Asianet Suvarna News Asianet Suvarna News

ಗುಂಡಿಬಿದ್ದ ಟ್ರ್ಯಾಕ್‌ನಲ್ಲಿ ದಸರಾ ಕೂಟ!

ಬೆಂಗಳೂರು ನಗರ ವಿಭಾಗ ಮಟ್ಟದ ದಸರಾ ಕ್ರೀಡಾಕೂಟ ನಗರದ ಹೃದಯಭಾಗದಲ್ಲಿರುವ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿದೆ. ಗುಂಡಿಬಿದ್ದ ಸಿಂಥೆಟಿಕ್‌ ಟ್ರ್ಯಾಕ್‌ನಲ್ಲೇ ಕ್ರೀಡಾಪಟುಗಳು ಸ್ಪರ್ಧಿಸಬೇಕಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

Dasara sports events to be held in damaged track of Kanteerava Stadium bengaluru
Author
Bengaluru, First Published Sep 19, 2019, 2:51 PM IST

ಬೆಂಗಳೂರು(ಸೆ.19): ಕಂಠೀರವ ಕ್ರೀಡಾಂಗಣದಲ್ಲಿನ ಗುಂಡಿಬಿದ್ದ ಸಿಂಥೆಟಿಕ್‌ ಟ್ರ್ಯಾಕ್‌ನಲ್ಲಿ ರಾಜ್ಯ ಕ್ರೀಡಾ ಇಲಾಖೆ ಗುರು​ವಾರದಿಂದ 2 ದಿನಗಳ ಕಾಲ ಬೆಂಗಳೂರು ನಗರ ವಿಭಾಗ ಮಟ್ಟದ ದಸರಾ ಕ್ರೀಡಾಕೂಟ ನಡೆಸುತ್ತಿದೆ. ಇದು ಮೈಸೂರು ದಸರಾ ಕ್ರೀಡಾ​ಕೂಟದ ಆಯ್ಕೆ ಟ್ರಯಲ್ಸ್‌.

ಬೆಂಗಳೂರಿನಿಂದ ರಾಷ್ಟ್ರೀಯ ಅಥ್ಲೆಟಿಕ್ಸ್ ರಾಂಚಿಗೆ ಎತ್ತಂಗಡಿ..!

ಅಲ್ಲಲ್ಲಿ ಕಿತ್ತು ಹೋಗಿರುವ ಟ್ರ್ಯಾಕ್‌ಗೆ ಕೆಲ ತಿಂಗಳ ಹಿಂದಷ್ಟೇ ಕ್ರೀಡಾಂಗಣದ ಸಿಬ್ಬಂದಿ ತೇಪೆ ಹಾಕಿ​ದ್ದರು. ಇದೀಗ ಅದೂ ಹಾಳಾ​ಗಿದೆ. ಟ್ರ್ಯಾಕ್‌ನಲ್ಲಿ ದೊಡ್ಡ ಗುಂಡಿ​ಗ​ಳಿ​ದ್ದರೂ, ಅದನ್ನೇ ಬಳ​ಸು​ತ್ತಿ​ರು​ವುದು ಕ್ರೀಡಾ ಇಲಾಖೆಯ ದುಸ್ಥಿ​ತಿ​ಯನ್ನು ತೋರಿ​ಸು​ತ್ತಿದೆ. ಈ ಟ್ರ್ಯಾಕ್‌ನಲ್ಲಿ ಓಡುವಾಗ ಅಥ್ಲೀಟ್‌ಗಳಿಗೆ ಗಾಯ​ವಾ​ದರೆ ಇಲಾಖೆಯ ಹೊಣೆಯಾಗ​ಬೇ​ಕಾದ ಪರಿ​ಸ್ಥಿತಿ ಇದೆ. ಬೆಂಗ​ಳೂ​ರಲ್ಲಿ ಕಂಠೀ​ರವ ಕ್ರೀಡಾಂಗಣ ಹೊರ​ತು​ಪ​ಡಿಸಿ ಉಳಿ​ದೆಲ್ಲೂ ಸಿಂಥೆ​ಟಿಕ್‌ ಟ್ರ್ಯಾಕ್‌ ಇಲ್ಲವೇ ಎನ್ನುವ ಪ್ರಶ್ನೆಗೆ ಈ ಕೂಟ ದಾರಿ ಮಾಡಿ​ಕೊ​ಟ್ಟಿದೆ.

ಸಿಂಥೆಟಿಕ್‌ ಟ್ರ್ಯಾಕ್‌ ಹಾಗೂ ಕಂಠೀರವ ಕ್ರೀಡಾಂಗಣದ ಮೂಲಭೂತ ಸಮಸ್ಯೆಗಳ ಬಗ್ಗೆ ಸುವರ್ಣ ನ್ಯೂಸ್.ಕಾಂ ಸಹೋದರ ಸಂಸ್ಥೆಯಾದ ‘ಕನ್ನಡಪ್ರಭ’ ಇತ್ತೀಚೆಗಷ್ಟೇ ಸರಣಿ ವರದಿ ಪ್ರಕಟಿಸಿ ರಾಜ್ಯ ಸರ್ಕಾರದ ಗಮನಕ್ಕೆ ತಂದಿತ್ತು. ಆ ಸಮಯದಲ್ಲಿ ಎಚ್ಚೆತ್ತುಕೊಂಡಿದ್ದ ಅಧಿಕಾರಿಗಳು ಮೂಲಭೂತ ಸೌಕರ್ಯಗಳನ್ನು ತಿಂಗಳಲ್ಲಿ ಸರಿಪಡಿಸಿದ್ದರು. ಆದರೆ ಟ್ರ್ಯಾಕ್‌ ಮರು ಅಳವಡಿಕೆಗೆ ಹೆಚ್ಚಿನ ಸಮಯ ತೆಗೆ​ದು​ಕೊ​ಳ್ಳ​ಲಾ​ಗು​ತ್ತಿದೆ. ಟೆಂಡರ್‌ ಮೊತ್ತ ನಿರೀಕ್ಷಿಗಿಂತ ಹೆಚ್ಚಾ​ಗ​ಲಿದೆ ಎಂದು ಅಂದಾ​ಜಿ​ಸ​ಲಾ​ಗಿದ್ದು, ಸರ್ಕಾರದ ಗಮ​ನಕ್ಕೆ ತಂದಿ​ದ್ದೇ​ವೆ ಎಂದು ಇಲಾಖೆ ಅಧಿ​ಕಾ​ರಿ​ ‘ಕನ್ನ​ಡ​ಪ್ರಭ’ಕ್ಕೆ ತಿಳಿ​ಸಿ​ದ್ದಾರೆ.
 

Follow Us:
Download App:
  • android
  • ios