ಇತ್ತೀಚೆಗಷ್ಟೇ ಅವರು ಭಾರತ ಅಂಡರ್ -19 ತಂಡದ ಪರ ಆಡಿದ್ದರು. ಭಾರತ ‘ಎ’ ತಂಡದಲ್ಲೂ ಸ್ಥಾನ ಪಡೆಯುವ ಗುರಿ ಹೊಂದಿರುವ ಅರ್ಜುನ್, ಮುಂಬೈನ ಸ್ಥಳೀಯ ಟೂರ್ನಿ ಕೆಸಿ ಮಹೀಂದ್ರಾ ಶೀಲ್ಡ್ ಅಂಡರ್-19 ಪಂದ್ಯದಲ್ಲಿ 6 ವಿಕೆಟ್ ಕಿತ್ತು ಗಮನ ಸಳೆದಿದ್ದಾರೆ.
ಮುಂಬೈ(ನ.03): ಭಾರತ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಪುತ್ರ ಅರ್ಜುನ್, 2019ರ ಐಪಿಎಲ್ ಆಟಗಾರರ ಹರಾಜಿಗೆ ಹೆಸರು ನೋಂದಣಿ ಮಾಡಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಈ ಮೊದಲು ಅರ್ಜುನ್ ಮುಂಬೈ ಇಂಡಿಯನ್ಸ್ ತಂಡ ಕೂಡಿಕೊಳ್ಳಲಿದ್ದಾರೆ ಎಂದು ವರದಿಯಾಗಿತ್ತು. ಆದರೆ ಇದು ಖಚಿತವಾಗಿಲ್ಲ.
ಇತ್ತೀಚೆಗಷ್ಟೇ ಅವರು ಭಾರತ ಅಂಡರ್ -19 ತಂಡದ ಪರ ಆಡಿದ್ದರು. ಭಾರತ ‘ಎ’ ತಂಡದಲ್ಲೂ ಸ್ಥಾನ ಪಡೆಯುವ ಗುರಿ ಹೊಂದಿರುವ ಅರ್ಜುನ್, ಮುಂಬೈನ ಸ್ಥಳೀಯ ಟೂರ್ನಿ ಕೆಸಿ ಮಹೀಂದ್ರಾ ಶೀಲ್ಡ್ ಅಂಡರ್-19 ಪಂದ್ಯದಲ್ಲಿ 6 ವಿಕೆಟ್ ಕಿತ್ತು ಗಮನ ಸಳೆದಿದ್ದಾರೆ.
ಶುಕ್ರವಾರ ವಿಜಯ್ ಮರ್ಚೆಂಟ್ ಇಲೆವೆನ್ ತಂಡದ ಪರ ಆಡಿದ ಅರ್ಜುನ್, ವಿಜಯ್ ಮಾಂಜ್ರೇಕರ್ ಇಲೆವೆನ್ ವಿರುದ್ಧ ಆಕರ್ಷಕ ಬೌಲಿಂಗ್ ಪ್ರದರ್ಶನ ತೋರಿದರು. 2019ರ ಫೆಬ್ರವರಿಯಲ್ಲಿ ಐಪಿಎಲ್ ಆಟಗಾರರ ಹರಾಜು ನಡೆಯುವ ಸಾಧ್ಯತೆ ಇದೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Nov 3, 2018, 10:54 AM IST