Asianet Suvarna News Asianet Suvarna News

ಗಿಲ್‌ ಕಾರಿಗೆ ಅಡ್ಡ ಬಂದ ಮೂವರ ದುರ್ಮ​ರ​ಣ

ಕಾರು ರ‍್ಯಾಲಿ ವೇಳೆ ಅರ್ಜುನ ಪ್ರಶಸ್ತಿ ವಿಜೇತ ಗೌರವ್ ಗಿಲ್ ಕಾರಿಗೆ ಸಿಕ್ಕಿ ಮೂವರು ಮೃತರಾದ ಧಾರುಣ ಘಟನೆ ಶನಿವಾರ ಸಂಭವಿಸಿದೆ. ಪರಿಣಾಮ ಮೋಟಾರ್‌ ರ‍್ಯಾಲಿಯನ್ನೇ ಸ್ಥಗಿತಗೊಳಿಸಲಾಗಿದೆ. ಈ ಕುರಿತಾದ ವರದಿ ಇಲ್ಲಿದೆ...

National Rally Championship Gaurav gill car hits bike 3 people Died
Author
Barmer, First Published Sep 22, 2019, 3:16 PM IST

ಬಾರ್ಮರ್‌ (ಸೆ.22): ಭಾರ​ತದ ಖ್ಯಾತ ಮೋಟಾರ್‌ ರ‍್ಯಾಲಿ ಚಾಂಪಿ​ಯನ್‌ ಗೌರವ್‌ ಗಿಲ್‌ ಕಾರಿಗೆ ಅಡ್ಡ ಬಂದ ಮೂವರು ಸಾವ​ನ್ನ​ಪ್ಪಿದ ಘಟನೆ ಶನಿ​ವಾರ ಇಲ್ಲಿ ರಾಷ್ಟ್ರೀಯ ರ‍್ಯಾಲಿ ಚಾಂಪಿ​ಯನ್‌ಶಿಪ್‌ ವೇಳೆ ಸಂಭ​ವಿ​ಸಿದೆ. 

ದಕ್ಷಿಣ ಡೇರ್ ರ‍್ಯಾಲಿ: ಗೌರವ್ ಗಿಲ್ ಮಡಿಲಿಗೆ ಚಾಂಪಿಯನ್ ಪ್ರಶಸ್ತಿ!

ಮೋಟಾರ್‌ಸ್ಪೋಟ್ಸ್‌’ನಲ್ಲಿ ಅರ್ಜುನ ಪ್ರಶಸ್ತಿ ಪಡೆದ ಹೆಗ್ಗ​ಳಿಕೆಗೆ ಪಾತ್ರ​ರಾ​ಗಿದ್ದ ಗಿಲ್‌ ಸಹ ಅಪ​ಘಾತದಲ್ಲಿ ಗಾಯ​ಗೊಂಡಿದ್ದು ಆಸ್ಪತ್ರೆಗೆ ದಾಖ​ಲಾ​ಗಿ​ದ್ದಾರೆ. ದುರ್ಘ​ಟನೆಯಲ್ಲಿ ಪ್ರಾಣ ಕಳೆ​ದು​ಕೊಂಡ​ರ​ವ​ನ್ನು ನರೇಂದ್ರ, ಪುಷ್ಪಾ ಹಾಗೂ ಇವ​ರಿ​ಬ್ಬರ ಮಗ ಜಿತೇಂದ್ರ ಎಂದು ಗುರು​ತಿ​ಸ​ಲಾ​ಗಿದೆ. 

ಕಮಿಷನರ್ ಸಾಹೇಬ್ರೇ... ಇದೇನಾ ಟ್ರಾಫಿಕ್ ಪೊಲೀಸಿಂಗ್ ಅಂದ್ರೆ?

ರ‍್ಯಾಲಿ ಕಾರಣ ರಸ್ತೆ ಬಂದ್‌ ಮಾಡ​ಲಾ​ಗಿತ್ತು. ಆದರೂ ಭದ್ರತಾ ಸಿಬ್ಬಂದಿ ಜತೆ ವಾಗ್ವಾದ ನಡೆಸಿ ದ್ವಿಚಕ್ರ ವಾಹ​ನ​ದಲ್ಲಿ ರಸ್ತೆಗಿಳಿದ ನರೇಂದ್ರ ಕುಟುಂಬ, 145 ಕಿ.ಮೀ ವೇಗದಲ್ಲಿ ಆಗ​ಮಿ​ಸು​ತ್ತಿದ್ದ ಕಾರಿಗೆ ಡಿಕ್ಕಿ ಹೊಡೆದು ಸ್ಥಳ​ದಲ್ಲೇ ಪ್ರಾಣ ಬಿಟ್ಟಿತು ಎಂದು ಪ್ರತ್ಯಕ್ಷದರ್ಶಿ​ಗಳು ತಿಳಿ​ಸಿ​ದ್ದಾರೆ. ಈ ಘಟನೆಯಿಂದಾಗಿ ರ‍್ಯಾಲಿ ರದ್ದು​ಗೊ​ಳಿ​ಸ​ಲಾ​ಯಿತು.
 

Follow Us:
Download App:
  • android
  • ios