Asianet Suvarna News Asianet Suvarna News

Wrestlers Protest: ಕುಸ್ತಿ​ಪ​ಟು​ಗಳ ಬೆನ್ನಿಗೆ ನಿಂತ ರೈತರು!

ಕುಸ್ತಿಪಟುಗಳ ಬೆಂಬಲಕ್ಕೆ ನಿಂತ ರೈತರು
ನ್ಯಾಯ ಸಿಗುವ ವರೆಗೂ ಹೋರಾಟ: ರೈತ ನಾಯಕರು
ಬ್ರಿಜ್‌ಭೂಷಣ್‌ ಬಂಧನಕ್ಕೆ ಆಗ್ರಹಿಸಿ ರಾಷ್ಟ್ರಪತಿಗೆ ಪತ್ರ
 

Farmers step up protest in support of wrestlers to meet President Draupadi Murmu kvn
Author
First Published Jun 2, 2023, 9:45 AM IST

ನವ​ದೆ​ಹ​ಲಿ(ಜೂ.02): ಭಾರ​ತೀಯ ಕುಸ್ತಿ ಫೆಡ​ರೇ​ಶ​ನ್‌​(​ಡ​ಬ್ಲ್ಯು​ಎ​ಫ್‌​ಐ​) ಅಧ್ಯಕ್ಷ ಬ್ರಿಜ್‌​ಭೂ​ಷಣ್‌ ಸಿಂಗ್‌ ವಿರು​ದ್ಧ ಕುಸ್ತಿ​ಪ​ಟು​ಗ​ಳಿಗೆ ನ್ಯಾಯ ಸಿಗು​ವ​ವ​ರೆಗೂ ಹೋರಾಟ ಮುಂದು​ವ​ರಿ​ಯ​ಲಿದೆ ಎಂದು ರೈತ ನಾಯ​ಕರು ಘೋಷಿ​ಸಿ​ದ್ದಾ​ರೆ.

ಕುಸ್ತಿ​ಪ​ಟು​ಗಳ ಜಂತ​ರ್‌​ಮಂತ​ರ್‌​ನ ಹೋರಾಟ ಭಾರೀ ಹೈಡ್ರಾ​ಮ​ದೊಂದಿಗೆ ಕೊನೆ​ಗೊಂಡ ಬಳಿಕ ಉತ್ತರ ಪ್ರದೇ​ಶದ ಮುಜಾ​ಫರ್‌ ನಗ​ರ​ದಲ್ಲಿ ರೈತ ನಾಯ​ಕರು ‘ಮಹಾ ಪಂಚಾ​ಯ​ತ್‌’ ಹೆಸ​ರಿ​ನಲ್ಲಿ ಹೋರಾಟ ಆರಂಭಿ​ಸಿ​ದ್ದಾರೆ. ಪಂಜಾಬ್‌, ಹರ್ಯಾಣ, ರಾಜ​ಸ್ಥಾನ, ದೆಹಲಿ ಸೇರಿ​ದಂತೆ ವಿವಿಧ ಕಡೆ​ಗಳ ರೈತರು ಮಹಾ​ಪಂಚಾ​ಯ​ತ್‌​ನಲ್ಲಿ ಪಾಲ್ಗೊಂಡಿದ್ದು, ಮತ್ತೆ ಪ್ರತಿಭಟಿಸಲು ಅನುಮತಿ ನೀಡುವಂತೆ ಕೋರಿ ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ಮನವಿ ಸಲ್ಲಿ​ಸಲು ಮತ್ತು ಬ್ರಿಜ್‌​ಭೂ​ಷ​ಣ್‌​ರನ್ನು ಬಂಧಿ​ಸು​ವಂತೆ ಆಗ್ರಹಿಸಲು ನಿರ್ಧರಿ​ಸಿ​ದ್ದಾ​ರೆ. ಅಲ್ಲದೇ ಕುಸ್ತಿ​ಪ​ಟು​ಗ​ಳಿಗೆ ನ್ಯಾಯ ಸಿಗು​ವ​ವ​ರೆಗೂ ಹೋರಾಟ ಮುಂದು​ವ​ರಿ​ಯ​ಲಿದೆ ಎಂದು ಸ್ಪಷ್ಟ​ಪ​ಡಿ​ಸಿ​ದ್ದಾ​ರೆ. ಮಂಗ​ಳ​ವಾರ ಹರಿ​ಧ್ವಾ​ರ​ದಲ್ಲಿ ಗಂಗಾ ನದಿಗೆ ಪದಕ ಎಸೆ​ಯು​ವು​ದ​ರಿಂದ ಹಿಂದೆ ಸರಿ​ದಿದ್ದ ಕುಸ್ತಿ​ಪ​ಟು​ಗಳು, ಬ್ರಿಜ್‌ ಬಂಧಿ​ಸಲು ಸರ್ಕಾ​ರ​ಕ್ಕೆ 5 ದಿನದ ಗಡುವು ನೀಡಿ​ದ್ದರು.

