ನಾವು ಕೋರ್ಟ್ ಹೇಳಿದಂತೆ ಆದಷ್ಟು ಶೀಘ್ರದಲ್ಲಿಯೇ ಹೊಸ ವ್ಯವಸ್ಥೆಯನ್ನು ಜಾರಿಗೆ ತರಲಿದ್ದೇವೆ ಎಂದು ರೈ ನುಡಿದಿದ್ದಾರೆ.

ಮುಂಬೈ(ಮಾ.04): ಲೋಧಾ ಸಮಿತಿ ಶಿಫಾರಸು ಮಾಡಿರುವ ಸುಧಾರಣೆಗಳನ್ನು ಬಿಸಿಸಿಐ ಮುಂದಿನ ನಾಲ್ಕೈದು ತಿಂಗಳಲ್ಲಿ ಸಂಪೂರ್ಣವಾಗಿ ಜಾರಿಗೆ ತರಲಿದೆ ಎಂದು ಸುಪ್ರೀಂ ಕೋರ್ಟ್'ನಿಂದ ನೂತನವಾಗಿ ಆಯ್ಕೆಯಾಗಿರುವ ಆಡಳಿತಾಧಿಕಾರಿ ವಿನೋದ್ ರೈ ಹೇಳಿದ್ದಾರೆ.

Add Asianetnews Kannada as a Preferred SourcegooglePreferred

ನಾವು ಕೋರ್ಟ್ ಹೇಳಿದಂತೆ ಆದಷ್ಟು ಶೀಘ್ರದಲ್ಲಿಯೇ ಹೊಸ ವ್ಯವಸ್ಥೆಯನ್ನು ಜಾರಿಗೆ ತರಲಿದ್ದೇವೆ ಎಂದು ರೈ ನುಡಿದಿದ್ದಾರೆ.

ಲೋಧಾ ಸಮಿತಿ ಶಿಪಾರಸು ಅನುಷ್ಟಾನ ಮಾಡಲು ಮೀನಾಮೇಷ ಎಣಿಸಿದ ಬಿಸಿಸಿಐ ಮಂಡಳಿಯ ಅಧ್ಯಕ್ಷ ಹಾಗೂ ಕಾರ್ಯದರ್ಶಿಯನ್ನು ವಜಾಮಾಡಿ ಸುಪ್ರೀಂ ಕೋರ್ಟ್ ಜನವರಿಯಲ್ಲಿ ನಾಲ್ವರು ಸದಸ್ಯರನ್ನೊಳಗೊಂಡ ಆಡಳಿತ ಮಂಡಳಿಯನ್ನು ರಚಿಸಿದೆ.