12ನೇ ಶ್ರೇಯಾಂಕಿತ ಶ್ರೀಕಾಂತ್ ಸೋಲಿನೊಂದಿಗೆ ಟೂರ್ನಿಯಲ್ಲಿ ಭಾರತದ ಸವಾಲು ಅಂತ್ಯ ಕಂಡಂತಾಗಿದೆ.

ಜರ್ಮನಿ(ಮಾ.03): ಜರ್ಮನ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲಬೇಕೆಂಬ ಭಾರತದ ಯುವ ಆಟಗಾರ ಕಿಡಾಂಬಿ ಶ್ರೀಕಾಂತ್‌'ಗೆ ಭ್ರಮನಿರಸನವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಗುರುವಾರ ತಡರಾತ್ರಿ ನಡೆದ ಪ್ರಿಕ್ವಾರ್ಟರ್‌'ಫೈನಲ್ ಸೆಣಸಾಟದಲ್ಲಿ ಹಾಲಿ ಒಲಿಂಪಿಕ್ ಚಾಂಪಿಯನ್, ಚೀನಾದ ಚೆನ್ ಲಾಂಗ್ ವಿರುದ್ಧ ದಿಟ್ಟ ಹೋರಾಟದ ಹೊರತಾಗಿಯೂ 19-21, 20-22ರ ಎರಡು ನೇರ ಗೇಮ್‌'ಗಳಲ್ಲಿ ಶ್ರೀಕಾಂತ್ ಸೋಲನೊಪ್ಪಿಕೊಂಡರು. 47 ನಿಮಿಷಗಳ ಎರಡೂ ಗೇಮ್‌'ಗಳು ರೋಚಕತೆಯ ಗೂಡಾಗಿತ್ತು. ಆದರೆ, ಆಕ್ರಮಣಕಾರಿ ಚೆನ್ ಲಾಂಗ್, ಕಡೆಗೂ ವಿಜಯಶಾಲಿಯಾದರು.

12ನೇ ಶ್ರೇಯಾಂಕಿತ ಶ್ರೀಕಾಂತ್ ಸೋಲಿನೊಂದಿಗೆ ಟೂರ್ನಿಯಲ್ಲಿ ಭಾರತದ ಸವಾಲು ಅಂತ್ಯ ಕಂಡಂತಾಗಿದೆ.