Asianet Suvarna News Asianet Suvarna News

ಕರುಣ್ ಆಯ್ತು ಈಗ ವಿಜಯ್ ಸರದಿ: ಬಿಸಿಸಿಐನಲ್ಲಿ ಏನ್ ನಡೀತಿದೆ..?

ಇಂಗ್ಲೆಂಡ್ ವಿರುದ್ಧ ಸರಣಿಯ ಕೊನೆ 2 ಟೆಸ್ಟ್‌ಗಳಿಗೆ ವಿಜಯ್‌ರನ್ನು ಕೈಬಿಡಲಾಗಿತ್ತು. ಈ ಸಂಬಂಧ ಬುಧವಾರ ವಿಜಯ್ ಹಜಾರೆ ಪಂದ್ಯದ ವೇಳೆ ಮಾತನಾಡಿದ ವಿಜಯ್, ‘ನನ್ನನ್ನು ತಂಡದಿಂದ ಕೈಬಿಟ್ಟಿದ್ದಕ್ಕೆ ಆಯ್ಕೆಗಾರರು ಸೂಕ್ತ ಕಾರಣಗಳನ್ನು ನೀಡಿಲ್ಲ. ತಂಡದಿಂದ ಕೈಬಿಟ್ಟ ಬಳಿಕ ಈವರೆಗೂ ಯಾರೂ ನನ್ನನ್ನು ಸಂಪರ್ಕಿಸಿಲ್ಲ’ ಎಂದಿದ್ದಾರೆ.

Murali Vijay expresses disappointment at lack of communication from national Cricket selectors
Author
Chennai, First Published Oct 5, 2018, 10:50 AM IST

ಚೆನ್ನೈ[ಅ.05]: ಬಿಸಿಸಿಐ ಆಯ್ಕೆ ಸಮಿತಿ ವಿರುದ್ಧ ಕರುಣ್ ನಾಯರ್ ಅಸಮಾಧಾನ ತೋರಿದ ಬೆನ್ನಲ್ಲೇ ಭಾರತ ತಂಡದ ಮತ್ತೊಬ್ಬ ಕ್ರಿಕೆಟಿಗ ಮುರಳಿ ವಿಜಯ್ ಸಹ ಆಯ್ಕೆ ಸಮಿತಿ ತಮ್ಮ ಜತೆ ಸರಿಯಾದ ಸಂವಹನ ನಡೆಸಿಲ್ಲ ಎಂದು ಆರೋಪಿಸಿದ್ದಾರೆ. 

ಇಂಗ್ಲೆಂಡ್ ವಿರುದ್ಧ ಸರಣಿಯ ಕೊನೆ 2 ಟೆಸ್ಟ್‌ಗಳಿಗೆ ವಿಜಯ್‌ರನ್ನು ಕೈಬಿಡಲಾಗಿತ್ತು. ಈ ಸಂಬಂಧ ಬುಧವಾರ ವಿಜಯ್ ಹಜಾರೆ ಪಂದ್ಯದ ವೇಳೆ ಮಾತನಾಡಿದ ವಿಜಯ್, ‘ನನ್ನನ್ನು ತಂಡದಿಂದ ಕೈಬಿಟ್ಟಿದ್ದಕ್ಕೆ ಆಯ್ಕೆಗಾರರು ಸೂಕ್ತ ಕಾರಣಗಳನ್ನು ನೀಡಿಲ್ಲ. ತಂಡದಿಂದ ಕೈಬಿಟ್ಟ ಬಳಿಕ ಈವರೆಗೂ ಯಾರೂ ನನ್ನನ್ನು ಸಂಪರ್ಕಿಸಿಲ್ಲ’ ಎಂದಿದ್ದಾರೆ. 

ಇದನ್ನು ಓದಿ: ಕರುಣ್ ನಾಯರ್‌ಗೆ ಕೊಕ್-ನಾಯಕ ವಿರಾಟ್ ಕೊಹ್ಲಿ ಹೇಳಿದ್ದೇನು?

ವಿಜಯ್ ಹೇಳಿಕೆಗೆ ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್.ಕೆ.ಪ್ರಸಾದ್ ಅಚ್ಚರಿ ವ್ಯಕ್ತಪಡಿಸಿದ್ದು, ‘ಈ ಆರೋಪಗಳೆಲ್ಲಾ ಸುಳ್ಳು’ ಎಂದಿದ್ದಾರೆ. ವಿಜಯ್ ಆರೋಪಕ್ಕೆ ಬಿಸಿಸಿಐ ಅಧಿಕಾರಿಗಳು ಸಹ ಬೇಸರ ವ್ಯಕ್ತಪಡಿಸಿದ್ದಾರೆ.

Follow Us:
Download App:
  • android
  • ios