Asianet Suvarna News Asianet Suvarna News

'ಈ ಸಲ ಕಪ್ ನಮ್ದೆ' ಎನ್ನುವ ಸರದಿ ಕೆಕೆಆರ್ ತಂಡದ ಕನ್ನಡಿಗರದ್ದು..!

ಬಹುಶಃ ಆರ್’ಸಿಬಿ ಪ್ರಾಂಚೈಸಿ ಕನ್ನಡಿಗರನ್ನು ಕಡೆಗಣಿಸಿದ್ದೇ ಈ ರೀತಿಯ ಹೀನಾಯ ಪ್ರದರ್ಶನಕ್ಕೆ ಕಾರಣವಿರಬಹುದೇನೋ. ಏಕೆಂದರೆ ಕೆ.ಎಲ್ ರಾಹುಲ್, ಮನೀಶ್ ಪಾಂಡೆ, ರಾಬಿನ್ ಉತ್ತಪ್ಪ, ಕೃಷ್ಣಪ್ಪ ಗೌತಮ್, ಶ್ರೇಯಸ್ ಗೋಪಾಲ್, ಪ್ರಸಿದ್ಧ್ ಕೃಷ್ಣ ಅವರು ಪ್ರಸಕ್ತ ಆವೃತ್ತಿಯಲ್ಲಿ ಭರ್ಜರಿ ಪ್ರದರ್ಶನ ತೋರುತ್ತಿದ್ದಾರೆ. ಆದರೆ ಈ ಕನ್ನಡಿಗರು ಆರ್’ಸಿಬಿ ಪ್ರಾಂಚೈಸಿಗೆ ಕಾಣಿಸದೇ ಇದ್ದದ್ದು ಮಾತ್ರ ವಿಪರ್ಯಾಸ.

Ee Sala Cup Namde, say Kolkata Knight Riders boys from Karnataka

ಬೆಂಗಳೂರು[ಮೇ.20]: ’ಈ ಸಲ ಕಪ್ ನಮ್ದೆ’ ಎನ್ನುವ ಛಲದೊಂದಿಗೆ ಕಣಕ್ಕಿಳಿದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಡೆ ರಾಜಸ್ಥಾನ ರಾಯಲ್ಸ್ ಎದುರು ಮುಗ್ಗರಿಸುವ ಮೂಲಕ ಪ್ಲೇ ಆಫ್ ಪ್ರವೇಶಿಸುವ ಮುನ್ನವೇ ಟೂರ್ನಿಯಿಂದ ಹೊರಬಿದ್ದಿದೆ.   
ಬಹುಶಃ ಆರ್’ಸಿಬಿ ಪ್ರಾಂಚೈಸಿ ಕನ್ನಡಿಗರನ್ನು ಕಡೆಗಣಿಸಿದ್ದೇ ಈ ರೀತಿಯ ಹೀನಾಯ ಪ್ರದರ್ಶನಕ್ಕೆ ಕಾರಣವಿರಬಹುದೇನೋ. ಏಕೆಂದರೆ ಕೆ.ಎಲ್ ರಾಹುಲ್, ಮನೀಶ್ ಪಾಂಡೆ, ರಾಬಿನ್ ಉತ್ತಪ್ಪ, ಕೃಷ್ಣಪ್ಪ ಗೌತಮ್, ಶ್ರೇಯಸ್ ಗೋಪಾಲ್, ಪ್ರಸಿದ್ಧ್ ಕೃಷ್ಣ ಅವರು ಪ್ರಸಕ್ತ ಆವೃತ್ತಿಯಲ್ಲಿ ಭರ್ಜರಿ ಪ್ರದರ್ಶನ ತೋರುತ್ತಿದ್ದಾರೆ. ಆದರೆ ಈ ಕನ್ನಡಿಗರು ಆರ್’ಸಿಬಿ ಪ್ರಾಂಚೈಸಿಗೆ ಕಾಣಿಸದೇ ಇದ್ದದ್ದು ಮಾತ್ರ ವಿಪರ್ಯಾಸ.
ಸನ್’ರೈಸರ್ಸ್ ಮಣಿಸಿ ಕೋಲ್ಕತಾ ನೈಟ್’ರೈಡರ್ಸ್ ಪ್ಲೇ ಆಫ್ ಹಂತ ಖಚಿತಪಡಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರವಹಿಸಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ ಈ ಸಲ ಕಪ್ ನಮ್ದೆ ಎಂದಿದ್ದಾರೆ.
ಪಂದ್ಯ ಮುಕ್ತಾಯದ ಬಳಿಕ ರಾಬಿನ್ ಉತ್ತಪ್ಪ ಅವರೊಂದಿಗೆ ಮಾತನಾಡುತ್ತಾ, ಆರ್’ಸಿಬಿ ಪ್ಲೇ ಆಫ್ ಪ್ರವೇಶಿಸಲು ವಿಫಲವಾಗಿದೆ. ಹೀಗಾಗಿ ಕೆಕೆಆರ್ ತಂಡದಲ್ಲಿ ಸಾಕಷ್ಟು ಕನ್ನಡಿಗರಿದ್ದಾರೆ. ಹೀಗಾಗಿ ಕರ್ನಾಟಕದವರು ನಮಗೆ ಸಪೋರ್ಟ್ ಮಾಡಿ. ಈ ಸಲ ಕಪ್ ನಮ್ದೆ ಎಂದು ಹೇಳಿದ್ದಾರೆ.
ಈ ಮೊದಲು ಪಂಜಾಬ್ ಸೂಪರ್’ಕಿಂಗ್ಸ್ ತಂಡದ ಕೆ.ಎಲ್ ರಾಹುಲ್ ಹಾಗೂ ಕರುಣ್ ನಾಯರ್ ಕೂಡಾ ಈ ಸಲ ಕಪ್ ನಮ್ದೆ ಎಂದಿದ್ದು ಸಾಕಷ್ಟು ವೈರಲ್ ಆಗಿತ್ತು.
ಹೀಗಿತ್ತು ಆ ಕ್ಷಣ....

Follow Us:
Download App:
  • android
  • ios