Asianet Suvarna News Asianet Suvarna News

ಅಂತರಾಷ್ಟ್ರೀಯ ಅಥ್ಲೀಟ್, ಕನ್ನಡಿಗ ಅರ್ಜುನ್ ದೇವಯ್ಯ ಕಾರು ಅಪಘಾತ

ಇಂದು ಮುಂಜಾನೆ ಈ ಅವಘಡ ಸಂಭವಿಸಿದ್ದು, ಮೈಸೂರು ಜಿಲ್ಲೆಯ ಬಿಳಿಕೆರೆ ಬಳಿ ಕಾರು ಅಪಘಾತವಾಗಿದೆ. ಬೆಳಗಿನಜಾವ ತುಂಬಾ ಮಂಜು ಕವಿದಿದ್ದರಿಂದ ತಿರುವಿನಲ್ಲಿ ರಸ್ತೆ ಕಾಣದೇ ರಸ್ತೆ ವಿಭಜಕಕ್ಕೆ ಕಾರು ಡಿಕ್ಕಿಹೊಡೆದಿದೆ.

International Athlete Arjun Devaiah car Accident
Author
Bengaluru, First Published Nov 27, 2018, 4:10 PM IST

ಬೆಂಗಳೂರು[ನ.27]: ಮಡಿಕೇರಿಯಿಂದ ಬೆಂಗಳೂರಿಗೆ ಬರುತ್ತಿದ್ದ ಅಥ್ಲೀಟ್ ಅರ್ಜುನ್ ದೇವಯ್ಯ ಅವರ ಕಾರು ಅಪಘಾತವಾಗಿದ್ದು, ಅರ್ಜುನ್ ತಲೆಗೆ, ಪತ್ನಿ ದಿವ್ಯಾ ಕೈಗೆ ತೀವ್ರವಾಗಿ ಪೆಟ್ಟಾಗಿದ್ದು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಆಸ್ಫತ್ರೆಗೆ ದಾಖಲಿಸಲಾಗಿದೆ.

ಇಂದು ಮುಂಜಾನೆ ಈ ಅವಘಡ ಸಂಭವಿಸಿದ್ದು, ಮೈಸೂರು ಜಿಲ್ಲೆಯ ಬಿಳಿಕೆರೆ ಬಳಿ ಕಾರು ಅಪಘಾತವಾಗಿದೆ. ಬೆಳಗಿನಜಾವ ತುಂಬಾ ಮಂಜು ಕವಿದಿದ್ದರಿಂದ ತಿರುವಿನಲ್ಲಿ ರಸ್ತೆ ಕಾಣದೇ ರಸ್ತೆ ವಿಭಜಕಕ್ಕೆ ಕಾರು ಡಿಕ್ಕಿಹೊಡೆದಿದೆ. ಕಾರಿನಲ್ಲಿ ಅರ್ಜುನ್ ದೇವಯ್ಯ, ಪತ್ನಿ ದಿವ್ಯಾ, ಪುತ್ರ ಅಭಿಮನ್ಯು ಸೇರಿ ಒಟ್ಟು ಐವರು ಇದ್ದರು. ಈ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಅರ್ಜುನ್ ಹಾಗೂ ದಿವ್ಯಾ ಅವರಿಗೆ ಗಂಭೀರ ಆಗಿದ್ದು, ಈ ಸಂಬಂಧ ಬಿಳಿಕರೆ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. 

Follow Us:
Download App:
  • android
  • ios