ಈ ಬಾರಿ ಆರ್'ಸಿಬಿ ಅಭಿಮಾನಿಗಳು, 'ಈ ಸಲ ಕಪ್ ನಮ್ದೆ' ಎಂಬ ಘೋಷವಾಕ್ಯದೊಂದಿಗೆ ಆರ್'ಸಿಬಿ ತಂಡವನ್ನು ಬೆಂಬಲಿಸುತ್ತಿದ್ದಾರೆ. ಆದರೆ ಪಂಜಾಬ್ ತಂಡವನ್ನು ಪ್ರತಿನಿಧಿಸುತ್ತಿರುವ ಕರ್ನಾಟಕದ ಪ್ರತಿಭೆಗಳಾದ ಕರುಣ್ ನಾಯರ್ ಲೈವ್'ನಲ್ಲಿ ಅಭಿಮಾನಿಗಳಿಗೆ ಏನು ಹೇಳುತ್ತೀರಾ ಎಂದು ರಾಹುಲ್ ಅವರನ್ನು ಕೇಳುತ್ತಾರೆ. ಆಗ ರಾಹುಲ್ ಈ ಸಲ ಕಪ್ ನಮ್ದೆ ಗುರು. ಹೇಳ್ಬಿಡು ಎಲ್ಲಾರ್ಗೂ ಎಂದು ಉತ್ತರಿಸುತ್ತಾರೆ. ಈ ವೀಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಕನ್ನಡದ ಪ್ರತಿಭೆಗಳಾದ ಕೆ.ಎಲ್ ರಾಹುಲ್, ಕರುಣ್ ನಾಯರ್ ಹಾಗೂ ಮಯಾಂಕ್ ಅಗರ್'ವಾಲ್ ಈ ಬಾರಿ ಐಪಿಎಲ್'ನಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಇದುವರೆಗೂ ಈ ಮೂವರು ಕ್ರಿಕೆಟಿಗರು ಅದ್ಭುತ ಪ್ರದರ್ಶನ ತೋರುವ ಮೂಲಕ ತಂಡವನ್ನು ಅಗ್ರಸ್ಥಾನಕ್ಕೇರುವಂತೆ ಮಾಡಿದ್ದಾರೆ. ಆದರೆ ತಮ್ಮನ್ನು ಆರ್'ಸಿಬಿ ಪ್ರಾಂಚೈಸಿ ರೀಟೈನ್ ಮಾಡಿಕೊಳ್ಳದ್ದನ್ನು ಟ್ರೋಲ್ ಮಾಡಿದ ಕೆ.ಎಲ್ ರಾಹುಲ್ 'ಈ ಸಲ ಕಪ್ ನಮ್ದೆ ಗುರು. ಹೇಳ್ಬಿಡು ಎಲ್ಲಾರ್ಗೂ' ಎಂದು ಹೇಳಿದ್ದಾರೆ.

Add Asianetnews Kannada as a Preferred SourcegooglePreferred

ಈ ಬಾರಿ ಆರ್'ಸಿಬಿ ಅಭಿಮಾನಿಗಳು, 'ಈ ಸಲ ಕಪ್ ನಮ್ದೆ' ಎಂಬ ಘೋಷವಾಕ್ಯದೊಂದಿಗೆ ಆರ್'ಸಿಬಿ ತಂಡವನ್ನು ಬೆಂಬಲಿಸುತ್ತಿದ್ದಾರೆ. ಆದರೆ ಪಂಜಾಬ್ ತಂಡವನ್ನು ಪ್ರತಿನಿಧಿಸುತ್ತಿರುವ ಕರ್ನಾಟಕದ ಪ್ರತಿಭೆಗಳಾದ ಕರುಣ್ ನಾಯರ್ ಲೈವ್'ನಲ್ಲಿ ಅಭಿಮಾನಿಗಳಿಗೆ ಏನು ಹೇಳುತ್ತೀರಾ ಎಂದು ರಾಹುಲ್ ಅವರನ್ನು ಕೇಳುತ್ತಾರೆ. ಆಗ ರಾಹುಲ್ ಈ ಸಲ ಕಪ್ ನಮ್ದೆ ಗುರು. ಹೇಳ್ಬಿಡು ಎಲ್ಲಾರ್ಗೂ ಎಂದು ಉತ್ತರಿಸುತ್ತಾರೆ. ಈ ವೀಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.