ತೇ​ಕ​ರಿಗೆ ತಿಳಿ​ದಿಲ್ಲ. ತಂಡದ ನಿಜ​ವಾದ ಮಾಲೀ​ಕರು ಸ್ವಘೋ​ಷಿತ ದೇವ ಮಾನವ ಕಲ್ಕಿ ಭಗ​ವಾನ್‌ರ ಪುತ್ರ, ಉದ್ಯಮಿ ಎನ್‌.ವಿ.​ಕೃಷ್ಣ. ಆದರೆ ಮೊದಲ ಆವೃ​ತ್ತಿ​ಯಿಂದ​ಲೂ ತಂಡದ ನಿರ್ವ​ಹಣೆ ಮಾಡಿ​ಕೊಂಡು ಬಂದಿದ್ದು ಸಿಇಒ ಉದಯ್‌ ಸಿನ್ಹಾ​ವಾಲಾ. ಪ್ರತಿ ವರ್ಷವೂ ಉದಯ್‌ ಹಾಗೂ ಅವರ ತಂಡವೇ, ಬುಲ್ಸ್‌ನ ತರ​ಬೇತಿ ಶಿಬಿರದಿಂದ ಹಿಡಿದು ಆಟ​ಗಾ​ರ​ರಿಗೆ ಅಗತ್ಯವಿದ್ದ ಎಲ್ಲಾ ಸೌಲ​ಭ್ಯ​ಗ​ಳ ವ್ಯವಸ್ಥೆ ಮಾಡು​ತ್ತಿತ್ತು. 5ನೇ ಆವೃ​ತ್ತಿಯ ಕೊನೆಯಲ್ಲಿ ಮಾಲೀ​ಕ​ರಿಗೆ ಆರ್ಥಿಕ ಸಂಕಷ್ಟಎದು​ರಾ​ಗಿದೆ. ಇದು 6ನೇ ಆವೃ​ತ್ತಿ​ಯಲ್ಲೂ ಮುಂದು​ವ​ರಿದಿದ್ದು, ತಂಡದ ನಿರ್ವ​ಹಣೆಗೆ ಮಾಲೀ​ಕ​ರು ಹಣ ನೀಡಿಲ್ಲ.

ಉದಯ್‌ ಹಾಗೂ ಅವರ ತಂಡದ ಮೇಲಿದ್ದ ನಂಬಿಕೆಯಿಂದಲೇ ಮಾರಾಟಗಾರರು ಅಗತ್ಯ ಸೇವೆಗಳನ್ನು ಒದ​ಗಿ​ಸಿ​ದ್ದಾರೆ. ಕಳೆದ ವರ್ಷ ಬೆಂಗ​ಳೂರು ತಂಡದ ತವರು ಚರಣದ ಪಂದ್ಯ​ಗಳು ಪುಣೆಗೆ ಸ್ಥಳಾಂತರಗೊಂಡಿತ್ತು. ಅಲ್ಲಿ ಕ್ರೀಡಾಂಗಣದ ಮ್ಯಾಟ್‌ ಅಳ​ವ​ಡಿಕೆ, ಪ್ರಚಾರ ಕಾರ್ಯ ಸೇರಿ​ದಂತೆ ವಿವಿಧ ಸೇವೆಗಳನ್ನು ಪಡೆ​ದು 8 ತಿಂಗ​ಳಾ​ದರೂ ಇನ್ನೂ ಹಣ ಬಾಕಿ ನೀಡಿಲ್ಲ.

ಹೊಸ ಆಡ​ಳಿತ ರಚನೆ!
6 ವರ್ಷಗಳ ಕಾಲ ತಂಡವನ್ನು ಮುನ್ನ​ಡೆ​ಸಿದ ಸಿಇಒ ಉದಯ್‌ ಸೇರಿ​ದಂತೆ ಅವರ ತಂಡ​ವನ್ನು 6ನೇ ಆವೃತ್ತಿ ಬಳಿ​ಕ ಬುಲ್ಸ್‌ ಮಾಲೀ​ಕರು ಕಿತ್ತು ಹಾಕಿ, ಹೊಸ ಆಡ​ಳಿತದೊಂದಿಗೆ 7ನೇ ಆವೃ​ತ್ತಿ​ಯಲ್ಲಿ ಕಣ​ಕ್ಕಿ​ಳಿ​ದಿ​ದ್ದಾರೆ. ಈ ಬಗ್ಗೆ ಪ್ರತಿ​ಕ್ರಿ​ಯಿ​ಸಿದ ಉಯದ್‌, ‘ಕ​ಬಡ್ಡಿ ಬೆಳೆ​ಯ​ಬೇಕು ಎನ್ನುವ ಉದ್ದೇ​ಶ​ದಿಂದ ಆರ್ಥಿಕ ಸಂಕ​ಷ್ಟದ ನಡುವೆಯೂ ತಂಡ ನಿರ್ವ​ಹಣೆ ಮಾಡಿ​ದೆವು. ಪ್ರತಿ ಸಂಸ್ಥೆಗೂ ಸಂಕಷ್ಟಎದು​ರಾ​ಗು​ತ್ತದೆ. ಆದರೆ ಬುಲ್ಸ್‌ ಮಾಲೀ​ಕರು ನಮ್ಮನ್ನು ನಡೆ​ಸಿ​ಕೊಂಡ ರೀತಿ ಸರಿ​ಯಲ್ಲ. ನಮ್ಮ ಕಚೇ​ರಿಯ ಸಹಾ​ಯಕ (ಆ​ಫೀಸ್‌ ಬಾಯ್‌) ತನ್ನ ಕಿಸೆಯಿಂದ .45 ಸಾವಿರ ಖರ್ಚು ಮಾಡಿ​ದ್ದಾನೆ. ಆತನಿಗೂ ಬಾಕಿ ಪಾವ​ತಿ​ಸು​ತ್ತಿಲ್ಲ. ತಂಡದ ಫಿಸಿ​ಯೋ, ವಕೀಲರು ಸೇರಿ​ದಂತೆ ಅನೇ​ಕ​ರಿಗೆ ಕೊಡ​ಬೇ​ಕಾದ ಹಣ ಬಾಕಿ ಇದೆ. ಸಂಸ್ಥೆಯಲ್ಲಿ ಕೆಲಸ ಮಾಡುವ ಎಲ್ಲರಿಗೂ ದೊಡ್ಡ ಮೊತ್ತದ ವೇತನ ಸಿಗು​ವು​ದಿಲ್ಲ. ಅಂಥ​ವ​ರಿಗೆ ಮೋಸವಾಗ​ಬಾ​ರ​ದು’ ಎಂದರು.

ಈ ಸಂಬಂಧ ಬುಲ್ಸ್‌ ತಂಡದ ಸಹ ಮಾಲೀ​ಕ ರಾಜು ಪಶು​ಪತಿ ಅವ​ರಿಂದ ಪ್ರತಿ​ಕ್ರಿಯೆ ಪಡೆ​ಯಲು ‘ಕ​ನ್ನ​ಡ​ಪ್ರ​ಭ’ ನಡೆ​ಸಿ​ತು. ಆದರೆ ರಾಜು ಅವರು ಉತ್ತ​ರಿ​ಸಲಿಲ್ಲ.

ಒಂದು ಆವೃ​ತ್ತಿಗೆ ಖರ್ಚೆ​ಷ್ಟು, ಲಾಭ​ವೆ​ಷ್ಟು?
ಆಟ​ಗಾರರ ವೇತನ, ಪಂಚ​ತಾರಾ ಹೋಟೆಲ್‌ ಕೊಠಡಿ, ವಿಮಾನ ಟಿಕೆಟ್‌, ಆಟ​ಗಾ​ರರ ತರ​ಬೇತಿ ಶಿಬಿರ, ಆಹಾರ, ಪೂರಕ ಆಹಾರ (ಫುಡ್‌ ಸಪ್ಲಿ​ಮೆಂಟ್ಸ್‌), ಪ್ರೋಟಿನ್‌, ಫಿಸಿ​ಯೋ, ವೈದ್ಯರು ಹೀಗೆ ಎಲ್ಲಾ ಸೇರಿ ಒಂದು ಆವೃತ್ತಿಗೆ 12 ಕೋಟಿ ವರೆಗೂ ಖರ್ಚಾ​ಗು​ತ್ತದೆ. ಲೀಗ್‌ ಮಾಲೀ​ಕ​ತ್ವ ಹೊಂದಿ​ರುವ ಸ್ಟಾರ್‌ ಹಾಗೂ ಮಶಾಲ್‌ ಸ್ಪೋಟ್ಸ್‌ರ್‍ ಪ್ರಸಾರ ಹಕ್ಕಿನಿಂದ ಬರುವ ಹಣದಲ್ಲಿ ಪ್ರತಿ ತಂಡಕ್ಕೆ 6 ಕೋಟಿ ನೀಡು​ತ್ತದೆ. ಇನ್ನು​ಳಿದ ಹಣವನ್ನು ಪ್ರಾಯೋ​ಜ​ಕತ್ವ ಒಪ್ಪಂದಗಳಿಂದ ತಂಡ​ಗಳು ಪಡೆ​ಯ​ಬೇಕು. 6ನೇ ಆವೃ​ತ್ತಿ​ಯಲ್ಲಿ ಬುಲ್ಸ್‌ ಚಾಂಪಿ​ಯನ್‌ ಆಗಿ​ದ್ದ​ಕ್ಕೆ 3 ಕೋಟಿ ಹೆಚ್ಚು​ವರಿ ಮೊತ್ತ ಸಿಕ್ಕಿದೆ. ಹೀಗಾಗಿ ಆರ್ಥಿಕ ಸಮಸ್ಯೆ ಎದು​ರಾ​ಗುವ ಸಾಧ್ಯತೆ ತೀರಾ ಕಡಿಮೆ. ಹೀಗಿದ್ದು, 2.5 ಕೋಟಿ ಬಾಕಿ ಉಳಿ​ಸಿ​ಕೊಂಡಿ​ರು​ವುದು ಅನು​ಮಾನ ಮೂಡಿ​ಸು​ತ್ತಿದೆ ಎಂದು ತಂಡ​ದಲ್ಲಿ 6 ವರ್ಷ ವ್ಯವ​ಸ್ಥಾ​ಪ​ಕ​ರಾಗಿದ್ದವರು ಹೇಳಿ​ದ್ದಾರೆ.

ಪಾವ​ತಿ​ಸ​ಬೇ​ಕಿ​ರುವ ಬಾಕಿ ವಿವರ
ಸಿಬ್ಬಂದಿ ವೇತ​ನ    3.6 ಲಕ್ಷ
ಜಿಎಸ್‌ಟಿ    1.27 ಕೋಟಿ
ಪುಣೆ ಮಾರಾಟಗಾರರಿ​ಗೆ ಬಾಕಿ    37.78 ಲಕ್ಷ
ವಿವಿಧ ಮಾರಾಟಗಾರ​ರಿಗೆ ಬಾಕಿ    49.05 ಲಕ್ಷ

ವರದಿ: ಸ್ಪಂದನ್‌ ಕಣಿ​ಯಾರ್‌

Follow Us:
Download App:
  • android
  • ios