ಚೆನ್ನೈ ಸೂಪರ್ ಕಿಂಗ್ಸ್ ತಂಡದಿಂದ ಮೇಜರ್ ಆಟಗಾರ ಔಟ್ :ಕಪ್ ಗೆಲ್ಲುವ ತಂಡಕ್ಕೆ ದೊಡ್ಡ ಪೆಟ್ಟು, ದೊಡ್ಡ ನಷ್ಟ ಎಂದ ಕೋಚ್ ಹಸ್ಸಿ
ಮುಂಬೈ ಇಂಡಿಯನ್ಸ್ ವಿರುದ್ಧದ ಉದ್ಘಾಟನಾ ಪಂದ್ಯದಲ್ಲಿ 13ನೇ ಓವರ್'ನಲ್ಲಿ ಬ್ಯಾಟ್ ಮಾಡುವಾಗ ಗಾಯದ ಸಮಸ್ಯೆಯಿಂದ ನಿವೃತ್ತಿ ಹೊಂದಿದ್ದರು. ನಮ್ಮ ತಂಡಕ್ಕೆ ದೊಡ್ಡ ನಷ್ಟ.
ಚೆನ್ನೈ(ಏ.09): ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಈ ಬಾರಿ ದೊಡ್ಡ ಪಟ್ಟು ಬಿದ್ದಿದೆ. ಮಂಡಿಯ ಸ್ನಾಯುವಿನ ನೋವಿನಿಂದಾಗಿ ಪ್ರಮುಖ ಬ್ಯಾಟ್ಸ್'ಮೆನ್ ಕೇದಾರ್ ಜಾಧವ್ ಈ ಬಾರಿಯ ಐಪಿಎಲ್ ಟೂರ್ನಿಯಿಂದ ಹೊರಗುಳಿದಿದ್ದಾರೆ.
ಮುಂಬೈ ಇಂಡಿಯನ್ಸ್ ವಿರುದ್ಧದ ಉದ್ಘಾಟನಾ ಪಂದ್ಯದಲ್ಲಿ 13ನೇ ಓವರ್'ನಲ್ಲಿ ಬ್ಯಾಟ್ ಮಾಡುವಾಗ ಗಾಯದ ಸಮಸ್ಯೆಯಿಂದ ನಿವೃತ್ತಿ ಹೊಂದಿದ್ದರು. ನಮ್ಮ ತಂಡಕ್ಕೆ ದೊಡ್ಡ ನಷ್ಟ. ಮಧ್ಯಮ ಕ್ರಮಾಂಕದ ಪ್ರಮುಖ ಬ್ಯಾಟ್ಸ್'ಮೆನ್ ತಂಡದಿಂದ ಹೊರಗುಳಿಯುತ್ತಿರುವುದು ತುಂಬಲಾರದ ನಷ್ಟ ಎಂದು ಸಿಎಸ್'ಕೆ ಬ್ಯಾಟಿಂಗ್ ಕೋಚ್ ಮೈಖಲ್ ಹಸ್ಸಿ ಹೇಳಿದ್ದಾರೆ.
ಚೆನ್ನೈ ತಂಡ ನಾಳೆ (ಏ.10) ಕೋಲ್ಕತ್ತಾ ತಂಡವನ್ನು ಎದುರಿಸಲಿದೆ.