ಕೊರೋನಾದಂತಹ ಸಂಕಷ್ಟದ ಸಮಯದಲ್ಲಿ ಕ್ರೀಡಾ ಇಲಾಖೆಯ ಈ ಕಟು ನಿರ್ಧಾರದಿಂದ ತರಬೇತುದಾರರ ಕುಟುಂಬ ಬೀದಿಗೆ ಬಿದ್ದಿದೆ ಎಂದು  ಫೆನ್ಸಿಂಗ್‌ ಕೋಚ್‌ ಎಂ.ಲಕ್ಷ್ಮೀಶ ಉಪವಾಸ ಸತ್ಯಾಗ್ರಹ ನಡೆಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಬೆಂಗಳೂರು(ಡಿ.18): 2018ರಲ್ಲಿ ಗುತ್ತಿಗೆ ಆಧಾರದ ಮೇಲೆ ಕ್ರೀಡಾ ಇಲಾಖೆಗೆ ತರಬೇತುದಾರರಾಗಿ ನೇಮಕವಾಗಿದ್ದ ಫೆನ್ಸಿಂಗ್‌ ಕೋಚ್‌ ಎಂ.ಲಕ್ಷ್ಮೀಶ, ಗುರುವಾರ ಬೆಳಗ್ಗೆಯಿಂದಲೇ ಕ್ರೀಡಾ ಇಲಾಖೆ ಕಟ್ಟಡದ ಎದುರು ಉಪವಾಸ ಸತ್ಯಾಗ್ರಹ ನಡೆಸಿದರು. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೊರೋನಾದಂತಹ ಸಂಕಷ್ಟದ ಸಮಯದಲ್ಲಿ ಇಲಾಖೆಯ ಈ ಕಟು ನಿರ್ಧಾರದಿಂದ ತರಬೇತುದಾರರ ಕುಟುಂಬ ಬೀದಿಗೆ ಬಿದ್ದಿದೆ ಎಂದು ಕೋಚ್‌ ಲಕ್ಷ್ಮೇಶ ‘ಕನ್ನಡಪ್ರಭ’ ದೊಂದಿಗೆ ಅಳಲು ತೋಡಿಕೊಂಡರು. ಆ ಬಳಿಕ ಸ್ಥಳಕ್ಕಾಗಮಿಸಿದ ಆಯುಕ್ತ ಶ್ರೀನಿವಾಸ್‌, ಸಮಸ್ಯೆ ಬಗೆಹರಿಸಲು 10 ದಿನಗಳ ಕಾಲಾವಕಾಶ ಕೋರಿದ್ದಾರೆ. ಹೀಗಾಗಿ ಕೋಚ್‌ ಎಂ.ಲಕ್ಷ್ಮೀಶ ಸತ್ಯಾಗ್ರಹವನ್ನು ಕೈ ಬಿಟ್ಟಿದ್ದಾರೆ.

2018ರ ಮಾರ್ಚ್‌ನಲ್ಲಿ ಲಕ್ಷ್ಮೇಶರನ್ನು ನೇಮಕಾತಿ ಮಾಡಲಾಗಿತ್ತು. 1 ವರ್ಷದ ಬಳಿಕ 2019ರ ಮಾರ್ಚ್‌ನಲ್ಲಿ ಕರ್ತವ್ಯದಿಂದ ತೆಗೆದು ಹಾಕಲಾಗಿದೆ. ಆ ನಂತರದ ದಿನಗಳಲ್ಲಿ ಕೆಲಸಕ್ಕಾಗಿ ಎಂ.ಲಕ್ಷ್ಮೀಶ ಎಲ್ಲೆಡೆ ಅಲೆದಿದ್ದಾರೆ. ಆದರೆ ಎಲ್ಲೂ ಕೆಲಸ ಸಿಕ್ಕಿಲ್ಲ. ಇದೀಗ 2020ರಲ್ಲೂ ಕ್ರೀಡಾ ಇಲಾಖೆ ಗುತ್ತಿಗೆ ಆಧಾರದಲ್ಲಿ ಕೋಚ್‌ ನೇಮಕಾತಿಗೆ ಮುಂದಾಗಿದೆ. ಹೀಗೆ ಹೊಸ ಕೋಚ್‌ಗಳನ್ನು ತೆಗೆದುಕೊಳ್ಳುವುದಕ್ಕಿಂತ ಈ ಹಿಂದಿನ ಕೋಚ್‌ಗಳನ್ನೇ ಮುಂದುವರಿಸಬೇಕು ಎಂದು ಎಂ.ಲಕ್ಷ್ಮೀಶ ಆಗ್ರಹಿಸಿದರು. ಲಕ್ಷ್ಮೀಶ ಚಾಮರಾಜನಗರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

ವಿದಾಯದಿಂದ ಯುವರಾಜ್ ಸಿಂಗ್ ವಾಪಸ್, ಕೇರಳ ತಂಡಕ್ಕೆ ಶ್ರೀಶಾಂತ್ ಕಮ್‌ಬ್ಯಾಕ್!

ಈ ಸಂಬಂಧ ಕ್ರೀಡಾ ಸಚಿವ ಸಿ.ಟಿ. ರವಿ ಅವರಿಗೆ ತಿಂಗಳ ಹಿಂದೆಯೇ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿಕೊಳ್ಳಲಾಗಿತ್ತು. ಆದರೆ ಈ ಬಗ್ಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಕ್ರೀಡಾ ಇಲಾಖೆ 2019ರ ಅಕ್ಟೋಬರ್‌ನಲ್ಲಿ ಕೂಡಾ ಕೋಚ್‌ಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಿಕೊಂಡಿದೆ. ಆ ಕೋಚ್‌ಗಳನ್ನು 2020ರ ಅಕ್ಟೋಬರ್‌ನಲ್ಲಿ ತೆಗೆದು ಹಾಕಿದೆ. ಇದೀಗ ರಾಜ್ಯದಲ್ಲಿನ ಸುಮಾರು 74 ತರಬೇತುದಾರರು ಬೀದಿಗೆ ಬಂದಿದ್ದಾರೆ ಎಂದು ಎಂ.ಲಕ್ಷ್ಮೀಶ ಹೇಳಿದರು.