ಗೌತಿ ಬಿಟ್ಟ ನಾಯಕ ಕೊಹ್ಲಿ ಧವನ್ ಆಯ್ಕೆ ಮಾಡಿದ್ದೇಕೆ..?
ಕೊಲ್ಕತ್ತಾ(ಅ.01): ಶಿಖರ್ ಧವನ್ ಟೆಸ್ಟ್ ಕೆರಿಯರ್ ಕ್ಲೋಸ್ ಆಗ್ತಿದೆ ಅನಿಸ್ತಿದೆ. ಕೋಲ್ಕತ್ತಾ ಟೆಸ್ಟ್ನಲ್ಲೂ ವಿಫಲರಾಗೋ ಮೂಲಕ ಭಾರೀ ಟೀಕೆಗೆ ಗುರಿಯಾಗಿದ್ದಾರೆ. ಇನ್ನು ಐತಿಹಾಸಿಕ ಟೆಸ್ಟ್ನಲ್ಲಿ ಪ್ರತಿಭೆಗಿಂತ ಸ್ನೇಹಕ್ಕೆ ವಿರಾಟ್ ಕೊಹ್ಲಿ ಮಣೆಹಾಕಿ ಕೈ ಸುಟ್ಟುಕೊಂಡಿದ್ದಾರೆ.
ನಾಯಕನಾದೋನು ಯಾವುದೇ ಮುಲಾಜಿಗೆ ಒಳಗಾಗದೆ ಸ್ನೇಹವಿರಲಿ, ಒಂದೇ ರಾಜ್ಯದವರಿರಲಿ. ಪ್ರದರ್ಶನಕಷ್ಟೇ ಮಹತ್ವ ಕೊಡ್ಬೇಕು. ಆದರೆ ನ್ಯೂಜಿಲೆಂಡ್ ವಿರುದ್ಧದ 2ನೇ ಟೆಸ್ಟ್ನ 11ರ ಬಳಗದ ಆಯ್ಕೆಯಲ್ಲಿ ನಾಯಕ ವಿರಾಟ್ ಕೊಹ್ಲಿ ಖಂಡಿತಾ ಎಡವಿದ್ದಾರೆ.
ಫಾರ್ಮ್ ಕೊರತೆ ಎದುರಿಸುತ್ತಿರುವ ಶಿಖರ್ ಧವನ್ ಈವರೆಗೂ ಸ್ಥಿರ ಪ್ರದರ್ಶನ ನೀಡಿದ ಉದಾಹರಣೆಯೇ ಇಲ್ಲ. ಹೀಗಾಗಿ ಸ್ವತಃ ಕೊಹ್ಲಿಯೇ ಮೊದಲ ಟೆಸ್ಟ್ನಿಂದ ಡ್ರಾಪ್ ಮಾಡಿದ್ರು. ಆದರೆ, ರಾಹುಲ್ ಗಾಯಾಳುವಾಗಿದ್ರಿಂದ 2ನೇ ಟೆಸ್ಟ್ನಲ್ಲಿ ಧವನ್ಗೆ ಚಾನ್ಸ್ ನೀಡಿ ವಿರಾಟ್ ಕೈ ಸುಟ್ಟುಕೊಂಡಿದ್ದಾರೆ.
ಧವನ್ ಕಥೆ ಗೊತ್ತಿದಕ್ಕೆ ಆಯ್ಕೆ ಸಮಿತಿ, 2 ವರ್ಷಗಳ ಬಳಿಕ ಗೌತಮ್ ಗಂಭೀರ್ಗೆ ಬುಲಾವ್ ನೀಡಿತ್ತು. ಗೌತಿ ಆಯ್ಕೆಯಾಗುತ್ತಲೇ 2ನೇ ಟೆಸ್ಟ್ ಓಪನರ್ ಅವರೇ ಅಂತಾನೂ ಊಹಿಸಲಾಗಿತ್ತು. ಆದರೆ, ವಿಜಯ್ ಜೊತೆ ಈಡನ್ನಲ್ಲಿ ಕಣಕ್ಕೆ ಇಳಿದಿದ್ದು ಮತ್ತದೇ ಫಾರ್ಮ್ ಕೊರತೆ ಎದುರಿಸುತ್ತಿದ್ದ ಧವನ್. ಇದು ಎಲ್ಲರಿಗೂ ಅಚ್ಚರಿ ಮೂಡಿಸಿದ್ದು ಸುಳ್ಳಲ್ಲ.