ಸರ್ಕಾ​ರ​ದಿಂದ ಸೂಕ್ಷ್ಮ ನಡೆ: ಸಚಿವ ಠಾಕೂರ್‌

ಕುಸ್ತಿ​ಪ​ಟು​ಗಳ ಪ್ರಕರಣವನ್ನು ಕೇಂದ್ರ ಸರ್ಕಾರ ಸೂಕ್ಷ್ಮ​ವಾಗಿ ನಿಭಾ​ಯಿ​ಸು​ತ್ತಿ​ದೆ ಎಂದು ಕೇಂದ್ರ ಕ್ರೀಡಾ ಸಚಿವ ಅನು​ರಾಗ್‌ ಠಾಕೂರ್‌ ಹೇಳಿ​ದ್ದಾ​ರೆ. ಈ ಬಗ್ಗೆ ಗುರು​ವಾರ ಮಾಧ್ಯ​ಮ​ಗ​ಳಿಗೆ ಪ್ರತಿ​ಕ್ರಿಯೆ ನೀಡಿ​ರುವ ಅವ​ರು, ಕುಸ್ತಿ​ಪ​ಟು​ಗಳ ಎಲ್ಲಾ ಬೇಡಿ​ಕೆ​ ಪೂರೈ​ಸ​ಲಾ​ಗಿದೆ. ಪೊಲೀ​ಸ​ರು ದೋಷಾ​ರೋಪ ಪಟ್ಟಿಸಲ್ಲಿ​ಸಿದ ಕೂಡಲೇ ಮುಂದಿನ ಕ್ರಮ ಕೈಗೊ​ಳ್ಳ​ಲಿ​ದ್ದೇವೆ ಎಂದಿ​ದ್ದಾರೆ. ಅಲ್ಲದೇ ಪ್ರಕ​ರ​ಣ​ದಲ್ಲಿ ರಾಜ​ಕೀಯ ಮಾಡು​ತ್ತಿ​ರು​ವ​ವರ ಬಗ್ಗೆ ಠಾಕೂರ್‌ ಕಿಡಿ​ಕಾ​ರಿದ್ದು, ‘ಕಾ​ನೂನು ಎಲ್ಲ​ರಿಗೂ ಸಮಾನ ಮತ್ತು ಎಲ್ಲಾ ಕ್ರೀಡಾ​ಪ​ಟು​ಗಳು ನಮಗೆ ಅಗ​ತ್ಯ. ಮೋದಿ ಸರ್ಕಾರ ಕ್ರೀಡೆಯ ಬಜೆಟ್‌ ಹೆಚ್ಚಿ​ಸಿದೆ. ಇದು ಯಾರಿಗೂ ಗೊತ್ತಿ​ಲ್ಲದ ಸಂಗ​ತಿ​ಯೇ​ನ​ಲ್ಲ’ ಎಂದು ಕುಟು​ಕಿ​ದ್ದಾ​ರೆ.

