ಪಿ.ವಿ. ಸಿಂಧು ಶ್ರೇಷ್ಠ ಆಟಗಾರ್ತಿ ಅಲ್ಲ ಎಂದ ಶ್ರೇಷ್ಠ ಆಟಗಾರ
ಸಿಂಧು ಇನ್ನೂ ಹಲವು ವಿಭಾಗಗಳಲ್ಲಿ ಗಮನಹರಿಸಿ, ಹಿಡಿತ ಸಾಧಿಸಬೇಕು ಅದಕ್ಕಾಗಿ ಆಕೆ ಇನ್ನೂ ಹೆಚ್ಚು ಶ್ರಮ ಪಡಬೇಕು
ಚೆನ್ನೈ (ಅ.17): ಪಿ.ವಿ.ಸಿಂಧು ಒಲಂಪಿಕ್ಸ್ನಲ್ಲಿ ಪದಕ ಗೆದ್ದಮಾತ್ರಕ್ಕೆ ಆಕೆ ಪರಿಪೂರ್ಣ ಆಟಗಾರ್ತಿಯಾಗೋಕೆ ಸಾಧ್ಯವಿಲ್ಲ. ಸಿಂಧು ಇನ್ನೂ ಹಲವು ವಿಭಾಗಗಳಲ್ಲಿ ಗಮನಹರಿಸಿ, ಹಿಡಿತ ಸಾಧಿಸಬೇಕು ಅದಕ್ಕಾಗಿ ಆಕೆ ಇನ್ನೂ ಹೆಚ್ಚು ಶ್ರಮ ಪಡಬೇಕು ಎಂದು ಸಿಂಧುಳ ತರಬೇತುದಾರ ಮಾಜಿ ಬ್ಯಾಡ್ಮಿಟಂನ್ ಚಾಂಪಿಯನ್ ಪುಲ್ಲೇಲ ಗೋಪಿಚಂದ್ ಹೇಳಿದ್ದಾರೆ. ಇಂದಿನಿಂದ ಡೆನ್ಮಾರ್ಕ್ ಓಪನ್ನಲ್ಲಿ ಭಾಗವಹಿಸುತ್ತಿರುವ ಸಿಂಧು ಪ್ರಶಸ್ತಿ ಏತ್ತಿ ಹಿಡಿಯುವ ವಿಶ್ವಾಸದಲ್ಲಿದ್ದಾರೆ.