ಎಲ್ಲರೂ ಆಶ್ಚರ್ಯಕ್ಕೊಳಗಾಗುವಂತೆ ಅಂತಿಮ 11ರೊಳಗೆ ಸೇರಿಕೊಂಡಿದ್ದ ಶಿಖರ್ ನಾಯಕನ ನಂಬಿಕೆಯನ್ನು ಉಳಿಸಿಕೊಳ್ಳಲಿಲ್ಲ. ಕೊಹ್ಲಿ ಲೆಕ್ಕಾಚಾರವನ್ನು ಧವನ್ ಉಲ್ಟಾ ಮಾಡಿದರು. ಹೊಸ ಬಾಲ್ ಎದುರಿಸುವಲ್ಲಿ ವಿಫಲರಾದ ಗಬ್ಬರ್ ಸಿಂಗ್, ಕೇವಲ 1 ರನ್ಗೆ ನಿರ್ಗಮಿಸಿದರು.
ಕಳೆದ 12 ಇನ್ನಿಂಗ್ಸ್ಗಳಿಂದ ಧವನ್ ದಾಖಲಿಸಿರೋದು ಕೇವಲ 289 ರನ್ಗಳನ್ನು ಮಾತ್ರ. ಅದರಲ್ಲೂ 8 ತವರಿನ ಇನ್ನಿಂಗ್ಸ್ಗಳನ್ನು ಆಡಿದ್ದಾರೆ. ಇಷ್ಟಾಗಿಯೂ ಕಳಪೆ ಪ್ರದರ್ಶನ ಮುಂದುವರೆದಿದೆ. ಇನ್ನು ಧವನ್ ಪಾಲಿಗೆ ಇನ್ನೊಂದು ಇನ್ನಿಂಗ್ಸ್ ಬಾಕಿ ಇದ್ದು, ಅದು ಕಡೆಯ ಅವಕಾಶವಾಗುವ ಸಾಧ್ಯತೆ ಹೆಚ್ಚಿದೆ. ಇಲ್ಲೇನಾದ್ರೂ ಶಿಖರ್ ಫೇಲ್ ಆದ್ರೆ, ಟೆಸ್ಟ್ ವೃತ್ತಿ ಬದುಕು ಬಹುತೇಕ ಅಂತ್ಯವಾಗಲಿದೆ.
ಗಂಭೀರ್ ಬೆಂಚ್ ಕಾಯುವಂತೆ ಮಾಡಿದ್ದು ವಿರಾಟ್ ಅನ್ನೊದರಲ್ಲಿ ಎರಡು ಮಾತಿಲ್ಲ. ಗೌತಿ ಎದುರು ಧವನ್ ಏನೇನೂ ಇಲ್ಲ. ಅನುಭವದಿಂದ ಹಿಡಿದು ಸರಾಸರಿ ಬ್ಯಾಟಿಂಗ್ವರೆಗೂ ಗಂಭೀರ್ ಬೆಸ್ಟ್. ಇಷ್ಟಾಗಿಯೂ ಗೌತಿ ಬೆಂಚ್ ಕಾಯುವಂತೆ ಮಾಡಿದರು ಕೊಹ್ಲಿ.
ಕೊಹ್ಲಿ ಹಾಗೂ ಗೌತಿ ಸಂಬಂಧ ಉತ್ತಮವಾಗಿ ಇಲ್ಲ. ಧವನ್-ವಿರಾಟ್ ಚಿಕ್ಕವರಿಂದಲೂ ಸ್ನೇಹಿತರು. ಸ್ನೇಹಕ್ಕೆ ಮಣೆ ಹಾಕಿದ ವಿರಾಟ್ ಪ್ರತಿಭೆಯನ್ನು ದೂರ ಇಟ್ಟು ಎಡವಿರೋದು ಸುಳ್ಳಲ್ಲ ಅನ್ನಿಸುತ್ತೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟೀಕೆಗಳು ಕೂಡ ಬಂದಿವೆ.