ಕಿರಿಯರ ಏಷ್ಯಾ​ಕಪ್‌ ಹಾಕಿ: ಪಾಕಿಸ್ತಾನ ಮಣಿಸಿದ ಭಾರತ ಚಾಂಪಿ​ಯ​ನ್‌

ಕುಸ್ತಿ​ಪ​ಟು​ಗಳ ಹೇಳಿಕೆ ಬದಲಾಗುತ್ತಿದೆ: ಬ್ರಿಜ್‌

ತಮ್ಮ ವಿರು​ದ್ಧದ ಆರೋ​ಪ​ಗಳ ಬಗ್ಗೆ ಬ್ರಿಜ್‌​ಭೂ​ಷಣ್‌ ಪ್ರತಿ​ಕ್ರಿ​ಯಿ​ಸಿದ್ದು, ಕುಸ್ತಿ​ಪ​ಟು​ಗಳು ನಿರಂತ​ರ​ವಾಗಿ ತಮ್ಮ ಆರೋಪ, ಬೇಡಿ​ಕೆ​ಗ​ಳನ್ನು ಬದ​ಲಾ​ಯಿ​ಸು​ತ್ತಲೇ ಇದ್ದಾರೆ ಎಂದಿದ್ದಾರೆ. ‘ಪ್ರತಿ​ಭ​ಟನೆ ಆರಂಭಿ​ಸಿ​ದಾಗ ಇದ್ದ ಬೇಡಿಕೆ ಕೆಲ ದಿನ​ಗ​ಳಲ್ಲೇ ಬದ​ಲಾ​ಯಿ​ಸಿ​ದರು. ಬಳಿಕ ಬೇರೆ ಬೇರೆ ಬೇಡಿ​ಕೆ​ಗ​ಳ​ನ್ನಿ​ಡಲು ಶುರು ಮಾಡಿ​ದರು. ನಾನು ಯಾವಾಗ, ಎಲ್ಲಿ, ಏನು ಮಾಡಿ​ದ್ದೇನೆ ಎಂದು ಕುಸ್ತಿ​ಪ​ಟು​ಗ​ಳಲ್ಲಿ ಕೇಳಿ​ದರೂ ನಿರ್ದಿ​ಷ್ಟ ಉತ್ತರ ನೀಡಿಲ್ಲ’ ಎಂದು ಕಿಡಿ​ಕಾ​ರಿದ್ದು, ತಪ್ಪು ಸಾಬೀ​ತಾ​ದರೆ ನೇಣಿ​ಗೇ​ರು​ವು​ದಾಗಿ ಪುನ​ರು​ಚ್ಚ​ರಿ​ಸಿ​ದ್ದಾ​ರೆ.

ಸರ್ಫಿಂಗ್‌: ಕಿಶೋ​ರ್‌, ದಿನೇ​ಶ್‌ಗೆ ಜಯ

ಮಂಗ​ಳೂ​ರು: ಇಲ್ಲಿನ ಸಸಿಹಿತ್ಲುವಿನ ಮುಂಡಾ ಬೀಚ್‌ನಲ್ಲಿ ಗುರುವಾರ ಆರಂಭವಾದ 4ನೇ ಇಂಡಿಯನ್‌ ಓಪನ್‌ ಸರ್ಫಿಂಗ್‌ ಚಾಂಪಿಯನ್‌ಶಿಪ್‌ನ ಮೊದಲ ದಿನ ಕರ್ನಾ​ಟಕ, ತಮಿಳುನಾಡಿನ ಸರ್ಫರ್‌ಗಳು ಮೇಲುಗೈ ಸಾಧಿಸಿದ್ದಾರೆ.

ಅಂಡರ್‌-16 ಬಾಲಕರ ವಿಭಾಗದಲ್ಲಿ ಚೆನ್ನೈನ 15 ವರ್ಷದ ಕಿಶೋರ್‌ ಕುಮಾರ್‌(12.67 ಅಂಕ​)ಅತಿ ಹೆಚ್ಚು ಅಂಕ ಗಳಿ​ಸಿದ ಸರ್ಫರ್‌ ಎನಿ​ಸಿದ್ದು, ಪುರು​ಷರ ಮುಕ್ತ ವಿಭಾ​ಗ​ದಲ್ಲಿ ದಿನೇಶ್‌ ಸೆಲ್ವ​ಮ​ಣಿ​ (9.53 ಅಂಕ​) 2ನೇ ಸುತ್ತಿ​ಗೇ​ರಿ​ದರು. ಉಳಿ​ದಂತೆ ತಾಯಿನ್‌ ಅರುಣ್‌(10.83), ಶೇಖರ್‌ ಪಿಚೈ(9), ಹರೀಶ್‌ (8.63), ಸೆಲ್ವಂ ಎಂ.(8.53) ಕೂಡಾ ಗೆಲುವು ಸಾಧಿ​ಸಿ​ದರು. ಒಟ್ಟು 12 ಮಂದಿ ಎರಡನೇ ಸುತ್ತಿಗೆ ಆಯ್ಕೆ​ಯಾ​ಗಿದ್ದು, ಅವರು ಕಳೆದ ಬಾರಿಯ ಪ್ರದ​ರ್ಶ​ನದ ಅಧಾ​ರ​ದಲ್ಲಿ ಈಗಾ​ಗಲೇ 2ನೇ ಸುತ್ತಿ​ಗೇ​ರಿ​ರುವ 16 ಮಂದಿ ಜೊತೆ ಶುಕ್ರ​ವಾರ ಸ್ಪರ್ಧಿ​ಸ​ಲಿ​ದ್ದಾರೆ. ಮಳೆ​ಯಿಂದಾಗಿ ಸಮು​ದ್ರದ ಅಲೆ​ಯಲ್ಲಿ ಏರಿ​ಳಿತ ಕಂಡು​ಬಂದ ಕಾರಣ ಮಹಿಳೆಯರ ಸ್ಪರ್ಧೆಯನ್ನು ಶುಕ್ರವಾರಕ್ಕೆ ಮುಂದೂಡಲಾಗಿದೆ.

Follow Us:
Download App:
  • android
  • ios