ಯುವಕರಿಗೆ ನಾಲ್ಕೈದು ಅವಕಾಶಗಳಷ್ಟೇ..!
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಯುವ ಕ್ರಿಕೆಟಿಗರಿಗೆ ಕಿವಿ ಮಾತೊಂದನ್ನು ಹೇಳಿದ್ದು, ಸಿಕ್ಕ ನಾಲ್ಕೈದು ಅವಕಾಶಗಳಲ್ಲೇ ತಮ್ಮ ಪ್ರತಿಭೆಗಳನ್ನು ಸಾಬೀತು ಪಡಿಸಬೇಕು ಎಂದು ಹೇಳಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಧರ್ಮಶಾಲಾ[ಸೆ.16]: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ, 2020ರ ಟಿ20 ವಿಶ್ವಕಪ್ಗೆ ತಂಡದ ಯೋಜನೆಗಳ ಬಗ್ಗೆ ಸುಳಿವು ನೀಡಿದ್ದು, ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಬೇಕಿದ್ದರೆ ಸಿಗುವ 4ರಿಂದ 5 ಅವಕಾಶಗಳಲ್ಲಿ ಗಮನ ಸೆಳೆಯಬೇಕು ಎಂದಿದ್ದಾರೆ.
ಕೋಟ್ಲಾ ಈಗ ಜೇಟ್ಲಿ ಕ್ರೀಡಾಂಗಣ; ಸಮಾರಂಭದಲ್ಲಿ ಕೊಹ್ಲಿ, ಅಮಿತ್ ಶಾ!
ತಮ್ಮದೇ ಉದಾಹರಣೆ ನೀಡಿರುವ ಕೊಹ್ಲಿ, ತಾವು 2008ರಲ್ಲಿ ಭಾರತ ತಂಡಕ್ಕೆ ಕಾಲಿಟ್ಟಾಗ ಹೆಚ್ಚಿನ ಅವಕಾಶಗಳನ್ನು ನಿರೀಕ್ಷೆ ಮಾಡಿರಲಿಲ್ಲ. ಅದೇ ಮನಸ್ಥಿತಿಯನ್ನು ಯುವ ಆಟಗಾರರೂ ಹೊಂದಿರಬೇಕು ಎಂದಿದ್ದಾರೆ. ‘ಟಿ20 ವಿಶ್ವಕಪ್ಗೂ ಮುನ್ನ ಹೆಚ್ಚೆಂದೆರೆ ನಮಗೆ 30 ಪಂದ್ಯಗಳು ಸಿಗಲಿವೆ. ತಂಡ ತನ್ನ ಉದ್ದೇಶಗಳ ಬಗ್ಗೆ ಸ್ಪಷ್ಟ ನಿಲುವು ಹೊಂದಿದೆ. ಆಟಗಾರರಿಗೆ 4ರಿಂದ 5 ಅವಕಾಶಗಳು ಸಿಗಲಿದ್ದು, ಅದರ ಸದ್ಬಳಕೆ ಮಾಡಿಕೊಳ್ಳಬೇಕಿದೆ. ಆ ಮಟ್ಟದ ಆಟವನ್ನು ನಾವು ಆಡುತ್ತಿದ್ದೇವೆ’ ಎಂದು ಕೊಹ್ಲಿ ಹೇಳಿದ್ದಾರೆ.
ಕೊಹ್ಲಿ-ಸ್ಮಿತ್ ಇಬ್ಬರಲ್ಲಿ ಯಾರು ಬೆಸ್ಟ್..?
‘ತಂಡದಲ್ಲಿ ಸ್ಥಾನ ಪಡೆಯುವ ಆಟಗಾರರ ಮನಸ್ಥಿತಿ ಸದೃಢವಾಗಿರಬೇಕಿದೆ. ಯಾರು ಅವಕಾಶಗಳನ್ನು ಸರಿಯಾಗಿ ಉಪಯೋಗಿಸಿಕೊಳ್ಳುತ್ತಾರೋ ಅವರು ತಂಡದಲ್ಲಿ ಮುಂದುವರಿಯುತ್ತಾರೆ. ಏಕೆಂದರೆ ನಮಗೆ ಹೆಚ್ಚಿನ ಸಮಯವಿಲ್ಲ’ ಎಂದು ಕೊಹ್ಲಿ ಆಟಗಾರರಿಗೆ ಸಂದೇಶ ರವಾನಿಸಿದ್ದಾರೆ. ಟಿ20 ವಿಶ್ವಕಪ್ ಜತೆಗೆ ಭಾರತ ತಂಡ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಕಡೆಗೂ ಗಮನ ಹರಿಸುತ್ತಿರುವುದಾಗಿ ಕೊಹ್ಲಿ ಹೇಳಿದ್ದಾರೆ.
ವೆಸ್ಟ್ಇಂಡೀಸ್ ಪ್ರವಾಸದಿಂದಲೇ ಭಾರತ ತಂಡ ಹಲವು ಪ್ರಯೋಗಗಳನ್ನು ಮಾಡುತ್ತಿದೆ. ಕೆಲ ಹೊಸ ಪ್ರತಿಭೆಗಳಿಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ.