ಭಾರತೀಯ ಅಭಿಮಾನಿಗಳ ಮನಗೆದ್ದ ಪಾಕ್ ಆಟಗಾರನ ಈ ಟ್ವೀಟ್: ಧೋನಿ, ಕೊಹ್ಲಿ ಯುವಿಗೆ ಧನ್ಯವಾದ ಹೇಳಿದ್ದೇಕೆ?
ಚಾಂಪಿಯನ್ಸ್ ಟ್ರೋಫಿಯ ಫನಲ್ ಮುಗಿದು ವಿನ್ನರ್ಸ್ ಟ್ರೋಫಿಯನ್ನು ತಮ್ಮ ದೇಶಕ್ಕೆ ಕೊಂಡೊಯ್ದೂ ಆಗಿದೆ. ಆದರೆ ಜನರು ಮಾತ್ರ ಈ ಗುಂಗಿನಿಂದ ಇನ್ನೂ ಹೊರ ಬಂದಿಲ್ಲ, ಸಾಮಾಜಿಕ ಜಾಲಾತಾಣಗಳೂ ಈ ನೆನಪನ್ನು ಮರೆಯಲು ಬಿಡುತ್ತಿಲ್ಲ. ಆದರೆ ಹಿಂದಿನ ಬಾರಿಗೆ ಹೋಲಿಸಿದರೆ ಈ ಬಾರಿ ಎರಡೂ ದೇಶದ ಆಟಗಾರರ ನಡುವೆ ಉತ್ತಮ ಸಂಬಂಧ ಬೆಸೆದುಕೊಂಡಿರುವುದು ಸಾಮಾಜಿಕ ಜಾಲಾತಾಣಗಳಲ್ಲಿ ಹೆಚ್ಚು ಕಂಡು ಬಂದಿದೆ. ಆಟಗಾರರು ತಮ್ಮ ಕ್ರೀಡಾ ಮನೋಭಾವದಿಂದ ಆಟ ಯಾವತ್ತಿದ್ದರೂ ಗಡಿ ವಿಚಾರಕ್ಕೆ ಸೀಮಿತವಲ್ಲ ಎಂಬುವುದನ್ನು ಸಾಬೀತುಪಡಿಸಿದ್ದಾರೆ.
ಚಾಂಪಿಯನ್ಸ್ ಟ್ರೋಫಿಯ ಫನಲ್ ಮುಗಿದು ವಿನ್ನರ್ಸ್ ಟ್ರೋಫಿಯನ್ನು ತಮ್ಮ ದೇಶಕ್ಕೆ ಕೊಂಡೊಯ್ದೂ ಆಗಿದೆ. ಆದರೆ ಜನರು ಮಾತ್ರ ಈ ಗುಂಗಿನಿಂದ ಇನ್ನೂ ಹೊರ ಬಂದಿಲ್ಲ, ಸಾಮಾಜಿಕ ಜಾಲಾತಾಣಗಳೂ ಈ ನೆನಪನ್ನು ಮರೆಯಲು ಬಿಡುತ್ತಿಲ್ಲ. ಆದರೆ ಹಿಂದಿನ ಬಾರಿಗೆ ಹೋಲಿಸಿದರೆ ಈ ಬಾರಿ ಎರಡೂ ದೇಶದ ಆಟಗಾರರ ನಡುವೆ ಉತ್ತಮ ಸಂಬಂಧ ಬೆಸೆದುಕೊಂಡಿರುವುದು ಸಾಮಾಜಿಕ ಜಾಲಾತಾಣಗಳಲ್ಲಿ ಹೆಚ್ಚು ಕಂಡು ಬಂದಿದೆ. ಆಟಗಾರರು ತಮ್ಮ ಕ್ರೀಡಾ ಮನೋಭಾವದಿಂದ ಆಟ ಯಾವತ್ತಿದ್ದರೂ ಗಡಿ ವಿಚಾರಕ್ಕೆ ಸೀಮಿತವಲ್ಲ ಎಂಬುವುದನ್ನು ಸಾಬೀತುಪಡಿಸಿದ್ದಾರೆ.
ಇದೀಗ ಪಾಕ್ ತಂಡದ ಓಪನರ್ ಅಜರ್ ಅಲಿ ಮಾಡಿರುವ ಒಂದು ಟ್ವೀಟ್ ಇಂತಹುದೇ ಮನೋಭಾವ ಮತ್ತೆ ಹುಟ್ಟಿಸುವಂತೆ ಮಾಡಿದೆ. ಇವರ ಈ ಟ್ವೀಟ್ ಭಾರತೀಯರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ತಮ್ಮ ಟ್ವೀಟ್'ನಲ್ಲಿ ತನ್ನ ಮಕ್ಕಳ ಫೋಟೋ ಶೇರ್ ಮಾಡಿಕೊಂಡಿರುವ ಅಜರ್ ಅಲಿ 'ನನ್ನ ಮಕ್ಕಳಿಗಾಗಿ ಸಮಯ ಕೊಟ್ಟ ಈ ಕ್ರಿಕೆಟ್ ದಿಗ್ಗಜರಿಗೆ ನನ್ನ ಧನ್ಯವಾದಗಳು' ಎಂದು ಧೋನಿ, ವಿರಾಟ್ ಹಾಗೂ ಯುವಿಗೆ ಧನ್ಯವಾದ ಹೇಳಿದ್ದಾರೆ. ಅಜರ್ ಮಾಡಿರುವ ಈ ಟ್ವೀಟ್'ಗೆ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದೆ.
