ನವದೆಹಲಿ(ಅ.06): ಇದೇತಿಂಗಳು 16ರಿಂದಆರಂಭವಾಗಲಿರುವನ್ಯೂಜಿಲೆಂಡ್ ವಿರುದ್ಧದಐದುಏಕದಿನಪಂದ್ಯಸರಣಿಯಮೊದಲಮೂರುಪಂದ್ಯಗಳಿಗೆಭಾರತತಂಡವನ್ನುಪ್ರಕಟಿಸಲಾಗಿದ್ದು, ರಾಜ್ಯದಪ್ರತಿಭಾನ್ವಿತಬ್ಯಾಟ್ಸ್ಮನ್ ಮನೀಶ್ ಪಾಂಡೆತಂಡದಲ್ಲಿಸ್ಥಾನಉಳಿಸಿಕೊಳ್ಳುವಲ್ಲಿಯಶಸ್ವಿಯಾಗಿದ್ದಾರೆ.
ಜಿಂಬಾಬ್ವೆವಿರುದ್ಧದಸರಣಿಗೆಆಯ್ಕೆಯಾಗಿದ್ದಮನೀಶ್ ಪಾಂಡೆಯನ್ನುಹೊರತುಪಡಿಸಿದರೆ, ಕಿವೀಸ್ ವಿರುದ್ಧದಈಸರಣಿಗೆರಾಜ್ಯದಮಿಕ್ಕಯಾವಆಟಗಾರರೂಅವಕಾಶಪಡೆದಿಲ್ಲ.
ಎಂ.ಎಸ್.ಕೆ. ಪ್ರಸಾದ್ ನೇತೃತ್ವದಆಯ್ಕೆಸಮಿತಿಮೊಟ್ಟಮೊದಲಬಾರಿಗೆಪ್ರಕಟಿಸಿದಹದಿನೈದುಮಂದಿಆಟಗಾರರಪೈಕಿಹರ್ಯಾಣಮೂಲದಆಫ್ಸ್ಪಿನ್ನರ್ ಜಯಂತ್ ಯಾದವ್ ಮಾತ್ರಹೊಸಮುಖವಾಗಿದ್ದರೆ, ಜಿಂಬಾಬ್ವೆವಿರುದ್ಧದಏಕದಿನಸರಣಿಯಿಂದವಿಶ್ರಾಂತಿಪಡೆದಿದ್ದಸುರೇಶ್ ರೈನಾತಂಡಕ್ಕೆವಾಪಸಾಗಿದ್ದಾರೆ.
ಇನ್ನುಳಿದಂತೆಮಧ್ಯಮವೇಗಿಜಸ್ಟ್ರೀತ್ ಬುಮ್ರಾ, ಮನ್ದೀಪ್ ಸಿಂಗ್ ಮತ್ತುಕೇದಾರ್ ಜಾಧವ್ ತಂಡಕ್ಕೆಸೇರ್ಪಡೆಗೊಂಡಿದ್ದರೆ, ಎಡಗೈಆಟಗಾರಗೌತಮ್ ಗಂಭೀರ್ಗೆಆಯ್ಕೆಸಮಿತಿಅವಕಾಶಕಲ್ಪಿಸಿಲ್ಲ.
‘‘ಆಯ್ಕೆಪ್ರಕ್ರಿಯೆನಡೆಯುವಾಗಗಂಭೀರ್ ಹೆಸರುಪ್ರಸ್ತಾಪವಾಯಿತು. ಆಸ್ಪ್ರೇಲಿಯಾವಿರುದ್ಧದಸರಣಿಯಲ್ಲಿಆರಂಭಿಕನಾಗಿಭವ್ಯಪ್ರದರ್ಶನನೀಡಿದ್ದಮನ್ದೀಪ್ ಸಿಂಗ್ ಇದೇಹಾದಿಯಲ್ಲಿಇನ್ನಷ್ಟು ಅನುಭವಪಡೆಯಲುಅವರಿಗೆಅವಕಾಶಕಲ್ಪಿಸಲುನಿರ್ಧರಿಸಲಾಯಿತು. ಇನ್ನುತವರಿನಲ್ಲಿನಡೆಯಲಿರುವ 13 ಟೆಸ್ಟ್ಗಳಹಿನ್ನೆಲೆಯಲ್ಲಿಅಶ್ವಿನ್, ಜಡೇಜಾಹಾಗೂಮೊಹಮದ್ ಶಮಿಗೆವಿಶ್ರಾಂತಿನೀಡಲುನಿರ್ಧರಿಸಲಾಯಿತು’’ ಎಂದುಪತ್ರಿಕಾಗೋಷ್ಠಿಯಲ್ಲಿಆಯ್ಕೆ ಸಮಿತಿಮುಖ್ಯಸ್ಥಎಂ.ಎಸ್.ಕೆ. ಪ್ರಸಾದ್ ತಿಳಿಸಿದರು.
ಕಿವೀಸ್ ವಿರುದ್ಧದಐದುಏಕದಿನಪಂದ್ಯಸರಣಿಅ. 16ರಂದುಧರ್ಮಶಾಲಾದಲ್ಲಿಆರಂಭವಾಗಿ, ಅ.20ರಂದುದೆಹಲಿ, 23ರಂದುಮೊಹಾಲಿ, 26ರಂದುರಾಂಚಿಹಾಗೂವಿಶಾಖಪಟ್ಟಣದಲ್ಲಿ 29ರಂದುನಡೆಯಲಿರುವಕೊನೆಯಪಂದ್ಯದೊಂದಿಗೆಮುಕ್ತಾಯಕಾಣಲಿದೆ.
ತಂಡಇಂತಿದೆ
ಎಂ.ಎಸ್. ಧೋನಿ (ನಾಯಕ), ರೋಹಿತ್ ಶರ್ಮಾ, ಅಜಿಂಕ್ಯರಹಾನೆ, ವಿರಾಟ್ ಕೊಹ್ಲಿ, ಮನೀಶ್ ಪಾಂಡೆ, ಸುರೇಶ್ ರೈನಾ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಜಯಂತ್ ಯಾದವ್, ಅಮಿತ್ ಮಿಶ್ರಾ, ಜಸ್ಟ್ರೀತ್ ಬುಮ್ರಾ, ಧವಳ್ ಕುಲಕರ್ಣಿ, ಉಮೇಶ್ ಯಾದವ್, ಮನ್ದೀಪ್ ಸಿಂಗ್ ಮತ್ತುಕೇದಾರ್ ಜಾಧವ್.
