Asianet Suvarna News Asianet Suvarna News

ಅರ್ಜುನ ಪ್ರಶಸ್ತಿ ಸಿಗದಿದ್ದಕ್ಕೆ ಹರೀಂದರ್ ಸಂಧು ಬೇಸರ

‘ನಾನು ಈ ಬಾರಿ ವಿಶ್ವಾಸದಿಂದಿದ್ದೆ. ಪ್ರಶಸ್ತಿ ಪಡೆಯುವ ಅರ್ಹತೆಯೂ ನನಗಿತ್ತು. ಆದರೆ ನನ್ನನ್ನು ಕಡೆಗಣಿಸಿರುವುದು ನೋವುಂಟು ಮಾಡಿದೆ’

I Deserved Arjuna This Time Says Squash Player Harinder Pal Sandhu

ನವದೆಹಲಿ(ಆ.21): ಮೂರನೇ ಬಾರಿಗೆ ಅರ್ಜುನ ಪ್ರಶಸ್ತಿ ಕೈತಪ್ಪಿದ್ದಕ್ಕೆ ಸ್ಕ್ವಾಶ್ ಆಟಗಾರ ಹರೀಂದರ್ ಪಾಲ್ ಸಂಧು ಬೇಸರ ವ್ಯಕ್ತಪಡಿಸಿದ್ದಾರೆ.

2014ರ ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ಸಂಧು ‘ನಾನು ಈ ಬಾರಿ ವಿಶ್ವಾಸದಿಂದಿದ್ದೆ. ಪ್ರಶಸ್ತಿ ಪಡೆಯುವ ಅರ್ಹತೆಯೂ ನನಗಿತ್ತು. ಆದರೆ ನನ್ನನ್ನು ಕಡೆಗಣಿಸಿರುವುದು ನೋವುಂಟು ಮಾಡಿದೆ’ ಎಂದು ಹೇಳಿದ್ದಾರೆ.

ನನಗೆ ಬೇರೆ ಆಯ್ಕೆಯಿಲ್ಲ. ಪ್ರಶಸ್ತಿ ವಿಜೇತರ ಹೆಸರನ್ನು ಕ್ರೀಡಾ ಇಲಾಖೆ ಪ್ರಕಟಗೊಳಿಸಿದೆ. ಮುಂದಿನ ವರ್ಷ ಮತ್ತೆ ಅರ್ಜಿ ಸಲ್ಲಿಸುತ್ತೇನೆ ಎಂದು ಅವರು ಹೇಳಿದ್ದಾರೆ.

9 ಪಿಎಸ್‌'ಎ ಪ್ರಶಸ್ತಿಗಳನ್ನು ಗೆದ್ದಿರುವ ಸಂಧು, ಏಷ್ಯನ್ ಗೇಮ್ಸ್‌'ನಲ್ಲಿ ಭಾರತ ಚಿನ್ನ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

Follow Us:
Download App:
  • android
  • ios