Thanks to these legends for sparing their time for my kids they were so happy.... @msdhoni @imVkohli @YUVSTRONG12 pic.twitter.com/mxWlwsOxrI
— Azhar Ali (@AzharAli_) June 20, 2017
ಈ ಟ್ವೀಟ್ ಬಾಲಿವುಡ್'ನ ಖ್ಯಾತ ಸಿನಿಮಾ ನಿರ್ದೇಶಕ ಮಹೇಶ್ ಭಟ್ ಅವರ ಮನಗೆಲ್ಲುವಲ್ಲಿಯೂ ಯಶಸ್ವಿಯಾಗಿದೆ. ಈ ಟ್ವೀಟ್'ಗೆ ಪ್ರತಿಕ್ರಿಯಿಸಿರುವ ಅವರು 'ಮಾನವೀಯತೆ ಮರುಕಳಿಸಿದೆ! ಜಗತ್ತು ನಮ್ಮ ಕ್ರಿಯೆಗಳಿಂದ ಬದಲಾಗುತ್ತದೆ. ನಮ್ಮ ಯೋಚನೆರಗಳಿಂದಲ್ಲ' ಎಂದಿದ್ದಾರೆ. ಇದಕ್ಕೆ ಪ್ರತಿಯಾಗಿ ಅಜರ್ ಕೂಡಾ ಪ್ರತಿಕ್ರಿಯಿಸಿದ್ದು ಇವರ ಮೇಲೆ ನನಗೆ ಅಪಾರ ಅಭಿಮಾನವಿದೆ ಎಂದಿದ್ದಾರೆ.
Thanks to these legends for sparing their time for my kids they were so happy.... @msdhoni @imVkohli @YUVSTRONG12 pic.twitter.com/mxWlwsOxrI
— Azhar Ali (@AzharAli_) June 20, 2017
Humanity restored! The world is changed by your action not your opinion.
— Mahesh Bhatt (@MaheshNBhatt) June 20, 2017
ಹಲವರು ಧೋನಿ, ಕೊಹ್ಲಿ ಹಾಗೂ ಯುವಿಯನ್ನು ಕ್ರಿಕೆಟ್ ದಿಗ್ಗಜರು ಎಂದು ಸಂಭೋದಿಸಿದ್ದರಿಂದ ಅಜರ್'ಗೆ ಧನ್ಯವಾದ ತಿಳಿಸಿದ್ದಾರೆ.
Yup great legends of the game and respect them alot.
— Muddassir Iqbal (@mi78m) June 20, 2017
The best part addressing them as legends :) Thanks a ton @AzharAli_ :)
— Rohit Venkatraman (@RohitvNiranjan) June 20, 2017
ಇನ್ನು ಕೆಲವರು ಕ್ರಿಕೆಟ್'ನ ಮಹಿಮೆಯೇ ಅಂತಹುದು, ಇದನ್ನೇ ಮಾನವೀಯತೆ ಎನ್ನುವುದು ಎಂದಿದ್ದಾರೆ.
that's the spirit behind the cricket..isse hi insaniyat kehte hai...
— saad tailor (@saadtailor11) June 20, 2017
There is no substitute 4 humbleness.Great players are remembered in history as great not 4 their playing skills but 4 their attitute
— MAK (@MAK57095179) June 20, 2017
Wonderful to see Indian legends doing what makes them a wonderful human being and legend in its true essence. Thanks Team India.
— Mohsin (@Mohsin_Bhagt) June 20, 2017
ಕೆಲ ದಿನಗಳ ಹಿಂದಷ್ಟೇ ಇಂತಹುದೇ ಮನೋಭಾವ ಹುಟ್ಟಿಸುವಂತಹ 'ಧೋನಿ ಪಾಕ್ ಕ್ರಿಕೆಟರ್ ಸರ್ಫರಾಜ್ ಮಗನನ್ನು ಎತ್ತಿಕೊಂಡಿದ್ದ ಫೋಟೋ' ಒಂದು ವೈರಲ್ ಆಗಿತ್ತು. ಇದು ಇಂಡೋ ಪಾಕ್ ಅಭಿಮಾನಿಗಳ ಹೃದಯಗೆದ್ದಿತ್ತು.
This picture captures the soul of Ind-Pak matches. Enemies on the field. BFFs off the field. Dhoni with Sarfaraz's son, Abdullah. pic.twitter.com/O6p3CPpIUn
— Humayoun Khan (@HumayounAK) June 17, 2017