ದುಲೀಪ್ ಟ್ರೋಫಿ ಫೈನಲ್: ಭಾರತ ರೆಡ್ ಮೇಲುಗೈ
ಮಳೆ ಹಾಗೂ ಮಂದ ಬೆಳಕಿನ ಅಡಚಣೆಯ ಹೊರತಾಗಿಯು ಮಿಂಚಿನ ಪ್ರದರ್ಶನ ತೋರಿದ ಇಂಡಿಯಾ ರೆಡ್ ತಂಡದ ವೇಗಿ ಜಯದೇವ್ 4 ವಿಕೆಟ್ ಕಬಳಿಸುವ ಮೂಲಕ ಇಂಡಿಯಾ ಗ್ರೀನ್ ಎದುರು ಮೇಲುಗೈ ಸಾಧಿಸಲು ನೆರವಾದರು. ಈ ಕುರಿತಾದ ವರದಿ ಇಲ್ಲಿದೆ ನೊಡಿ..
ಬೆಂಗಳೂರು[ಸೆ.05]: ಜಯದೇವ್ ಉನಾದ್ಕತ್ ಅಮೋಘ ಬೌಲಿಂಗ್ ನೆರವಿನಿಂದ ದುಲೀಪ್ ಟ್ರೋಫಿ ಫೈನಲ್ ಮೊದಲ ದಿನದಾಟದಲ್ಲಿ ಭಾರತ ಗ್ರೀನ್ ವಿರುದ್ಧ ಭಾರತ ರೆಡ್ ಮೇಲುಗೈ ಸಾಧಿಸಿದೆ.
ದುಲೀಪ್ ಟ್ರೋಫಿ ಫೈನಲ್: ಟಾಸ್ ಗೆದ್ದ ಇಂಡಿಯಾ ಗ್ರೀನ್ ಬ್ಯಾಟಿಂಗ್ ಆಯ್ಕೆ
ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಮೊದಲ ದಿನದಾಟದಲ್ಲಿ ಕೇವಲ 49 ಓವರ್ ಆಟ ಮಾತ್ರ ಸಾಧ್ಯವಾಯಿತು. ಮಳೆ ಹಾಗೂ ಮಂದ ಬೆಳಕು ಆಟಕ್ಕೆ ಅಡ್ಡಿಯಾಯಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ ಗ್ರೀನ್, ಮೊದಲ ದಿನದಂತ್ಯಕ್ಕೆ 8 ವಿಕೆಟ್ ನಷ್ಟಕ್ಕೆ 147 ರನ್ ಗಳಿಸಿದೆ.
ಪಾಕ್ ಕ್ರಿಕೆಟ್ ತಂಡಕ್ಕೆ ನೂತನ ಕೋಚ್ ನೇಮಕ..
ವೇಗಿ ಜೈದೇವ್ ಉನಾದ್ಕತ್ 4 ವಿಕೆಟ್ ಕಿತ್ತು ಮಿಂಚಿದರು. ಸ್ಪಿನ್ನರ್ ಮಯಾಂಕ್ ಮರ್ಕಂಡೆ 32 ರನ್ ಗಳಿಸಿ 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಸ್ಕೋರ್:
ಭಾರತ ಗ್ರೀನ್ 49 ಓವರಲ್ಲಿ 147/8
(ಮೊದಲ ದಿನದಂತ್ಯಕ್ಕೆ)