9ನೇ ರಾಷ್ಟ್ರೀಯ ಪುರುಷರ ಡಿವಿಜನ್ ಹಾಕಿ ಟೂರ್ನಿಯಲ್ಲಿ ಕರ್ನಾಟಕ ಅತ್ಯುತ್ತಮ ಪ್ರದರ್ಶನದ ಮೂಲಕ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. ಎಸ್.ವಿ.ಸುನಿಲ್ ನೇತೃತ್ವದ ಕರ್ನಾಟಕ ರಾಜ್ಯ ತಂಡ ಇದೀಗ ರೈಲ್ವೇಸ್ ವಿರುದ್ದ ಹೋರಾಟ ನಡೆಸಲಿದೆ.
ಗ್ವಾಲಿಯರ್(ಫೆ.07): ಇಲ್ಲಿ ನಡೆಯುತ್ತಿರುವ 9ನೇ ರಾಷ್ಟ್ರೀಯ ಪುರುಷರ ‘ಎ’ ಡಿವಿಜನ್ ಹಾಕಿ ಚಾಂಪಿಯನ್ಶಿಪ್ನಲ್ಲಿ ಗುರುವಾರದಿಂದ ನಾಕೌಟ್ ಹಂತ ಆರಂಭಗೊಳ್ಳಲಿದೆ. ‘ಡಿ ಗುಂಪಿನಿಂದ ಕ್ವಾರ್ಟರ್ ಫೈನಲ್ ಪ್ರವೇಶಿಸಿರುವ ಕರ್ನಾಟಕ, ಸೆಮಿಫೈನಲ್ಗೇರಲು ಭಾರತೀಯ ರೈಲ್ವೇಸ್ ವಿರುದ್ಧ ಸೆಣಸಲಿದೆ.
ಇದನ್ನೂ ಓದಿ: 10 ಮಂದಿ ಡಕೌಟ್ - ತಂಡ 10ಕ್ಕೆ ಆಲೌಟ್!
ಗುಂಪು ಹಂತದಲ್ಲಿ ಕರ್ನಾಟಕ, ಆಡಿದ 4 ಪಂದ್ಯಗಳಲ್ಲಿ 3ರಲ್ಲಿ ಜಯ ಸಾಧಿಸಿತು. ಮೊದಲ ಪಂದ್ಯದಲ್ಲಿ ಏರ್ ಇಂಡಿಯಾ ವಿರುದ್ಧ 1-6 ಗೋಲುಗಳಲ್ಲಿ ಸೋಲುಂಡು ಆಘಾತಕ್ಕೊಳಗಾಗಿದ್ದ ತಂಡ, ಬಳಿಕ ಸತತ 3 ಪಂದ್ಯಗಳಲ್ಲಿ ಗೆದ್ದು ನಾಕೌಟ್ ಪ್ರವೇಶಿಸಿತು. 4 ಪಂದ್ಯಗಳಿಂದ ವಿ. ಆರ್. ರಘುನಾಥ್ 5 ಗೋಲು ಗಳಿಸಿದ್ದು ಉತ್ತಮ ಲಯದಲ್ಲಿದ್ದಾರೆ. ಟೂರ್ನಿಯಲ್ಲಿ ಎಸ್.ವಿ.ಸುನಿಲ್ ರಾಜ್ಯ ತಂಡವನ್ನು ಮುನ್ನಡೆಸುತ್ತಿದ್ದಾರೆ.
